ವಿಷಯಕ್ಕೆ ಹೋಗು

ಪುಟ:YASHODARA CHARITE.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩

ಯಶೋಧರ ಚರಿತೆ


ಆಳುವ ನಿಜವಿಜಯ ತೇಜೋ

ಕಳೆದನೊ ನೃಪತಿ ವಸುಂಧರೆ

ಬಳದಿಂ ಪರನೃಪರ ಗಂಡಗಾಳಿಕೆಯ ನದೇಂ

ಪೊಳಪಂ ತಳೆದೆಯ್ದೆ ರಾಗಮಂ ಬೀರುವಿನಂ 16


ಅಳವಡೆ ಭುಜದೊಳ್ ಮೃಗಮದ

ತಿಳಕದವೊಲ್ ಸಕಲಧರಣಿ ಯೌವನ ಭೂಪಾ

ವಳಿಯನೆ ತಿರ್ದುವನಾ ನೃಪ

ಕುಳಶೇಖರನಮೃತಮತಿಯ ಮುಖದರ್ಪಣಗೊಳ್ 17


ಅವನಿಪನೊರ್ಮೆ ಸಭಾಮಣಿ

ಭವನದಿನಂಬರ ತರಂಗಿಣೀ ಪುಳಿನಮನೇ

ಳುವ ಹಂಸನಂತೆ ಶಯ್ಯಾ

ಧವಳ ಪ್ರಾಸಾದ ತಳಮನೇರಿದನರಸಾ 18

_____

16ಅವನ ವಿಜಯದ ತೇಜಸ್ಸು ಎಲ್ಲ ಕಡೆಗೂ ಪಸರಿಸಿತು. ಇದರ ಬಲದಿಂದ ಅನ್ಯ ನರಪತಿಗಳ ಗಂಡಗಾಳಿಕೆಯೆಲ್ಲ34 ಕಳೆದು ವಸುಂಧರೆ ಉಜ್ವಲತೆಯನ್ನು ತಾಳಿಕೊಂಡಳು; ಯಶೋಧರನಲ್ಲಿ ಬಹಳ ಅನುರಾಗವನ್ನು ಬೀರಿದಳು. 17. ಇಡೀ ಭೂಮಂಡಲವು ಅವನ ಹೆಗಲೇರಿತು. ಆದರೆ ಆ ರಾಜಕುಲಶೇಖರನಿಗೆ ಅದು ಕಸ್ತೂರಿಯ ತಿಲಕದಂತೆ ಅಲಂಕಾರಪ್ರಾಯವಾಗಿತ್ತೇ ಹೊರತು, ಹೊರೆಯಾಗಿರಲಿಲ್ಲ. ತಾರುಣ್ಯದ ಆಭರಣದಂತೆ ಒದಗಿದ ಭೂಮಿಯನ್ನು ಅವನು ಅಮೃತಮತಿಯ ಮುಖದರ್ಪಣದಲ್ಲಿ ತಿದ್ದಿಕೊಳ್ಳುವನು. 18. ಅರಸ, ಒಮ್ಮೆ ಯಶೋಧರನು ರತ್ನಖಚಿತವಾದ ಸಭಾಮಂದಿರದಲ್ಲಿದ್ದವನು, ಅಲ್ಲಿಂದೆದ್ದು ಆಕಾಶಗಂಗೆಯ ಪುಲಿನಸ್ಥಳಕ್ಕೆ ಏರಿ ಹೋಗುವ ಹಂಸದಂತೆ ಶುಭ್ರವಾದ ಪ್ರಾಸಾದವನ್ನೇರಿ ತನ್ನ ಶಯ್ಯಾಗೃಹವನ್ನು ಪ್ರವೇಶಿಸಿದನು.