೭೬
ಯಶೋಧರ ಚರಿತೆ
ಮತ್ತೆ ನೃಪಂ ನಾಯ್ ತಿಂದ ದು
ನೃತ್ಯಚಮತ್ಕಾರನಂ ಮಯೂರನನೆಂದಾ
ನೆತ್ತದ ಮಣೆಯಿಂದಿರೆದೊಡೆ
ನೆತ್ತಿ ಪಿಸುಳ್ದತ್ತು ಸತ್ತುವಂತಾ ಎರಡುಂ 43
ಮರುಗಿದನಿಳೇಶನಾ ಎರ-
ಡರ ಸಾವಿಂ ತಂದೆ ತಾಯ್ವಿರಳೆದಂತಿರೆ ಕ
ಣ್ಣರೆಯದೊಡಂ ಕರುಳರಿಯದೆ
ಮರುಗಿಸದಿರ್ಪುದೆ ಭವಾಂತರವ್ಯಾಮೋಹಂ 44
ಆ ವಿಂಧ್ಯನಗರದೊಳಾ ನಾಯ್
ಪಾವಾಯ್ತಾ ನವಿಲುಮೆಯ್ಯಮೃಗಮಾಯ್ತಾ ಎಯ್
ಪಾವಂ ಪಗೆಮಿಗೆ ತಿಂದುದು ಬಲ್
ಮೇವಂತಿರೆ ಪುಲ್ಲಸರವಿಯಂ ಪುಲಿ ಗೋಣಂ 45
_____
43. ಚಮತ್ಕಾರದ ನರ್ತನವನ್ನು ಮಾಡುವ ಮಯೂರವನ್ನು ಈ ನಾಯಿ ತಿಂದಿತು ಎಂದು ತಡೆಯಲಾರದ ಸಿಟ್ಟು ಬಂತು ರಾಜನಿಗೆ. ಅವನು ಆ ನೆತ್ತದ ಮಣೆಯಿಂದಲೇ ನಾಯಿಯ ತಲೆಯನ್ನು ಬಡಿದನು. ಅದರ ನೆತ್ತಿ ಒಡೆದು ಹಿಸಿಯಿತು. ಅದೂ ಸತ್ತಿತು. 44. ನವಿಲೂ ನಾಯಿಯೂ ಸತ್ತುದನ್ನು ಕಂಡಾಗ ರಾಜನಿಗೆ ತಂದೆ ತಾಯಿಗಳು ತೀರಿಕೊಂಡರೆ ಆಗುವಷ್ಟು ದುಃಖವುಂಟಾಯಿತು. ಕಣ್ಣು ಅರಿಯದಿದ್ದರೂ ಕರುಳು ಅರಿಯುವುದಿಲ್ಲವೆ? ಜನ್ಮಾಂತರದ ವ್ಯಾಮೋಹವು ಈ ರೀತಿ ಮರುಗಿಸದೆ ಇರುವುದಿಲ್ಲ. 45. ಸತ್ತ ನಾಯಿ ವಿಂಧ್ಯ ಪರ್ವತದಲ್ಲಿ ಹಾವಾಗಿ ಹುಟ್ಟಿಕೊಂಡಿತು. ನವಿಲು ಕೂಡ ಅಲ್ಲಿಯೇ ಮುಳ್ಳು ಹಂದಿಯಾಗಿ ಜನ್ಮಪಡೆಯಿತು. ಈ ಮುಳ್ಳು ಹಂದಿ ಹೆಚ್ಚಿದ ಹಗೆಯಿಂದ ಹಾವನ್ನು ಕೊಂದು ತಿಂದಿತು. ಎತ್ತು ಹುಲ್ಲ ಹಗ್ಗವನ್ನು ಮೇಯುವುದು ಇದೇ ರೀತಿ.