೮೪
ಯಶೋಧರ ಚರಿತೆ
ಆಯೆಡೆಗೆ ನೀರುಣಲ್ಬರೆ
ಜಾಯಿಲಮರಸನ ಪಸಾಯಿತಂ ಕೋಡೆರಡುಂ
ಕೋಯೆ ಸೆಳೆದಶ್ವಮಹಿಷ
ನ್ಯಾಯಂ ನಿಲೆ ಕೊಂದುದಂತದಂ ಕೇಳ್ದರಸಂ 67
ಕಡೆಯೊಳ್ ಕೋಣನ ಪೋರ್ಕುಳಿ
ಗಿಡುವಿಗೆ ಮಿತ್ತೆಂಬ ತೆರದೆ ಪರದನ ಬೀಡಂ
ಬಿಡೆ ಸೂರೆಗೊಂಡು ತನ್ನಂ
ಪಿಡಿತರಿಸಿ ವಿಚತ್ರಮಪ್ಪ ಕೊಲೆಯಂ ಕೊಂದಂ 68
ಸೊಡರಿಂ ಮುಡುಪಿಂದಂ ಪಿಂ-
ತಣ ಮುಂತಣ ಕಾಲ್ಗಳಲ್ಲಿ ಬೆಟ್ಟಿಸಿ ದಸಿಯಂ
ನೆಣಮುರ್ಚೆ ಬೆಂಕಿಯಿಂ ಕೆಳ
ಗಣ ಮೆಯ್ಯಿಂದುರುಪಿ ಬರಿಯ ಬಾಡಂ ತೆಗೆದಂ 69
_____
ಕಟ್ಟೆಕಟಿದಂತೆ ಕಾಣುತ್ತಿತ್ತು. 67. ಅರಸನ ಅಚ್ಚುಮೆಚ್ಚಿನ ನಾಯಿಯೂ ಅಲ್ಲಿಗೆ ನೀರು ಕುಡಿಯಲು ಬಂತು.54 ಈ ಕೋಣವು ಅದನ್ನು ತನ್ನೆರಡೂ ಕೊಡುಗಳಿಂದ ತಿವಿದು ಕೊಂದೇಬಿಟ್ಟಿತು. ಇದು ಅಶ್ವ ಮಹಿಷನ್ಯಾಯದಂತೆ ಪರಿಣಮಿಸಿತು. ರಾಜನಿಗೆ ಈ ಸುದ್ದಿ ತಿಳಿಯಿತು. 68. ಕೋಣನ ಕದನ ಕುತೂಹಲವು ಗಿಡಕ್ಕೆ ಮೃತ್ಯು ಎಂಬಂತೆ ರಾಜನು ಆ ವ್ಯಾಪಾರಿಯ ಬೀಡನ್ನೆಲ್ಲ ಸೂರೆ ಮಾಡಿದನು. ಆ ಕೋಣವನ್ನು ಹಿಡಿತರಿಸಿದನು ; ವಿಚಿತ್ರವಾದ ರೀತಿಯಲ್ಲಿ ಅದನ್ನು ಕೊಂದನು. 69. ಅದರ ಹಿಂದಣ ಮತ್ತು ಮುಂದಣ ಕಾಲುಗಳಿಗೆ ದಸಿಯನ್ನು ನಾಟಿಸಲಾಯಿತು. ಅದರ ನೆರವಿನಿಂದ ಅಡಿಮೇಲಾಗಿ ತೂಗಾಡಿಸಿ ಕೆಳಬದಿಯಿಂದ ದೀಪದಜ್ವಾಲೆಯನ್ನು ಕೋಣನ ಹೆಗಲಿನ ಭಾಗಕ್ಕೆ ಹಿಡಿದು ಅಷ್ಟುಭಾಗವನ್ನು ಮಾತ್ರ ಉರಿಸಿಲಾಯಿತು. ಅಲ್ಲಿಂದ ಕೊಬ್ಬು ಹೊರಗೆ ಸ್ರವಿಸತೊಡಗಿತ್ತು. ಅಂತಹ ಕೊಬ್ಬು ತುಂಬಿದ ಮಾಂಸವನ್ನು ಮಾತ್ರ ಅಲ್ಲಿಂದ ತೆಗೆಯಲಾಯಿತು.