ಪುಟ:Yugaantara - Gokaak.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಕಿಶನ್ ಕಿಶೋರ : ಒಳ್ಳೇದು. ನೀನು ಮುಂದೆ ನಡೆ; ಸಾಮಾನು ಗಾಡಿಯಲ್ಲಿ ಹಾಕಿಸು, [ ಜಿ' ಎಂದು ಓಂಪ್ರಕಾಶನು ಹೋಗುತ್ತಾನೆ. ಕಾಂತಿಚಂದ್ರರ ಕಡೆಗೆ ತಿರುಗಿ ಏಳುತ್ತ ಬರುತ್ತೆವೆ, ಕಾಂತಿಚಂದ್ರ ! ಬರುತ್ತವೆ, ರೋಹಿಣಿದೇವಿ ! ನಾನು ಬರಲೊ, ಕಾ:ಮೇಡ್ ಮೃಣಾಲಿನಿ ? ಕಾಂತಿಚಂದ್ರ ! ಇನ್ನೊಮ್ಮೆ ನಾವು ಭಟ್ಟಿಯಾಗುವಷ್ಟರಲ್ಲಿ ಕಾ:ಮೋಡ್ ಮೃಣಾಲಿನಿಯವರಿಗೆ ಗಜರ್‌ಹಲವಾ ತಿನ್ನುವ ರೂಢಿ ಕಲಿಸಿರಿ. ಅವರ ಬಾಯಿ ತುಸು ಸಿಹಿಯಾಗಲಿ ! ಕಾಂತಿಚಂದ್ರ : ನಮಸ್ಕಾರ, ಹೋಗಿ ಬನ್ನಿರಿ. ( ಮೆಲ್ಲನೆ ಕಿಶನ್ ಕಿಶೋರರ ಹತ್ತಿರ ಬಂದು ) ಮೃಣಾಲಿನಿಯ ಮಾತನ್ನು ತಾವು ಮನಸ್ಸಿಗೆ ಹಚ್ಚಿಕೊಳ್ಳ ಬಾರದು. ಆಕೆ ಮಾತನಾಡುವದೇ ಹೀಗೆ. ಆದರೆ ಆಕೆಯ ಹೃದಯ ಶುದ್ಧವಾಗಿದೆ. ಕಿಶನ್ ಕಿಶೋರ : ಛೇ ! ಛೇ ! ಅಷ್ಟು ನನಗೆ ತಿಳಿಯುವದಿಲ್ಲವೆ ? ಅದರ ಬಗ್ಗೆ ಅನ್ಯಥಾ ವಿಚಾರ ಬೇಡ. ಬರುತ್ತೇನೆ. ನಮಸ್ಕಾರ. ರುಕ್ಕಿಣಿದೇವಿ : ( ಬಿಗುವಿನಿಂದ ಕಾಂತಿಚಂದ್ರ-ರೋಹಿಣಿದೇವಿಯವರನ್ನು ನೋಡುತ್ತ ) ಬರುತ್ತೇನೆ, ನಮಸ್ಕಾರ ! ರೋಹಿಣಿದೇವಿ: ( ತುಸು ಹತ್ತಿರ ಬಂದು ಮೆಲ್ಲನೆ) ಮೃಣಾಲಿನಿಯ ಹುಚ್ಚು ಮಾತಿಗೆ ತಾವು ನೊಂದುಕೊಳ್ಳಬಾರದು, ಆಕೆಯ ರೀತಿಯೇ ಹೀಗೆ ನನ್ನ ಮನಸ್ಸನ್ನು ಸಹ ಒಮ್ಮೊಮ್ಮೆ ಹೀಗೆಯೆ ನೋಯಿಸುತ್ತಾಳೆ. ರುಕ್ಕಿಣಿದೇವಿ : ಛೇ ! ಆ ಹುಡುಗಿಯ ಮಾತಿಗೂ ತನಗೂ ಏನು ಸಂಬಂಧ? ಆದರೂ ಈ ಹೊಸ ಪೀಳಿಗೆ ವಿಚಿತ್ರವಾಗಿದೆ. ನಮಸ್ಕಾರ ! ಕೋಸಲೇಂದ್ರ, ನಡೆ ! ಇನ್ನು ತಡಮಾಡಿದರೆ ನೀನು ಇಲ್ಲಿಯೇ ಉಳಿಯ ಬೇಕಾದೀತು ! { ಕಿಶನ್ ಕಿಶೋರ'ರುಕ್ಕಿಣಿದೇವಿಯಕರು ಹೋಗುತ್ತಾರೆ. } ಕೋಸಲೇಂದ್ರ : (ಕಾಂತಿಚಂದ್ರ-ರೋಹಿಣಿದೇವಿಯವರನ್ನುದ್ದೇಶಿಸಿ) ಬರು. ಶೈಕೆ ನಮಸ್ಕಾರ ! ತಾವು ಇನ್ನೂ ಕೆಲವು ದಿನ ದಿಲ್ಲಿಯಲ್ಲಿಯೇ ಇರುವಿರಷ್ಟೆ ?