ಪುಟ:Yugaantara - Gokaak.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩ ಯುಗಾಂತರ ರುಕ್ಕಿಣಿದೇವಿ: ಇನ್ನೂ ದಿಲ್ಲಿಯ ಆಸೆ ನಿನಗೆ ಬಿಟ್ಟಿಲ್ಲ. ಅಂತೆ. ಹೀಗೆ ಹೊಯ್ದಾಡುತ್ತಿದ್ದೀ, ಇನ್ನೂ ಪರಿಪಕ್ವವಾಗಿಲ್ಲ ನಿನ್ನ ಮನಸ್ಸು ! ಕಿಶನ್‌ಕಿಶೋರ : ಎಲ್ಲರ ದೀಪಗಳನ್ನು ಹಚ್ಚಲು ಹೋಗಿ ನನ್ನಂತೆ ನಿನ್ನ ದೀಪವನ್ನೇ ನೀನು ನಂದಿಸಿಕೊಂಡಿಲ್ಲ. ಅಂತೇ ಹೀಗೆ ಮಾತನಾಡುತ್ತೀ ? ಕೋಸಲೇಂದ್ರ: ಈ ರಮ್ಯ ಪ್ರಕೃತಿಯ ಛಿದ್ರ-ಛದ್ಮಗಳು ನಿಮಗಿನ್ನೂ ಗೊತ್ತಾಗಿಲ್ಲ. ಅಂತೇ ಈ ಮಾತು. ಇರಲಿ. ಕಿಶನ್ ಕಿರಜಿ ! ಇದನ್ನು ಒರೆಗೆ ಹಚ್ಚಿ ಬಿಡೋಣ ! ಇನ್ನು ಕೆಲವು ತಿಂಗಳ ಮೇಲೆ ನಾನು ಮತ್ತೆ ಇಲ್ಲಿ ಬರುತ್ತೇನೆ ಆಗ ಇನ್ನೂ ಇದೇ ವಿಚಾರ ನಿಮ್ಮ ತಲೆಯಲ್ಲಿ ಸುಳಿಯುತ್ತಿದ್ದರೆ, ನಾನೂ ನಿಮ್ಮ ಜೊತೆಗೆ ಇಲ್ಲಿ ಇದ್ದು ಬಿಡುತ್ತೇನೆ, ಇದಕ್ಕೆ ಒಪ್ಪಿಗೆಯಷ್ಟೆ ? ರುಕ್ಕಿಣಿದೇವಿ : ಓಹೊ ! ಒಪ್ಪಿಗೆ ! ಕಿಶನ್ ಕಿಶೋರ : ಆಗಬಹುದು. ಇದರಿಂದ ಈಗ ನಿಲ್ಲುವದೇ ಇನ್ನು ಕೆಲವು ತಿಂಗಳ ಮೇಲೆ ನೀನು ಇಲ್ಲಿ ನೆಲಿಸುವಿಯೆಂದು ನಾನು ತಿಳಿಯುತ್ತೇನೆ ! ಕೋಸಲೇಂದ್ರ : ( ನಗುತ್ತ) ಹಾಗೇ ಆಗಲಿ. ಇನ್ನು ನಾಳೆ ಹೊರಡಲು ನನಗೆ ಅಪ್ಪಣೆಯಷ್ಟೆ ? ಕಿಶನ್ ಕಿಶೋರ : : ( ಮುಗುಳು ನಗೆಯಿಂದ) ಅಪ್ಪಣೆಯಿರದಿದ್ದರೆ ನೀನು ಕೇಳುತ್ತೀಯಾ ? { ಒಳಗೆ ಊಟದ ಗಂಟೆಯಾಗುತ್ತದೆ. ] ಓಹೊ ! ಊಟದ ಹೊತ್ತಾಯಿತು. ನಡೆ, ಕೋಸಲೇಂದ್ರ, ಇದೊಂದು ರಾತ್ರಿ ನನ್ನೊಡನೆ ನಿನ್ನ ಮನೋಪಹಾರವಾಗಲಿ, ನಾಳಿನಿಂದ ಚೀಲದಲ್ಲಿ ಅರಳೆ ತುಂಬುವಂತೆ ಹೊಟ್ಟೆಗೆ ಹಾಕುವದಿದ್ದೇ ಇದೆ ! ಊಟವೂ ಇಲ್ಲಿಯ ಸೌಂದರ್ಯೋಪಾಸನೆಯ ಒಂದು ಭಾಗವಾಗಿದೆ. ರುಕ್ಕಿಣಿದೇವಿ : ತುಂಬಿಗಳು ಜೇನನ್ನು ಸವಿಯುವಂತೆ ಇಲ್ಲಿಯ ಸ್ವಚ್ಛಂದ ಜೀವನ ಹೀಗೆಯೇ ನಿಶ್ಚಿಂತನಾಗಲಿ ! [ ಹೊರಡುತ್ತಾರೆ. ತರೆ, ]