ಕೋಪಿಣಿದೇವಿ : ನಮ್ಮ ಮಾತಿನ ತರಹ ಏನೇ ಇರಲಿ, ಆ ಪುಸ್ತಕದಲ್ಲಾ ಗರೂ ಏನು ಬರೆದಿದೆ ಹೇಳು, ಕೇಳಿ ಜಾಣರಾಗುತ್ತೇವೆ ! [ಕಾಂತಿಚಂದ್ರರ ಕಡೆಗೆ ನೋಡಿ ಮುಗುಳುನಗೆ ನಗುವಳು.]
ಮೃಣಾಲಿನಿ : ನನ್ನ ವೇಳೆ ಕಳೆಯುವದಲ್ಲಗೆ ನನ್ನನ್ನು hಳು ಮಾಡುವರು ಬೇರೆ ಬೇಕು. [ಸಿಟ್ಟಿನಿಂದ ಪುಸ್ತಕವನ್ನು ಟೀಕಾ:ಯದ ಮೇಲೆ ಅಪ್ಪಳಿಸುತ್ತಾಳೆ. ಅದರ ಮೇಲಿದ್ದ ಚಹದ ಕಪ್ಪ ಉರಳಿ ಕೆಳಗೆ ಬೀಳುತ್ತವೆ, ಒಡೆಯುತ್ತದೆ.] ಊಂ ! ಇದೇನಾಯಿತು ! ... .... ಆಗಲಿ, ಇದಕ್ಕಾಗಿ ನಾನು ಸಿನ ಕ್ಷಮೆ ಕೇಳುವದಿಲ್ಲ ! ಇದಕ್ಕೆ ನೀವೇ ಕಾರಣ. ನಿಮ್ಮ ನತಿನಿಂದ ಉಂಟಾದ ಬೇಸರದ ಪರಿಣಾಮ ಇದು ! [ಒಡೆದ ತುಣುಕುಗಳನ್ನು ಬಳಿಯ ತೊಡಗುತ್ತಾ.]
ಕಾಂತಿಚಂದ್ರ: ( ನಗುತ್ತ ) ಇರಲಿ ಬಿಡು, ಮೃಣಾತ: ! ಎ ದಯಾರಾಮ! ಇಲ್ಲಿ ಬಾ ! ಇದನ್ನು ಸ್ವಚ್ಛ ಮಾಡು !
[ದಯಾರಾಮನು 'ಜೀ!' ಎಂದು ಓಡುತ್ತ ಬಂದು ಎಲ್ಲ ಬಳಿದು. ಕಂಡು ಟೀಪಾಃಯಿ ಒರೆಸಿ, ಮೃಣಾಲಿನಿಯ ಕಡಗೆ ನೋಡುತ್ತ ಹೋಗುತ್ತಾನೆ]
ಅಲ್ಲ ಮೃಣಾಲಿನಿ ! ಇದು ನಮ್ಮ ಮಾತಿನ ವರಿಣಾಮನಲ್ಲ. ಆ ಕ ನಲ್ಲಿದ್ದ ಚಹದ ಪರಿಣಾಮ, ರಶ್ಯನ್ ಚಹ ಅದು. ನಿನಗೆ ಸ್ಪೆಶಲ್ ಆಗಿ ತಯಾರಿಸಿದ್ದು !
ಮೃಣಾಲಿನಿ : ( ಸಿಟ್ಟಿನಿಂದ ) ನಿಮ್ಮ ಮನೆಯಲ್ಲಿ ರಶ್ಯನ್ ಚರ ಸಿಗುರು ನಾಧ್ಯವೇ ಇಲ್ಲ. ಸಮಾಜವೇ ಪರದೇಶಿಯಾದಾಗ, ಒಂದು ಮೂಲೆಯಲ್ಲಿಯ ಅನಾಥಾಶ್ರಮದ ಅಧ್ಯಕ್ಷರು ಯಾರಾಗಬೇಕು ಎಂದು ಹಗಲಿರುಳು ಹೊಂಚು ಹಾಕುವವರು ನೀವು ! ಕೆಳಗಿನ ವರ್ಗವೆಲ್ಲ ಕೂಳಿಲ್ಲದೆ ಗೋಳಿಡುವಾಗ,---ನಮ್ಮ ಭಾಷಣ ಎಷ್ಟು ಒಳ್ಳೆಯದಾಯಿತಲ್ಲ ! ಎಂದು ಹೊಟ್ಟೆ ತುಂಬ ಹಿಗ್ಗುವವರು ನೀವು ! _
[ಸಿಟ್ಟಿನಿಂದ ಕುರ್ಚಿಯಲ್ಲಿ ಹಿಂದಕ್ಕೆ ಸರಿದು ಕೂಡುವಳು, ಕಾಂತಿಚಂದ್ರ ರೋಹಿಣಿದೇವಿಯರು ನಿಸ್ತೇಜರಾಗಿ ಒಬ್ಬರನ್ನೊಬ್ಬರು ನೋಡುವರು]