ಪುಟ:Yugaantara - Gokaak.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಬನಸಿಲಾಲ : ಇಲ್ಲ, ಕಾ:ಮೋಡ್ ಮೃಣಾಲಿನಿ ! ಈಗ ಸುರುವಾಯಿತು ! ನೀವು ಇಷ್ಟು ತಲ್ಲೀನರಾಗಿ ಓದುತ್ತಿದ್ದ ಆ ಪುಸ್ತಕ ಯಾವುದು ? ಓದುವದು ಮುಗಿದ ಮೇಲೆ ನನಗೆ ಕೆಲವು ದಿನ ಅದನ್ನು ಕೊಡಿರಿ ! ಮೃಣಾಲಿನಿ : ಅವಶ್ಯವಾಗಿ ! ಆದರೆ ಅದು ಸುಲಭವಾಗಿ ತಿಳಿಯಲಾರದು. ಅದರ ಮೇಲೆ ನಿಮಗೊಂದು ಉಪನ್ಯಾಸ ಕೊಡಬೇಕಾದೀತು ! ಬನಸಿಲಾಲ : ಆಗಬಹುದು. ಅದನ್ನು ಯಾರು ಬರೆದಿದ್ದಾರೆ ! ಮೃಣಾಲಿನಿ : ಮಾರ್ಕ್ಸ-ಎಂಜಲ್ಪರ ಪತ್ರವ್ಯವಹಾರ ಇದು. ಬನಸಿಲಾಲ : ಮಾರ್ಕಸ್ ಏನ್ ಜಲಸಾ ? [ ಎಲ್ಲರೂ ನಗುತ್ತಾರೆ. } . ಮೃಣಾಲಿನಿ : ನಿಮಗೆ ಗೊತ್ತಿರುವದು ಜಲಸಾ ಒಂದೇ ! ಅದೂ ನಿಶ್ಚಿತ “ವಿಲ್ಲ. ರೂಪಾಯಿಯ ಸಂಗೀತ ನಿಮ್ಮ ಕಿವಿ ಕಟ್ಟಿದೆ ಅಲ್ಲವೆ ? ಬನಸಿಲಾಲ : ಹೂ ! ! ನಿಮ್ಮಂಥವರ ಸಹವಾಸದಿಂದ ಮಾತ್ರ ನಮ್ಮಲ್ಲಿ ಸುಧಾರಣೆಯಾಗಬೇಕು ! ಬರುತ್ತೇನೆ, ನನಸೋ ! (ಕಾಂತಿಚಂದ್ರ.ರೋಹಿಣಿ ದೇವಿಯರ ಕಡೆಗೆ ಬಿಗುವಿನಿಂದ ನೋಡುತ್ತ ) ನಮಸ್ತೆ ! _f ಹೋಗುತ್ತಾನೆ ಒಂದು ಕ್ಷಣಹೊತ್ತು ಸುಮ್ಮನಿದ್ದು ಎಲ್ಲರೂ ಒಬ್ಬರ

  • ಮೊರೆಯನ್ನೊಬ್ಬರು ನೋಡುತ್ತಾರೆ.] ರೋಹಿಣಿದೇವಿ : ಏನು ಮೃಣಾಲಿನಿ ? ಹೇಗಿತ್ತು ನಮ್ಮ ಧರ್ಮಯುದ್ದ ? ಮೃಣಾಲಿನಿ : ಧರ್ಮಯುದ್ಧ ? ಇದು ಪ್ರತಿಷ್ಠೆಗಳ ತಾಕಲಾಟ. ದುರಭಿ

ಮಾನಗಳ ಗುದುಮುರಿಗೆ !” ರೋಹಿಣಿದೇವಿ : ( ಸರಕ್ಕನೆ ಸರಿದು ನೊಂದ ಧ್ವನಿಯಲ್ಲಿ ಯಾಕೆ ಮಣಾಲಿಸಿ! ಹೀಗೆಯೇ ನೀನು ನಮ್ಮ ಮನಸ್ಸನ್ನು ನೋಯಿಸು ! ನನ್ನ ಹೊಟ್ಟೆ ಯಲ್ಲಿ ಹುಟ್ಟಿದ ಮಗಳಂತೆ ನಿನ್ನನ್ನು ಕಂಡರೆ ನನಗೆ ಪ್ರೀತಿ ಬರುತ್ತದೆ. ಆದರೆ ನಿನ್ನ ಮಾತಿನ ಬಾಣಕ್ಕೆ ಸಿಲುಕಿ ದಿನಂಪ್ರತಿ ನಾನು ಗಾಸಿ ಗೊಳ್ಳುತ್ತೇನೆ ! { ಆಳುಮೋರೆ ಮಾಡುತ್ತಾಳೆ. ] ಕಾಂತಿಚಂದ್ರ : ನಮ್ಮ ಮೇಲೆ ಇಷ್ಟೇಕೆ ಅವಕೃಪೆ, ಮೃಣಾಲಿನಿ !