ಪುಟ:Yugaantara - Gokaak.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಪ್ರವೇಶ ೪, ಕೂಸಲೇಂದ್ರನು ದಿಲ್ಲಿಯಲ್ಲಿಯ ತನ್ನ ಕೋಣೆಯಲ್ಲಿ ಕುಳಿತಿರು ತಾಸೆ, ತಾನು ಕಟ್ಟಿದ ಒಂದು ಕವನವನ್ನು ತನ್ನಷ್ಟಕ್ಕೆ ತಾನು ಹೇಳು ತಿರುತ್ತಾನೆ.} ಕೋಸಲೇಂದ್ರ : ನರ್ಮದೆಯಾ ನಿರ್ಮಲ ಹೊನಲಲ್ಲಿ ಅಮೃತಪುಲಿನವದು ಹೊಳೆಹೊಳೆವಲ್ಲಿ ಬೆಳುದಿಂಗಳಿನೈಸಿರಿ ಕರೆವಲ್ಲಿ ವನಿಯೆ ತಾನೊಲಿದಿರುವಲ್ಲಿ - ಆಡ ಬಾ ! ನೋಡ ಬಾ ! ಹಾಡ ಬಾ ! ಬಾ, ಬಾ, ಬಾ, ಬಾ, ಬಾ ! ಜನವು ವಿರಸವಿರೆ ಬನ ರಸಮಯವು ! ಬವು ಶೂನ್ಯವಿರೆ, ಜನ ನೂತನವು ! ತೂಗುಯ್ಯಲೆಯಂತಾಗಿರೆ ಮನವು ಅದೊಂದು ದಿನ ತೆರೆವುದು ಚಿದ್ರನವು, ತ್ರಿಯ ಬಾ ! ಅಳೆಯು ಬಾ ! ಹೊಳೆಯ ಬಾ ! ಬಾ, ಬಾ, ಬಾ, ಬಾ, ಬಾ ! (ಇಷ್ಟರಲ್ಲಿ ಮೃಣಾಲಿನಿಯು ಕೈಯಲ್ಲಿ ಮಾರ್ಕ್ಸ್-ಏಂಜಲ ಪತ್ರವ್ಯವಹಾರದ ಈ ಪುಸ್ತಕವನ್ನು ಹಿಡಿದುಕೊಂಡು ಬರುತ್ತಾಳೆ. ಓ ಹೋ ಹೋ ಹೋ ಹೋ ! ಬರಬೇಕು, ಬರಬೇಕು, ಕಾ: ಮೆಡ್ ಮೃಣಾಲಿಸಿ ! ನಾನೇ ನಿಮ್ಮನ್ನು ಎಲ್ಲಿ ನೋಡಬೇಕು, ಹೇಗೆ ನೋಡಬೇಕು, ಯಾವಾಗ ನೋಡಬೇಕು ಎಂದು ಆಲೋಚಿಸುತ್ತಿದ್ದೆ, ನೀವೇ ಹೇಳಿ ಕಳಿಸಿ ದ೦ತೆ ಬಂದಿರಿ !