ಪುಟ:Yugaantara - Gokaak.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಬೆರೆತಾಗ ತತ್ಯವು ನೇರವಾಗಿ ಹೃದಯವನ್ನು ಸೇರುತ್ತದೆ. ಅದು ಬರಿ ಬುದ್ಧಿ ಗ್ರಾಹ್ಯವಾಗುವದಿಲ್ಲ; ರಕ್ತದೊಡನೆ ಬೆರೆಯುವದು ! ಮೃಣಾಲಿನಿ : ( ಉತ್ಸಾಹದಿಂದ ) ನಿಮ್ಮ ಇಚ್ಛೆ ಇಷ್ಟು ನೈಜವಾಗಿದ್ದರೆ ನಿಮ್ಮ ಜೊತೆಗೆ ಓದಲು ನನಗೆ ಸಂತೋಷವಿದೆ. ಮಧ್ಯಮ ವರ್ಗದ ಒಬ್ಬ ಉದಿತೋದಿತ ಕವಿಯನ್ನು ಮತಾಂತರಿಸಿದ ಶ್ರೇಯಸ್ಸು ನನಗೆ ಬರುವ ದಿದ್ದರೆ,- ಏಕೆ ಬೇಡವೆನ್ನಲಿ ! ಒಂದು ಮಾತು, ಕವಿವಯ್ಯರೆ! ಆ ಗ್ರಂಥ ಗಳನ್ನು ಓದಿದಾಗ ನಿಮ್ಮ ಕಾವ್ಯ ಜೀವನದಲ್ಲಿ ಕ್ರಾಂತಿಯಾಗುವದು. ನಿಮ್ಮ ತತ್ವಮಂದಿರವೆಲ್ಲ ಕಳಚಿ ಬಿದ್ದು ಅದರ ಹಾಳಿನೊಳಗಿಂದ ಇನ್ನೊಂದು ಉಜ್ವಲ ಕಟ್ಟಡವೇಳುವದು, ಬರಲಿರುವ ಕ್ರಾಂತಿಯ ವೈತಾಳಿಕರಾಗುವಿರಿ ನೀವು ! ಕೋಸಲೇಂದ್ರ : (ಎಳೆನಗೆಯಿಂದ ಮೇಜಿನ ಮೇಲಿನ ಒಂದು ಚಿಕ್ಕ ಹೊತ್ತಿಗೆ ಯನ್ನು ತೆಗೆದು ಕೊಂಡು) ಏನೇನಾಗುವದೋ ನೋಡೋಣ, ಕಾ:ಮೈಡ್ ಮೃಣಾಲಿನಿ ! ಮೊನ್ನೆ ಮೊನ್ನೆ ಶ್ಯಾ ಫೆಲ್ ಆಲ್ಬರ್ತೈ ಎಂಬ ಸ್ಪಾನಿಶ್ ಕವಿಯ ಕೆಲವು ಕವನಗಳನ್ನು ಓದುತ್ತಿದ್ದೆ. ಅವುಗಳಲ್ಲಿ ಒಂದರ ಕೆಲವು ಚರಣಗಳಿವು ! A spectre is haunting Europe, The world. We call him Comrade! ನಿಮ್ಮನ್ನು ನೋಡಿದಂದಿನಿಂದ ಒಂದು ಹೊಸ ಚೈತನ್ಯವು ನನ್ನ ಕಣ್ಣು ಕಟ್ಟಿದೆ. I call that, Comrade Mrunalini ! ಮೃಣಾಲಿಸಿ: ಏನು ! ಆಲ್ಬರ್ತೈನ ಕವನಗಳನ್ನು ಓದಿದ್ದೀರಾ ! ತೀರ ಈಚೆಗಿನ ಪ್ರಕಟನೆ ಅದು. ಕೋಸಲೇಂದ್ರ : ಇಂಥ ಕಾವ್ಯವನ್ನು ಆಗೀಗ ಓದುತ್ತಿರುತ್ತೇನೆ. ಅದಿರಲಿ, ಕಾ:ಮೈಡ್ ಮೃಣಾಲಿನಿ, ವಾರಕ್ಕೊಂದು ಸಲ ನಮ್ಮ ಪಾಠ ನಿಶ್ಚಿತವಾಯಿ ತಲ್ಲ! ಇನ್ನು ನೀನೇ ಇಲ್ಲಿಗೆ ಬರುವಿರಾ? ಏನು ನಾನೇ ನಿಮ್ಮಲ್ಲಿಗೆ ಬರಲೊ?