ಪುಟ:Yugaantara - Gokaak.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

40 ಯುಗಾಂತ 3 ಮೃಣಾಲಿನಿ: ನಮಸ್ತೆ, ಬನಸಿಲಾಲ : ನಿಮ್ಮ ಪುಸ್ತಕ ಬರಲಿಲ್ಲವಲ್ಲ ? ಈಗ ಇಲ್ಲಿ ಕವಿಗಳಿಗೂ ಪಾಠ ಹೇಳುವುದು ನಡೆದಿದೆಯೇನು ? ಮೃಣಾಲಿನಿ : ಕವಿಗಳಿಗೂ ಹೇಳುತ್ತೇನೆ; ಕಸಿಗಳಿಗೂ ಹೇಳುತ್ತೇನೆ. ನನ್ನಲ್ಲಿ ಭೇದಭಾವವಿಲ್ಲ. ( ಎಲ್ಲರೂ ನಗುತ್ತಾರೆ. ) ಬನಸಿಲಾಲ : ಕಾ:ಮೈಡ್ ಮೃಣಾಲಿನಿಯವರು ವಿನೋದಪ್ರಿಯರು. ಅವರ ಮಾತು ಯಾವಾಗಲೂ ಸ್ವಾರಸ್ಯಮಯವಾಗಿರುತ್ತದೆ. ಕೋಸಲೇಂದ್ರ : ಹೌದು, ಸೇಡ್ ! ಅಂತೇ ಇನ್ನು ಮೇಲೆ ನಾನೂ ವಾರ ಕ್ಕೊಂದು ಸಲ ಅವರಿಂದ ಪಾಠ ಹೇಳಿಸಿಕೊಳ್ಳಬೇಕೆಂದಿದ್ದೇನೆ ! ಬನಸಿಲಾಲ : ಓಹೊ ! ವಾರಕ್ಕೊಂದು ಸಲವೆ ? ಹಾಗಾದರೆ, ಕಾ:ಿಡ್ ಮೃಣಾಲಿನಿಯವರೆ, ನನ್ನ ಸಲುವಾಗಿ ನಿಮಗೆ ಹೆಚ್ಚಿನ ತೊಂದರೆ ಏಕೆ ? ಕೋಸಲೇಂದ್ರಬಾಬುಗಳ ಪಾಠ ಮುಗಿಯಲಿ. ಆಮೇಲೆ ನಮ್ಮದನ್ನು ಪ್ರಾರಂಭಿಸೋಣ, ಕೋಸಲೇಂದ್ರ : ( ನಗುತ್ತ ) ಇದೊಳ್ಳೆಯ ಯುಕ್ತಿ ! ಕಾಮೆಡ್ ಮಣಾ ಲಿನಿಯವರ ಕೈಯೊಳಗಿಂದ ಪಾರಾಗಲು ನೀವು ಒಳ್ಳೆಯ ಹಂಚಿಕೆ ಹಾಕಿ ದಿರಿ ! ಆದರೆ, ಸೇಠಿ, ನೀವು ನೆನಪಿಡಬೇಕು. ಅವರ ಪಾಠಗಳನ್ನು ಕೇಳದೆ ಹೋದರೆ ನಿಮಗೆ ನಿಮ್ಮ ಚಟುವಟಿಕೆಗಳಲ್ಲಿ ಅವರ ಸಹಕಾರ ಸಿಗ ಲಾರದು ! ಬನಸಿಲಾಲ : ಹೃ ! ಹೈ ! – ! ಈ ಮಾತಿನಿಂದ ನೆನಪಾಯಿತು. ಇಂಥ ಸಹಕಾರ ಕೇಳಲೆಂದೇ ನಾನು ಈಗ ಬಂದಿದ್ದೇನೆ. ಕೋಸಲೇಂದ್ರ : ಯಾವುದರಲ್ಲಿ ? ನೀವು • ಸಹಕಾರ ” ಎಂದ ಕೂಡಲೆ ನನ್ನ ಮೈಮೇಲಿನ ಕೂದಲು ನೆಟ್ಟಗಾಗುತ್ತವೆ! ಬನಸಿಲಾಲ : ಹೌ ! – ! ಒಳ್ಳೇ ತಮಾಷೆ ! ನೀವು ಅಂಜುವ ಕಾರಣವಿಲ್ಲ, ಕೋಸಲೇಂದ್ರಬಾಬು! ಬಡ ವಿದ್ಯಾರ್ಥಿಗಳ ಸಹಾಯಕ್ಕಾಗಿ ಹಣ ಕೂಡಿ ಸಲು ಒಂದು ಸಾಹಿತ್ಯಗೋಷ್ಠಿಯನ್ನು ಏರ್ಪಡಿಸಬೇಕೆಂದಿದ್ದೇನೆ.