ವಿಷಯಕ್ಕೆ ಹೋಗು

ಪುಟ:Yugaantara - Gokaak.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೬

ಯುಗಾಂತರ

ಕೋಸಲೇಂದ್ರ : ನೋಡೋಣ. ಅದನ್ನೆಲ್ಲ ಹಿಂದಿನಿಂದ ಸರಿಪಡಿಸಿಕೊಳ್ಳ ಬಹುದು. ರೋಹಿಣಿದೇವಿಯವರೆ, ಈ ಪಾಠದ ವಿಷಯ ನಿಮಗೆ ಒಪ್ಪಿಗೆಯಾಗಿದ್ದು ನನಗೆ ಸಂತೋಷ. ಇನ್ನು ಮುಂದೆ ವಿದ್ಯಾರ್ಥಿನಿಯರ ಸಂಘದಲ್ಲಿ, ಮಹಿಳಾಮಂಡಳದಲ್ಲಿ........

ಕಾಂತಿಚಂದ್ರ : ( ಆನಂದದಿಂದ ) ತಿಳಿಯಿತು, ಕೋಸಲೇಂದ್ರ ಬಾಬು ! ಕಿಶನ್ ಕಿಶೋರರನ್ನು ನೀವು ಹೇಗೋ ಹಾಗೆ ಮೃಣಾಲಿನಿ ನಮ್ಮನ್ನು ನೋಡಿಕೊಳ್ಳುತ್ತಾಳೆ,

ರೋಹಿಣಿದೇವಿ : ( ಉಲ್ಲಸಿತಳಾಗಿ ) ಹಾಗಾದರೆ ಈ ಮದುವೆ ನೈನಿತಾಲ ದಲ್ಲಿಯೇ ಆಗಿಬಿಡಲಿ, ಹುಡಿಗೆಯನ್ನು ಧಾರೆಯೆರೆದು ಕೊಡುವ ಅಧಿಕಾರ ನಮ್ಮದು.

ಕೋಸಲೇಂದ್ರ : ( ನಗುತ್ತ ) ಆಗಬಹುದು.

ರುಕ್ಮಿಣಿದೇವಿ : ಶುಭದ ಮೇಲೆ ಶುಭ, ದೇವರು ಕಡೆಗೊಮ್ಮೆ ನನ್ನ ಮೇಲೆ ಕಣ್ಣು ತೆರೆದ !

[ ಬನಸಿಲಾಲನು ಅವಸರದಿಂದ ಪ್ರವೇಶಿಸಿ ಮೂಲೆಯಲ್ಲಿಟ್ಟಿದ್ದ ತನ್ನ ಸಾಮಾನನ್ನು ಆಳುಮಗನಿಂದ ಹೊರಿಸಿಕೊಂಡು ಹೋಗಲು ಬರುತ್ತಾನೆ] 

ಕಿಶನ್ ಕಿಶೋರ : ಓಹೋ ! ತಮ್ಮ ಗಾಡಿಯ ವೇಳೆಯಾಯಿತೆಂದು ಕಾಣುತ್ತದೆ ! ಇಲ್ಲಿ ಸಾಮಾನು ಇಟ್ಟವರು ತಿರುಗಿ ಬಂದರು....ಯಾರವರು ? ಪರಿಚಿತರಂತೆ ಕಾಣುತ್ತದೆ. ಓಹೋ, ಕಾಂತಿಚಂದ್ರಜಿ ! ಬನಸಿಲಾಲ ! ಅಸಾಮಿ ಬಹಳ ಅವಸರದಲ್ಲಿದ್ದಂತೆ ಕಾಣುತ್ತದೆ.

[ ಎಲ್ಲರೂ ಅತ್ತ ಕಡೆಗೆ ನೋಡುತ್ತಾರೆ. ]

ಕಾಂತಿಚಂದ್ರ: ( ಸಾವಕಾಶವಾಗಿ ) ಅವನನ್ನು ಬರಿ ನೋಡಿದರೂ ಸಹ ನನ್ನ ತಲೆಗೆ ಪಿತ್ತವೇರುತ್ತದೆ.

ರೋಹಿಣಿದೇವಿ : ನಾನು ಹೆಂಗಸು, ಅವನ ಬಾಗಿಲ ವರೆಗೆ ಹೋಗಿ ಬೇಡಿ ಕೊಂಡೆ. ಆದರೂ ಆ ನೀಚ ತನ್ನ ಹಟ ಬಿಡಲಿಲ್ಲ.