ಪುಟ:Yugaantara - Gokaak.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಕೋಸಲೇಂದ್ರ : ನೋಡೋಣ. ಅದನ್ನೆಲ್ಲ ಹಿಂದಿನಿಂದ ಸರಿಪಡಿಸಿಕೊಳ್ಳ ಬಹುದು. ರೋಹಿಣಿದೇವಿಯವರೆ, ಈ ಪಾಠದ ವಿಷಯ ನಿಮಗೆ ಒಪ್ಪಿಗೆ ಯಾಗಿದ್ದು ನನಗೆ ಸಂತೋಷ. ಇನ್ನು ಮುಂದೆ ವಿದ್ಯಾರ್ಥಿನಿಯರ ಸಂಘ ದಲ್ಲಿ, ಮಹಿಳಾಮಂಡಳದಲ್ಲಿ........ ಕಾಂತಿಚಂದ್ರ : ( ಆನಂದದಿಂದ ) ತಿಳಿಯಿತು, ಕೋಸಲೇಂದ್ರ ಬಾಬು ! ಕಿಶನ್ ಕಿಶೋರರನ್ನು ನೀವು ಹೇಗೋ ಹಾಗೆ ಮೃಣಾಲಿನಿ ನಮ್ಮನ್ನು ನೋಡಿಕೊಳ್ಳುತ್ತಾಳೆ, ಹಿಣಿದೇವಿ : ( ಉಲ್ಲಸಿತಳಾಗಿ ) ಹಾಗಾದರೆ ಈ ಮದುವೆ ನೈನಿತಾ ದಲ್ಲಿಯೇ ಆಗಿಬಿಡಲಿ, ಹುಡಿಗೆಯನ್ನು ಧಾರೆಯೆರೆದು ಕೊಡುವ ಅಧಿಕಾರ ನಮ್ಮದು. ಕೋಸಲೇಂದ್ರ : ( ನಗುತ್ತ ) ಆಗಬಹುದು. ದಕ್ಕಿಣಿದೇವಿ : ಶುಭದ ಮೇಲೆ ಶುಭ, ದೇವರು ಕಡೆಗೊಮ್ಮೆ ನನ್ನ ಮೇಲೆ ಕಣ್ಣು ತೆರೆದ ! | ಬನಸಿಲಾಲನು ಅವಸರದಿಂದ ಪ್ರವೇಶಿಸಿ ಮಲೆಯಲ್ಲಿಟ್ಟಿದ್ದ ತನ್ನ ಸಾಮಾನನ್ನು ಆಳುಮಗನಿಂದ ಹೊರಿಸಿಕೊಂಡು ಹೋಗಲು ಬರುತ್ತಾನೆ, ಕಿಶನ್ ಕಿಶೋರ : ಓಹೋ ! ತಮ್ಮ ಗಾಡಿಯ ವೇಳೆಯಾಯಿತೆಂದು ಕಾಣು ತದೆ ! ಇಲ್ಲಿ ಸಾಮಾನು ಇಟ್ಟವು ತಿರುಗಿ ಬಂದರು....ಯಾರವರು ? ಪರಿಚಿತರಂತೆ ಕಾಣುತ್ತದೆ. ಓಹೋ, ಕಾಂತಿಚಂದ್ರಜಿ ! ಬನಸಿಲಾಲ ! ಅಸಾಮಿ ಬಹಳ ಅವಸರದಲ್ಲಿದ್ದಂತೆ ಕಾಣುತ್ತದೆ. [ ಎಲ್ಲರೂ ಅತ್ತ ಕಡೆಗೆ ನೋಡುತ್ತಾರೆ. ] ಕಾಂತಿಚಂದ್ರ ( ಸಾವಕಾಶವಾಗಿ ) ಅವನನ್ನು ಬರಿ ನೋಡಿದರೂ ಸಹ ನನ್ನ ತಲೆಗೆ ಪಿತ್ತವೇರುತ್ತದೆ. ರೋಹಿಣಿದೇವಿ : ನಾನು ಹೆಂಗಸು, ಅವನ ಬಾಗಿಲ ವರೆಗೆ ಹೋಗಿ ಬೇಡಿ ಕೊಂಡೆ. ಆದರೂ ಆ ನೀಚ ತನ್ನ ಹಟ ಬಿಡಲಿಲ್ಲ.