ವಿಷಯಕ್ಕೆ ಹೋಗು

ಪುಟ:Yugaantara - Gokaak.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

________________

ಅಂಕು ೩

ಪ್ರವೇಶ ೫

[ ಕೂಸಲೇಂದ್ರ ಮೃಣಾಲಿನಿಯವರ ಮನೆ, ಮೃಣಾಲಿನಿಯು ಕಸೂತಿ ಹಾಕುತ್ತ ಕುಳಿತಿರುತ್ತಾಳೆ. ಹತ್ತಿರ ಅರ್ಧ ತೆರೆದಿಟ್ಟ ಒಂದೆರಡು ಪುಸ್ತಕಗಳು ಟೇಬಲ್ಲಿನ ಮೇಲೆ ಬಿದ್ದಿರುತ್ತವೆ. ಆಗ ಹೊರಗಿನಿಂದ ನೆಹರು ಶರ್ಟು-ಜಾಕಿಟನಲ್ಲಿದ್ದ ಕೋಸಲೇಂದ್ರನು ಪ್ರವೇಶಿಸುತ್ತಾನೆ. ]


ಕೋಸಲೇಂದ್ರ : ( ಮೃಣಾಲಿನಿಯ ಎದುರು ( ಉಶ್' ಎಂದು ಸೋಫಾದ ಮೇಲೆ ಕೂಡುತ್ತ) ಏಕೆ ? ಒಬ್ಬಳೇ ಇದ್ದೀ, ಮೃಣಾಲಿನಿ ! ರುಕ್ಮಿಣಿದೇವಿ ಎಲ್ಲಿ ಹೋಗಿದ್ದಾರೆ ?

ಮೃಣಾಲಿನಿ : ( ಕಸೂತಿಯನ್ನು ಹೆಣೆಯುತ್ತ ) ರೋಹಿಣಿಬೆನ್' ಹಾಗು ಅವರೂ ಕೂಡಿ ಮಹಿಳಾ ಸಭೆಗೆ ಹೋಗಿದ್ದಾರೆ.

ಕೋಸಲೇಂದ್ರ : ನೀನಿಲ್ಲದೆ ? ನೀನಿಲ್ಲದೆ ಇಂಥ ಸಭೆ ಆಗುವದು ಹೇಗೆ ? ನೀನೇಕೆ ಹೋಗಿಲ್ಲ ?

ಮೃಣಾಲಿನಿ : ( ತುಸು ಕೆಳಗೆ ಮೋರೆಮಾಡಿ ) ಇಲ್ಲ.

ಕೋಸಲೇಂದ್ರ : ( ಸ್ಲಿಪರ್ ತೆಗೆದು ಜಾಕೀಟನ್ನು ತೆಗೆದಿಡುತ್ತ ) ಕಿಶನ್ ಕಿಶೋರರ ಪತ್ರ ಇವತ್ತಾದರೂ ಬಂದಿದೆಯೇ ?

ಮೃಣಾಲಿನಿ : ( ಟೇಬಲ್ಲಿನ ಮೇಲಿನ ಪತ್ರವನ್ನು ಕೈಚಾಚಿ ಕೊಟ್ಟು ) ಹೌದು, ಅವರೂ ಕಾಂತಿಚಂದ್ರರೂ ಕೂಡಿ ಇನ್ನು ಹದಿನೈದು ದಿನಗಳಲ್ಲಿ ಅರುಣಾ ಚಲದಿಂದ ತಿರುಗಿ ಬರುವದಾಗಿ ಬರೆದಿದ್ದಾರೆ.

ಕೋಸಲೇಂದ್ರ : ( ಪತ್ರವನ್ನು ಓದುತ್ತ ) ಇದೊಂದು ಒಳ್ಳೆಯವಾಯಿತು. ಬನಸಿಲಾಲರ ಸುದ್ದಿಯೇನು ? ಏನಾದರೂ ಹೇಳಿ ಕಳಿಸಿದ್ದರೋ ?

ಮೃಣಾಲಿನಿ : ಸಮತಾವಾದಿ ಪಕ್ಷದಿಂದ ಕಾಂತಿಚಂದ್ರರು ಚುನಾವಣೆಗೆ ನಿಲ್ಲುವದಿದ್ದರೆ ನಿಲ್ಲಲಿ; ಸಂಯುಕ್ತ ಪ್ರಾಂತದ ಅಸೆಂಬ್ಲಿಯಲ್ಲಿ ತಮಗೆ ಸ್ಥಾನ ಸಿಕ್ಕರೆ ಸಾಕು : ಎಂದು ಹೇಳಿ ಕಳಿಸಿದ್ದಾರೆ.