________________
ಅಂಕು ೩
ಪ್ರವೇಶ ೫
[ ಕೂಸಲೇಂದ್ರ ಮೃಣಾಲಿನಿಯವರ ಮನೆ, ಮೃಣಾಲಿನಿಯು ಕಸೂತಿ ಹಾಕುತ್ತ ಕುಳಿತಿರುತ್ತಾಳೆ. ಹತ್ತಿರ ಅರ್ಧ ತೆರೆದಿಟ್ಟ ಒಂದೆರಡು ಪುಸ್ತಕಗಳು ಟೇಬಲ್ಲಿನ ಮೇಲೆ ಬಿದ್ದಿರುತ್ತವೆ. ಆಗ ಹೊರಗಿನಿಂದ ನೆಹರು ಶರ್ಟು-ಜಾಕಿಟನಲ್ಲಿದ್ದ ಕೋಸಲೇಂದ್ರನು ಪ್ರವೇಶಿಸುತ್ತಾನೆ. ]
ಕೋಸಲೇಂದ್ರ : ( ಮೃಣಾಲಿನಿಯ ಎದುರು ( ಉಶ್' ಎಂದು ಸೋಫಾದ ಮೇಲೆ ಕೂಡುತ್ತ) ಏಕೆ ? ಒಬ್ಬಳೇ ಇದ್ದೀ, ಮೃಣಾಲಿನಿ ! ರುಕ್ಮಿಣಿದೇವಿ ಎಲ್ಲಿ
ಹೋಗಿದ್ದಾರೆ ?
ಮೃಣಾಲಿನಿ : ( ಕಸೂತಿಯನ್ನು ಹೆಣೆಯುತ್ತ ) ರೋಹಿಣಿಬೆನ್' ಹಾಗು ಅವರೂ ಕೂಡಿ ಮಹಿಳಾ ಸಭೆಗೆ ಹೋಗಿದ್ದಾರೆ.
ಕೋಸಲೇಂದ್ರ : ನೀನಿಲ್ಲದೆ ? ನೀನಿಲ್ಲದೆ ಇಂಥ ಸಭೆ ಆಗುವದು ಹೇಗೆ ? ನೀನೇಕೆ ಹೋಗಿಲ್ಲ ?
ಮೃಣಾಲಿನಿ : ( ತುಸು ಕೆಳಗೆ ಮೋರೆಮಾಡಿ ) ಇಲ್ಲ.
ಕೋಸಲೇಂದ್ರ : ( ಸ್ಲಿಪರ್ ತೆಗೆದು ಜಾಕೀಟನ್ನು ತೆಗೆದಿಡುತ್ತ ) ಕಿಶನ್ ಕಿಶೋರರ ಪತ್ರ ಇವತ್ತಾದರೂ ಬಂದಿದೆಯೇ ?
ಮೃಣಾಲಿನಿ : ( ಟೇಬಲ್ಲಿನ ಮೇಲಿನ ಪತ್ರವನ್ನು ಕೈಚಾಚಿ ಕೊಟ್ಟು ) ಹೌದು, ಅವರೂ ಕಾಂತಿಚಂದ್ರರೂ ಕೂಡಿ ಇನ್ನು ಹದಿನೈದು ದಿನಗಳಲ್ಲಿ ಅರುಣಾ ಚಲದಿಂದ ತಿರುಗಿ ಬರುವದಾಗಿ ಬರೆದಿದ್ದಾರೆ.
ಕೋಸಲೇಂದ್ರ : ( ಪತ್ರವನ್ನು ಓದುತ್ತ ) ಇದೊಂದು ಒಳ್ಳೆಯವಾಯಿತು. ಬನಸಿಲಾಲರ ಸುದ್ದಿಯೇನು ? ಏನಾದರೂ ಹೇಳಿ ಕಳಿಸಿದ್ದರೋ ?
ಮೃಣಾಲಿನಿ : ಸಮತಾವಾದಿ ಪಕ್ಷದಿಂದ ಕಾಂತಿಚಂದ್ರರು ಚುನಾವಣೆಗೆ ನಿಲ್ಲುವದಿದ್ದರೆ ನಿಲ್ಲಲಿ; ಸಂಯುಕ್ತ ಪ್ರಾಂತದ ಅಸೆಂಬ್ಲಿಯಲ್ಲಿ ತಮಗೆ ಸ್ಥಾನ ಸಿಕ್ಕರೆ ಸಾಕು : ಎಂದು ಹೇಳಿ ಕಳಿಸಿದ್ದಾರೆ.