ಪುಟ:Yugaantara - Gokaak.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು 4 - “ ನೀನು ಬರ್ಫ ” ಹಂಚು. ಈಗಾದರೂ ಆಯಿತೆ ?........ಒಟ್ಟಾರೆ ನೀನೇ ದೈವಶಾಲಿ, ಮೃಣಾಲಿನಿ ! ನೀನು ಬಯಸುವಂತೆ ನೀನೇ ಕೋಸಲೇಂದ್ರ ನಾಗಿದ್ದರೆ, ಅದೆಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಮೃಣಾಲಿನಿ : ಯಾವ ಸಮಸ್ಯೆಗಳು, ಕೋಸಲೇಂದ್ರ ? ಕೋಸಲೇಂದ್ರ : ಒಂದೇ ! ಎರಡೇ ! ಈಗ ನೋಡು, ನಮ್ಮ ಸಾದಾಜೀವನ ರುಕ್ಕಿಣಿದೇವಿಯರಿಗೆ ಮನಸ್ಸು ಬರುವದಿಲ್ಲ. ಇದ್ದುದನ್ನೆಲ್ಲ ಬಡವರಿಗೆ ಕೊಟ್ಟು ಬಡವರಂತೆ ಬಾಳುವದರಲ್ಲಿ ಏನು ಸಾರ್ಥಕತೆಯಿದೆ ? ಎಂದು ಅವರು ಕೇಳುತ್ತಾರೆ. ಮೃಣಾಲಿನಿ: ಅದರಲ್ಲೇನಿದೆ ? ಅವರ ಹಣಕ್ಕೆ ನಾವು ಕೈ ಹಾಕಿಲ್ಲವಲ್ಲ ? ನನ್ನ ಬರವಣಿಗೆಯಿಂದ ನಮ್ಮ ಜೀವಿತ ಸಾಗಿದೆ. ನೀನು ಇದನ್ನು ಸಮಸ್ಯೆಯೆಂದು ತಿಳಿಯಬೇಕಾಗಿಲ್ಲ, ಕೋಸಲೇಂದ್ರ, ರುಕ್ಷ್ಮಿಣಿದೇವಿಯವ ರೊಡನೆ ನಾನು ಅದನ್ನೆಲ್ಲ ಸರಿಪಡಿಸುತ್ತೇನೆ. ಕೋಸಲೇಂದ್ರ : ಇನ್ನು ದೇಶದ ಕಡೆಗೆ ಹೊರಳಿದರೆ, ಭಾರತವೇನೋ ಸ್ವತಂತ್ರವಾಗಿದೆ. ಆದರೆ ಅದರ ಅತಂತ್ರ ಸ್ಥಿತಿಮಾತ್ರ ಹಾಗೆಯೇ ಉಳಿದಿದೆ. ಅಜ್ಞಾನ, ದ್ವೇಷ, ಸ್ವಾರ್ಥ... ... ಮೃಣಾಲಿನಿ : ಇದು ನಿನ್ನೊಬ್ಬನ ಸಮಸ್ಯೆಯಲ್ಲ. ಎಲ್ಲರ ಸಮಸ್ಯೆ, ಎಲ್ಲ ತ್ಯಾಗಕ್ಕೆ ಸಿದ್ಧರಾಗಿದ್ದೇವೆ. ಅದೇ ನಮ್ಮ ಸಮಾಧಾನ. ಕೋಸಲೇಂದ್ರ : ಒಮ್ಮೊಮ್ಮೆ ನಾನು ಮಾಡುತ್ತಿರುವ ಈ ಸೇವೆಯನ್ನು ಸಹ ಮಂಜು ಕವಿಯುತ್ತಿದೆ. ಈ ಪೀಳಿಗೆಗಾಗಿ ಸಂಸ್ಥೆಗಳನ್ನು ಕಟ್ಟಬೇಕೋ ಇಲ್ಲವೆ ಒಟ್ಟು ಜನಾಂಗದ ಏಳಿಗೆಗಾಗಿ ಕವನಗಳನ್ನು ಕಟ್ಟಬೇಕೋ ? ಎರಡನ್ನೂ ಮಾಡಲು ಹೋಗಿ ಈ ಎರಡೂ ಕೆಲಸ ಅಪೂರ್ಣವಾಗುತ್ತವೆ. ಮೃಣಾಲಿನಿ : ' ನಸುನಕ್ಕು ) ಒಮ್ಮೊಮ್ಮೆ ನನ್ನಂತಹ ಸಾಮಾನ್ಯರ ಬುದ್ದಿಯೂ ನಿನ್ನ೦ಥ ಪ್ರತಿಭಾಶಾಲಿಗಳಿಗೆ ಉಪಯೋಗವಾಗುವದು, ಕೋಸಲೇಂದ್ರ ! ವಿಚಾರಮಾಡು. ಈ ಎರಡೂ ಕೆಲಸಗಳ ಅಪೂರ್ಣತೆ ಯಲ್ಲಿಯೇ ನಿನ್ನ ಪೂರ್ಣತೆಯಿದೆ; ನಿನ್ನ ಜೀವಿತಕ್ಕೆ ಬೇಕಾದ ವೈಶಾಲ್ಯ ವಿದೆ. ವ್ಯಕ್ತಿತ್ವದ ತಿರುಳನ್ನೆಲ್ಲ ಜೀವಿತಕ್ಕೆ ತಿರುಗಿಸುವದೇ ಪೂರ್ಣತೆಯ ಕುರುಹು. ಇದನ್ನು ಳಿದ ಪೂರ್ಣತೆ ಯಾವುದು ?