Pages (key to Page Status)
ಬಿಡು ಬಿಡು ಸಂಗವ ಸುಡುಸುಡು ವಿಷಯವ ಎನ್ನೊಡೆಯರು ಬಾಗಿಲಿಗೆ ಬಂದರು ತಡೆಯದಿರಾ ಮರುಳೆ. ಹಡಿಕೆಯ ಸಂಸಾರದ ಸುಖವ ಕಡೆಯಲ್ಲಿ ಹೇಸಿ ಇದಕ್ಕೆ ಹಿಡಿಯದಿರು ಸೆರಗನು. ಚೆನ್ನಮಲ್ಲಿಕಾರ್ಜುನದೇವರು ಮನೆಗೆ ಬಂದಲ್ಲಿ ಇದಿರೇಳದಿರ್ದಡೆ ನಾಯಕ ನರಕ.