ಮಿತ್ರ ದುಖಃ/i

ವಿಕಿಸೋರ್ಸ್ದಿಂದ
ಮಿತ್ರ-ದು:ಖ.

ಆಕಾಶದಲ್ಲಿ ಸ್ವಾಭಾವಿಕ ಗತಿಯಿಂದ ತಿರ ಗುತ್ತಿದ್ದ ಚಂದ್ರನು ಒಂದು ದಿವಸ ವಿ ತ್ರ-ಸೂರ್ಯನಿಗೆ ಭೆಟ್ಟಿಯಾದನು. ದೂರಿ ನ ಗುಡ್ಡವು ಕಣ್ಣಿಗೆ ನುಣ್ಣಗೆ ಎಂಬೀ ಭೂಮಂಡಲದ ನಾಣ್ಣುಡಿಯಂತೆ ದೂರ ತೋ ಭಾಸ್ಕರೋ ರಮ್ಮ ಎಂಬ ಉಕ್ತಿಯು ಚಂದ್ರಲೋಕ ದಲ್ಲಿ ಪ್ರಚಲಿತವಿತ್ತು ಆ ತತ್ವಕ್ಕನುಸರಿಸಿ ಚಂದ್ರನು ಸೂರ್ಯ ನಿಂದ ಯಾವಾಗಲೂ ಸಾಧ್ಯವಿದ್ದ ಮಟ್ಟಿಗೆ ದೂರವೇ ಇರು ತಿದ್ದನು; ಪ್ರತಿ ತಿಂಗಳ ಮುವತ್ತು ದಿವಸಗಳಲ್ಲಿ ಇವನು ಮಿತ್ರನ ಸಮೀಪಕ್ಕೆ ಕ್ವಚಿತ್ತಾಗಿಯೇ ಹೋಗುತ್ತಿದ್ದನು. ಆದರೆ ಒಮ್ಮೆ ಒಂದು ಅಮಾವಾಸ್ಯೆಯ ದಿವಸ ಇವರೀರ್ವರು ತೀರ ಸಮಿದಲ್ಲಿ ಗಂಟು ಬಿದ್ದರು. ಇವರಲ್ಲಿ ಯಾವಾಗಲೂ - ಷ ಸ್ನೇಹವಿತ್ತೆಂತ; ಒಬ್ಬನು ಹಗಲು ಹೊರಬಿದ್ದ ಮತ್ತೊಬ್ಬನು ಆಗ ಮೋರೆ ಸಹ ತೋರಿಸದೆ ರಾತ್ರಿಯಲ್ಲಿ ಕರಬೀಳತಕ್ಕವನು. ಹೀಗೆ ಇವರ ದಿನಚರ್ಯೆಯಾಗಿತ್ತು ಇದರ ಹೊರತು ಒಬ್ಬನ ಮೋರೆ ದಕ್ಷಿಣಕ್ಕಾದರೆ, ಇನ್ನೂ ಬೃನ ಮೋರೆ ಉತ್ತರಕ್ಕೆ; ಈ ಪ್ರಕಾರ ಇವರು ವರ್ಷದಲ್ಲಿ ಎಷ್ಟೋ ದಿವಸಗಳನ್ನು ಕಳೆಯುತ್ತಿದ್ದರು. ಇದಕ್ಕೂ ಎಶೇ ಸವೇನಂದರೆ, ಇವರೀರ್ವರ ಸ್ವಭಾವದಲ್ಲಿಯೂ ಕ್ವಚಿತ್ತೇ ಸಾ ಮ್ಯವಿತ್ತು. ಒಬ್ಬನ ಸ್ವಭಾವವು ಬಹಳ ಉಗ್ರವಾದರೆ, ಇನ್ನೂ ಬೃನ ಪ್ರಕೃತಿ ಗುಣವು ತೀರ ಶಾಂತವು. ಹೀಗೆ ಇವರ ಸ್ಥಿತಿ ಯಾಗಿತ್ತು; ಮತ್ತು ಕಾಲಮಾನದಿಂದ ಅದರಲ್ಲಿ ಈ ವರೆಗೆ ಏನೂ ಸ್ಥಿತ್ಯಂತರವಾಗಿರುವದಿಲ್ಲ. ದಾಯಾದಿಗಳಾದ ಇಬ್ಬರು ಅಣ್ಣ ತಮ್ಮಂದಿರಂತೆ ಇವರೀರ್ವರ ಅವಸ್ಥೆಯಿತ್ತು. ಇವರು ಪರಸ್ಪರರಿಂದ ಶಕ್ಯವಿದ್ದಷ್ಟು ದೂರವಿದ್ದು, ತಮ್ಮಷ್ಟಕ್ಕೆ ತಾವಿ ರುತ್ತಿದ್ದರು. ಆದರೂ ಇವರು ಪರಸ್ಪರರನ್ನು ದ್ವೇಷಿಸುತ್ತಿದ್ದ ರೆನ್ನುವ ಹಾಗಿದ್ದಿಲ್ಲ. ಹೆಚ್ಚಾಗಿ ಪ್ರೇಮವೂ ಇಲ್ಲ- ದ್ವೇಷವು ಇಲ್ಲ. ಈ ಪ್ರಕಾರದ ಸವಿನುಡಿಯ ಮಧ್ಯಮ ತರದ ಆಚರಣೆ ಯು ಇವರಲ್ಲಿತ್ತು. ಆದರೆ ಅಲ್ಪ ಪ್ರಮಾಣದ ಭಾಗಾದಿತನ ದಹಗೆತನದ ಅಂತಃಕರಣದಿಂದ ಇವರು ಪರಸ್ಪರರನ್ನು ನೋಡು ತಿದ್ದರು.
ಈ ಸ್ಥಿತಿಯಲ್ಲಿ ಒಂದು ದಿನ ಮೇಲೆ ಹೇಳಿದಂತೆ ಇವ
ರೀರ್ವರ ಭೆಟ್ಟಿಯಾಯಿತು. ತನ್ನ ಸುಖದುಃಖಗಳನ್ನು ಚ೦ ದ್ರನಿಗೆ ತಿಳಿಸಬೇಕೆಂದು ಸೂರ್ಯನು ಎಷ್ಟೋ ಪಕ್ಷ-ಮಾಸಗ ಳಿಂದ ಅವನ ಭೆಟ್ಟಿಯ ನಿರೀಕ್ಷಣೆಯಲ್ಲಿದ್ದನು. ಕಡೆಗೆ ಅದು ಒಂದು ಅಮಾವಾಸ್ಯೆಯ ದಿವಸ ಬೆಳಗಿನ ಜಾವಿನಲ್ಲಿ ಆ ಸುಸಂ ಧಿಯು ಪ್ರಾಪ್ತವಾಯಿತು.
ಆ ಕಾಲದಲ್ಲಿ ಆಕಾಶದಲ್ಲಿ ಇವರಿಬ್ಬರ ಹೊರತು ಮ
ರನೆಯವರು ಯಾರೂ ಇದ್ದಿಲ್ಲ. ಎಲ್ಲ ಕಡೆಗೂ ನಿಶ್ಯಬ್ದವೆ. ಗಿದ್ದು, ಪ್ರಾತಃಕಾಲದ ಶಾಂತತೆಯು ನಾಲ್ಕೂ ದಿಕ್ಕುಗಳಲ್ಲಿ ಸಂಪೂರ್ಣವಾಗಿ ಪ್ರಸ್ಥಾಪಿತವಾಗಿತ್ತು. ರಾತ್ರಿಯು ಈ ಮೊದಲೇ ಕಳೆದು ಹೋಗಿತ್ತು; ಹಾಗು ನಿಶೆಯ ಪ್ರಿಯಕರ ನಾದ ತಮೋರಾಜನಾದರೂ ಆಕೆಯ ಹಿಂದಿನಿಂದ

ಎಲ್ಲಿಯೊ ಹೋಗಿಬಿಟ್ಟಿದ್ದನು. ಚಂದ್ರ-ಸೂರ್ಯರ ಭೆಟ್ಟಿಯ ಆದಿವಸವ
ವರ್ಪಾಋತುವಿನ ಇಲ್ಲವೆ ಶರದೃತುವಿನ ದಿನವಲ್ಲದ್ದರಿಂದ ಆಕಾ ಶದ ವಿಸ್ತಾರವಾದ ಅಂಗಳದಲ್ಲಿ ಯಾವದೊಂದು ಮೇಘದ ತೀರ ಸಣ್ಣ ತುಣುಕು ಸಹ ಎಲ್ಲಿಯೂ ಕಾಣುತ್ತಿದ್ದಿಲ್ಲ. ಆ ಇಡಿ ಆಕಾಶವು ಕಸ ಉಡಿಗಿ ಸ್ವಚ್ಛ ಮಾಡಿದಂತೆ ತೋರುತ್ತಿ ತು, ಸೂರ್ಯನ ಸಾರಥಿಯಾದ ಅರುಣನು ರವಿ-ರಧವನ್ನು ಮೆಲ್ಲಮೆಲ್ಲನೆ ಹೊಡೆಯುತ್ತಿದ್ದನು. ಆ ರಥದ ಏಳೂ ಕುದುರೆ ಗಳ ಖುರ ಪುಟಗಳ ಸಪ್ಪಳವು ತೀರ ಮುಂದಾಗಿದ್ದರಿಂದ; ಅದು ಕ್ವಚಿತ್ತಾಗಿಯೇ ಕೇಳಿಸುತ್ತಿತ್ತೆಂದರೂ ಸಲ್ಲಬಹುದು. ಈ ಪ್ರಕಾರದ ಸುಶಾಂತ ಸಮಯದಲ್ಲಿ ಎಷ್ಟೋ ದಿವಸಗಳನಂತರ ಭೆಟ್ಟಿಯ ಯೋಗವು ಒದಗಿ ಬಂದ ಬಳಿಕ ಪರಸ್ಪರರಲ್ಲಿ ಆಗ ತಕ್ಕ ಔಪಚಾರಿಕ ಕ್ಷೇಮ ಸಮಾಚಾರಗಳು ನಡೆದಿರಲು, ಸೂ ರ್ಯನ ಮುಖವು ತುಸ ಮೌನವಾಗಿ ತೋರಿತು. ಆಗ ಚe ದ್ರನು ಕಾರಣವೇನೆಂದು ಸೂರ್ಯನಿಗೆ ಕೇಳಲು, ಸೂರ್ಯ ನು ಒಂದು ದೀರ್ಘ ನಿಟ್ಟುಸಿರನ್ನು ಬಿಟ್ಟು ಚಂದ್ರನಿಗೆ ತನ್ನ ಸ್ಥಿತಿಯನ್ನು ಹೇಳತೊಡಗಿದನು. ಆದರೆ ಅದನ್ನು ಹೇಳುವ ಮೊದಲು, ಇಬ್ಬರು ಜೀವದ ಗೆಳೆಯರು ಪರಸ್ಪರರ ಹಿತಗೋಷ್ಟಿಗಳನ್ನು ಮಾತಾಡುವಾಗ ಒಬ್ಬನು ತನ್ನ ಕೈಯ ನ್ನು ಸಹಜವಾಗಿ ಮತ್ತೊಬ್ಬನ ಹೆಗಲ ಮೇಲೆ ಚಲ್ಲ ಮಾತಾ ಡುವಂತೆ , ಸೂರ್ಯನು ತನ್ನ ಕೈಯನ್ನು ಹೆಗಲ ಮೇಲೆ ಒಗೆಯುವದಕ್ಕಾಗಿ ತನ್ನ ಹತ್ತಿರಕ್ಕೆ ಬರುವದನ್ನು ಕಂಡ ಕೂಡಲೆ ಚಂದ್ರನು ತುಸು ದೂರ ಸರಿದು ನಿಂತು, ಸೂ ರ್ಯನನ್ನು ಕುರಿತು-"ಮಿತ್ರಾ, ನನ್ನ ಪೂರ್ಣ ಲಕ್ಷ್ಯವಿದೆ; ನೀನು ಹೇಳುವದೆಲ್ಲವನ್ನೂ ನಾನು ಆಸ್ಥೆಯಿಂದ ಕೇಳುತ್ತಲಿದ್ದೇನೆ. ಅಂದಮೇಲೆ ಅಷ್ಟೊಂದು ಹತ್ತಿರಕ್ಕೆ ಬರುವ ತೊಂದರೆಯ ನೇತಕ್ಕೆ ವಹಿಸುತ್ತೀ?” ಎಂದು ನುಡಿದನು.

ಚಂದ್ರನ ಈ ತಿರಸ್ಕಾರ ವಾಣಿಯನ್ನು ಕೇಳಿ, ಮಿತ್ರನ

ಮೋರೆಯು ಇಪ್ಪಾಯಿತು. ಇವನಲ್ಲಿ ಯಾವ ಪ್ರೇಮವು ಕ್ಷಣ ಹೊತ್ತು ಉಕ್ಕೇರಹತ್ತಿತ್ತೊ ಅದೆಲ್ಲವೂ ಈಗ ಒಮ್ಮೆಲೆ ಬತ್ತಿ ಹೋಯಿತು. ಇವನ ಉತ್ಸಾಹವು ಸಂಪೂರ್ಣವಾಗಿ ಅಡಗಿಬಿ ಟ್ಟಿತು; ಮತ್ತು ಇವನಿಗೆ ಯಾವ ಅಖಂಡ ದುಃಖವು ತುಸು ಮಟ್ಟಿಗಾದರೂ ಮರವಾಗುತ್ತ ನಡೆದಿತ್ತೋ, ಆ ಎಲ್ಲ ದುಃ ಖವು ಪುನಃ ಅವನ ಮನಸ್ಸಿನಲ್ಲಿ ಜಾಗೃತವಾಯಿತು. ಸೂರ್ಯನ ಸೂಚನೆಯ ಮೇರೆಗೆ ಅರುಣನು ಸೂರ್ಯನ ರಥವನ್ನು ಚ೦ ದ್ರನ ಬಳಿಗೆ ಒಯ್ಯುವದಕ್ಕಾಗಿ ತುಸು ಒಲಿಸಹತ್ತಕ್ಕನ ನಿದ್ದನು; ಅಷ್ಟರಲ್ಲಿ ಆ ಗತಿಯನ್ನು ತೊರೆದು ಮೊದಲಿನಂತೆ ಸಾಗಲು ಅವನಿಗೆ ಸೂರ್ಯನಿಂದ ಪುನಃ ಆಜ್ಞೆಯು ಮಾಡಲ್ಪ ಟಿತು. ಬಳಿಕ ಸೂರ್ಯನು ಮತ್ತೊಂದು ನಿಟ್ಟುಸಿರು ಗರೆದು ಚಂದ್ರನನ್ನು ಕುರಿತು_ಇಂದ್ರಾ, ಇದೇ ಇದೇಯೇ ನನ್ನ ಮ್ಯಾನತೆಯ ಕಾರಣವು. ನಾನು ಇಂದು ನಿಸ್ತೇಜನೇ ಕಾಗಿರುವೆನೆಂಬದನ್ನು ಇಷ್ಟು ದಿವಸಗಳಲ್ಲಿ ಈ ದಿನವೇ ನೀನು ನನ್ನನ್ನು ಕೇಳಿದೆ. ನನ್ನ ಮೊಗವು ಮ್ಯಾನವಾಗಿದೆಯೋ, ತೇಜಃಪುಂಜವಾಗಿದೆಯೋ ಎಂಬ ಬಗ್ಗೆ ಚಿಂತೆಯನ್ನು ತಾಳಿ ವಿಚಾರಮಾಡುವವನು ಇಷ್ಟು ದಿವಸಗಳಲ್ಲಿ ನೀನೊಬ್ಬನೇ ನನಗೆ ಗಂಟುಬಿದ್ದೆ. ನನ್ನ ಕಡೆಗೆ ಯಾರಾದರೂ ನೋಡಿದರಷ್ಟೆ ನನ್ನ ಸ್ಥಿತಿಯು ಚೆನ್ನಾಗಿದೆಯೋ ಇಲ್ಲವೋ ಎಂಬದು ಅವರಿಗೆ ತಿಳಿ ಯುವದು. ಆದರೆ ಯಾವನೊಬ್ಬ ಮನುಷ್ಯನು ತನ್ನ ಕಡೆಗೆ ನೋಡಹತ್ತಿದನೆಂದರೆ ಕೂಡಲೆ ತನ್ನ ಮೊಲೆಯನ್ನು ಹಿಂದಿರು ಗಿಸಿಬಿಡುವನು. ಅಂದ ಮೇಲೆ ನನ್ನ ನಿಜ ಸ್ಥಿತಿಯು ಮಂ ದಿಗೆ ಹೇಗೆ ತಿಳಿಯಬೇಕು? ಈ ಜಗತ್ತಿನಲ್ಲಿ ಸದ್ಯಕ್ಕೆ ಇಷ್ಟು ಜನರಿದ್ದಾರೆ, ಮತ್ತು ಮುಂದೆ ಇಲ್ಲಿ ಅಸಂಖ್ಯ ಜನರಾಗಬ
ಹುದು; ಆದರೆ ಆ ಎಲ್ಲರಿಂದ ನನಗೇನೂ ಪ್ರಯೋಜನವಿಲ್ಲ. ಚಂದ್ರಾ, ಇಲ್ಲಿ ಇಷ್ಟು ಜನ ಮನುಷ್ಯರಿದ್ದಾರೆ, ಆದರೆ ಅವರಲ್ಲಿ ನನ್ನವನೆಂಬುವವನು ಒಬ್ಬನೂ ಇರದಿರುವದು ಎಷ್ಟು ಖೇದದ ಸಂಗತಿಯಾಗಿದೆ? ಈ ವಿಸ್ತಾರವಾದ ವಿಶ್ವವಲಯ ದಲ್ಲಿ ಒಬ್ಬ ಯಃಕಶ್ಚಿತ ಪ್ರಾಣಿಗೆ ಕೂಡ ಸ್ನೇಹಿತರು, ಬಂಧುಬಾಂಧವರು ಮತ್ತು ನೆರೆ ಹೊರೆಯವರು ಹೀಗೆ ಅಷ್ಟೇಷ್ಟರು ಇರುತ್ತಾರೆ; ಹಾಗು ಅವರು ಪರಸ್ಪರರ ಬಳಿಗೆ ಹೋಗು ತಾರೆ-ಬರುತ್ತಾರೆ, ಒಬ್ಬರು ಮತ್ತೊಬ್ಬರಿಗೆ ಪ್ರೇಮದಿಂದ ಭೆಟ್ಟಿಯಾಗುತ್ತಾರೆ, ಮತ್ತು ಪರಸ್ಪರರು ಆನಂದದಿಂದ ಮಾತುಕಥೆಯಾಡುತ್ತ ಕೂಡುತ್ತಾರೆ. ಆದರೆ ಚಂದ್ರಾ, ಈ ಮಿತ್ರಸ್ನೇಹದ ಸೌಖ್ಯವು ಈ ನಿನ್ನ ಸೂರ್ಯನ ಹಣೆಯಲ್ಲಿ ಬರೆ ದಿಲ್ಲ. ಯಾರಾದರೂ ನನ್ನ ಬಳಿಗೆ ಬಂದು, ನನಗೆ ಪ್ರೇಮಾ ಲಿಂಗನ ಕೊಟ್ಟು, ನನ್ನೊಡನೆ ಒಂದೆರಡು ಗಳಿಗೆಯ ವರೆಗೆ ನಾಲ್ಕು ಸುಖದುಃಖದ ಮಾತುಗಳನ್ನಾಡಬಹುದೆಂಬ ಸುಖವು ನನ್ನ ದೈವದಲ್ಲಿಯೇ ಇಲ್ಲ. ಇದಕ್ಕೆ ನೀನಾದರೂ ಏನು ಮಾ ಡುವೆ ಚಂದ್ರಾ, ಬೇರೆಯವರ ಗೊಡವೆಯೇಕೆ, ಇದರ ಅನುಭ ನವು ಈಗ ನಿನ್ನಿಂದಲೇ ನನಗಾಗಲಿಲ್ಲವೇನು? ಸುಧಾಕರಾ ನನ್ನ ಸುಖದುಃಖಗಳ ಬಗ್ಗೆ ಇಷ್ಟು ಕಳಕಳಿಯಿಂದ ಪ್ರಶ್ನೆ ಮಾ ಡುತ್ತಿರುವ ನೀನು, ನಿನ್ನ ಹೆಗಲ ಮೇಲೆ ಕೈಯಿಕ್ಕಿ ಅಡ್ಡಾಡು ಕೆಲವು ಹಿತದ ಮಾತುಗಳನ್ನಾಡಬೇಕೆಂದು ನನ್ನ ಮನಸ್ಸಿನ ಬರಲು, ನಾನು ಅದರಂತೆ ನನ್ನ ರಥವನ್ನು ನಿನ್ನ ಕಡೆಗೆ ಒಲಿ ಸುವ ಬಗ್ಗೆ ಸ್ವಲ್ಪ ಸೂಚನೆಯನ್ನು ಆರುಣನಿಗೆ ಮಾಡಿದ್ದನ್ನು ಆದರೆ ಅಷ್ಟಕ್ಕೆ ನೀನು ಅಂಜಿ ಹಿಂದಕ್ಕೆ ಸರಿದು ನಿಂತೆ; ಹಾಗು ನಿನ್ನ ಉಪಾಧಿಕ ಭಾಷಣದಿಂದ ನನಗೆ ದೂರನಿಂತು ಮಾತಾ ಡುವ ವಿಷಯಕ್ಕೆ ಪರ್ಯಾಯದಿಂದ ಸೂಚಿಸಿದೆ. ಆದರೆ
ಮಿತ್ರಾ, ಆ ಕಾಲಕ್ಕೆ ನೀನೊಬ್ಬನೇ ಬೆದರಿದೆಯಂತಲ್ಲ; ನಿನ್ನ ನ್ನು ನೋಡಿ ನಾನೂ ಮನಸ್ಸಿನಲ್ಲಿ ಬಹಳ ಅಂಜಿಕೊಂಡೆನು; ಮತ್ತು ಅದರಿಂದ ತೀರ ಹತಾಶನಾದೆನು. ಆಗ ಈ ಮಿತ್ರನ ದೈವದಲ್ಲಿ ಮಿತ್ರಸೌಖ್ಯ ವಿಲ್ಲೆಂಬ ಸಂಗತಿಯು ನನ್ನ ಮನಸ್ಸಿನ ಲ್ಲಿ ಮರ್ತಿಮಂತವಾಗಿ ನಿಂತು ಬಿಟ್ಟಿತು; ಮತ್ತು ಅದರಿಂ ದ ನಾನು ಅತಿಶಯವಾಗಿ ಜರ್ಜರನಾದೆನು. 'ಲೋಕದವ ರಿಂದ ನಾನು ಜಗನ್ನಿ ತ್ರನೆಂದು ಕರೆಯಲ್ಪಡುತ್ತಿದ್ದರೂ, ನನ್ನ ಪರಮ ಸ್ನೇಹಿತನು ಜಗತ್ತಿನಲ್ಲಿ ಯಾರೂ ಇರುವದಿಲ್ಲ, ಎಂಬೀ ನಿಸರ್ಗ ರಹಸ್ಯವು ನನ್ನ ಮನಸ್ಸಿನಲ್ಲಿ ಮನೆಮಾಡಲು, ಅದರಿಂದ ನನಗೆ ಮರಣೋನ್ಮುಖ ದುಃಖವಾಯಿತು. ಆದರೆ ಅದೆಲ್ಲವ ನ್ಯೂ ನುಂಗಿಕೊಂಡು ಇಷ್ಟು ದೂರಿನಿಂದಲೇ ಯಾಕಾಗಿಲ್ಲ ದು ನನ್ನ ಕ್ಷೇಮಸಮಾಚಾರವನ್ನು ಕೇಳುವವನು ಯಾವನೊ ಬ್ರನು ಕೂಡಿದ್ದಾನೆಂಬದರಲ್ಲಿ ಸಂತೋಷವನ್ನು ತಳೆದು, ಚ೦ ದಾ, ನಾನು ಈ ಸುಸಂಧಿಯ ಲಾಭವನ್ನು ಹೊಂದುವದಕ್ಕಾ ಗಿ ನಿನ್ನೊಡನೆ ಮಾತಾಡಬೇಕೆಂದು ಸಂಕಲ್ಪಿಸಿದ್ದೇನೆ. “ಇಂ ದು ನಾನು ಇಷ್ಟೇಕೆ ಮಾನವಾಗಿ ತೋರುತ್ತಿದ್ದೇನೆ ೦ದು ನೀನು ನನಗೆ ಕೇಳಿದಿಯಷ್ಟೇ? ಆದರೆ ಚಂದ್ರಾ, ನಾನು ಇಂದೇ ಅಷ್ಟೊಂದು ಮ್ಯಾನವಾಗಿ ತೋರುತ್ತಿದ್ದೇನೆಂತಲ್ಲ. ನಾನು ಸ್ನೇಹ ಸೌಖ್ಯದಿಂದ ಶೂನ್ಯನಾಗಿರುವೆನೆಂಬದು ನನ್ನ ಮನಸ್ಸಿ ನಲ್ಲಿ ಬಿಂಬಿಸಿದಾಗಿನಿಂದ ನನ್ನ ಮುಖವು ನಿಜವಾಗಿದೆ. ನನ್ನ ಮೋರೆಯ ಎದುರಿಗೆ ಮೇಘಗಳು ಅಡ್ಡ ಬಂದಾಗ ಮಾತ್ರ ನಾನು ಮ ನವಾಗಿ ತೋರುವೆನೆಂದು ಪೂರ್ಣ ಶೋಧ ಮಾಡದ ಎಷ್ಟೋ ಕಗ್ಗ ಜನರು ತಿಳಿದಿರುತ್ತಾರೆ. ಆದರೆ ಅವರ ಆ ಮಾತು ಸತ್ಯವಾದದ್ದಲ್ಲ. ಮಿತ್ರಲಾಭವಿಲ್ಲೆಂಬ ಕಡುದುಃಖಮೇಘಪಟಲಗಳಿಂದ ನನ್ನ ಅಂತಃಕರಣವು ವ್ಯಾಪಿಸಿರುವದರಿಂ