ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಂದ

ವಿಕಿಸೋರ್ಸ್ದಿಂದ

ನಂದ ಗೋಕುಲದ ಒಡೆಯ. ಶ್ರೀಕೃಷ್ಣನ ತಂದೆ ವಸುದೇವನ ಪ್ರಾಣಸ್ನೇಹಿತ. ಹೆಂಡತಿ ಯಶೋಧೆ. ಕೃಷ್ಣಜನನವಾದ ಒಡನೆಯೇ ಕಂಸನ ಭಯದಿಂದ ವಸುದೇವ ಮಗುವನ್ನು ಈತನ ಮನೆಯಲ್ಲಿರಿಸಿದ. ಶ್ರೀಕೃಷ್ಣ ನಂದಯಶೋದರೆಯರ ಬಳಿಯಲ್ಲಿ ಬೆಳೆದ. ಅವನ ಬಾಲಲೀಲೆಗಳೆಲ್ಲ ನಡೆದುದು ಇಲ್ಲಿಯೇ. ಕೊನೆಗೆ ಶ್ರೀಕೃಷ್ಣ ಯಶೋದೆ, ನಂದಾದಿಗಳಿಗೆ ಅನೇಕ ಉಡುಗೊರೆಗಳಿತ್ತು ಸನ್ಮಾನ ಮಾಡಿದ. ಹಿಂದಣ ಜನ್ಮದಲ್ಲಿ ಈತ ದ್ರೋಣನೆಂಬ ಹೆಸರಿನ ಅಷ್ಟವಸುಗಳಲ್ಲಿ ಒಬ್ಬನಾಗಿದ್ದ. ಈತನ ಕಥಾವಿವರಗಳಿಗೆ (ನೋಡಿ- ದ್ರೋಣ) (ಡಿ.ಕೆ.ಇ.)