ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈಮಿತ್ತಿಕೇಷ್ಟಿ

ವಿಕಿಸೋರ್ಸ್ದಿಂದ

ನೈಮಿತ್ತಿಕೇಷ್ಟಿ - ನಿಮಿತ್ತವನ್ನು ಉದ್ದೇಶಿಸಿ ಮಾಡುವ ಇಷ್ಟಿ. ನಿಮಿತ್ತ ಭೇದದಿಂದ ನೈಮಿತ್ತಿಕೇಷ್ಟಿಗಳು ಹಲವಾರು. ಇವಕ್ಕೆಲ್ಲ ಶ್ರುತಿಯಲ್ಲಿ ಆಧಾರ ಉಂಟು. ಅಹಿತಾಗ್ನಿಯ ಅಗ್ನಿ ಮನೆಯನ್ನು ಸುಟ್ಟರೆ ಆತನು ಅಷ್ಟ ಕಪಾಲ ಸಂಸ್ಕøತ ಪುರೋಡಾಶದ್ರವ್ಯದಿಂದ ಹೋಮ ಮಾಡಬೇಕು. ಇದು ಕಾಮದ ತೀಷ್ಟಿ. ಅಂತೆಯೆ ಮಗ ಹುಟ್ಟಿದರೆ ದ್ವಾದಶ ಕಪಾಲ ಸಂಸ್ಕøತ ಪುರೋಡಾಶವನ್ನು ವಿಶ್ವಾನರ ದೇವತೆಯನ್ನುದ್ದೇಶಿಸಿ ಹೋಮ ಮಾಡಬೇಕು. ಇದು ಜಾತೇಷ್ಟಿ. ಇದರಂತೆಯೆ ದರ್ಶೇಷ್ಟಿಯ ಹವಿಸ್ಸು ನಾಶವಾದರೆ ಇಂದ್ರ ದೇವತಾಕ ಪಂಚಶರಾಹ ದಾನ್ಯ ಸಂಸ್ಕøತ ಒದನದ್ರವ್ಯದಿಂದ ಇಷ್ಟಿ ಮಾಡಬೇಕು. (ಎಸ್.ಎನ್.ಕೆ.)