Pages (key to Page Status)
ಲಿಂಗಾರ್ಪಿತವ ಮಾಡುವ ಅವಧಾನವೆಂತೆಂದಡೆ; ಅನ್ಯಾಯವು ಸೋಂಕಲೀಯದವಧಾನವು ಅರಿಷಡ್ವರ್ಗಂಗಳು ಮುಟ್ಟಲೀಯದವಧಾನವು. ಪಂಚಭೂತದ ಭವಿತ್ವವ ಕಳೆದು ಪ್ರಸಾದಕಾಯವಾಗಿಪ್ಪ ಪರಿಯ ನೋಡಾ. ಪಂಚೇಂದ್ರಿಯಂಗಳ ಗುಣವ ಕಳೆದು ಪಂಚವಿಂಶತಿ ತತ್ವದಲ್ಲಿ ಪರಿಣಾಮಿ ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು.