ಭವತೀ ಕಾತ್ಯಾಯನೀ/೩೯ನೆಯ ಗ್ರಂಥ/ಪ್ರಸ್ತಾವನೆ

ವಿಕಿಸೋರ್ಸ್ದಿಂದ

ಪ್ರಸ್ತಾವನೆ.


ಬಂಧವಿಮೋಚನಕ್ಕೆ ಅತ್ಯಂತ ಅವಶ್ಯವಾಗಿರುವ ಮನಶ್ಶುದ್ಡಿಯನ್ನು ಹ್ಯಾಗೆ ಮಾಡಿಕೊಳ್ಳಬೇಕೆಂಬುದನ್ನೂ, ಮನಸ್ಸಿನ ಧರ್ಮಗಳಾವೆ೦ಬದನ್ನೂ, ಅದರ ಸಂಯಮನದ ಕ್ರಮವನ್ನೂ ತಿಳಿಸುವುದಕ್ಕಾಗಿ ಈ ಚಿಕ್ಕ ಪ್ರಬಂಧವನ್ನು ಉಪನಿಷದಾದಿಗಳ ಆಧಾರದಿಂದ ನಮ್ಮ ಶಾಸ್ತ್ರಿಗಳು ಬಹು ಶ್ರಮಪಟ್ಟು ಬರೆದಿರುತ್ತಾರೆ. ಇಂದ್ರಿಯಗಳ ಬಲಶಾಲಿತ್ವವೂ, ವಿಷಯಗಳ ಪ್ರಭಾವವೂ ಇದರಲ್ಲಿ ಚೆನ್ನಾಗಿ ವರ್ಣಿಸಲ್ಪಟ್ಟಿರುವವು. ಒಟ್ಟಿಗೆ ಈ ಪುಸ್ತಕವನ್ನು ಓದುವುದರಿಂದ ವಾಚಕರಿಗೆ ಹಲವು ಹೊಸವಿಷಯಗಳ ಜ್ಞಾನವು ಆಗಿ, ಅವರ ಆತ್ಮಹಿತದ ಯತ್ನಕ್ಕೆ ಬಹುಮಟ್ಟಿಗೆ ಸಹಾಯವಾಗುವುದೆಂದು ನಾವು ನಂಬುತ್ತೇವೆ.

ಆತ್ಮನ ಬಂಧವಿಮೋಚನವಂತು ಇರಲಿ, ಸದ್ಯದ ಕಠಿಣಕಾಲದಲ್ಲಿ

ಪಾಠಶಾಲೆಯ ಬಂಧವಿಮೋಚನವು ಈ ಮೂರುಪುಸ್ತಕಗಳ ಪ್ರಸಿದ್ದೀಕರಣದಿಂದ ಆದಂತಾಗಿರುವುದು ಬಹು ಸಂತೋಷದ ಸಂಗತಿಯು! ಈ ಸಂತೋಷಕ್ಕೆ ನಮ್ಮ ಶ್ರೀಮಂತ ಯಶವಂತರಾವಜಠಾರ ಬಿ. ಎ., ಎಲ್, ಎಲ್, ಬಿ. ಈ ಮಹನೀಯರ ಉದಾರಾಶ್ರಯವೂ, ನಮ್ಮ ಪ್ರಿಯ ವಿದ್ಯಾರ್ಥಿಗಳಾದ ಚಿ!! ಶಂಕರ ಜೋಶಿ ತಿಳವಳ್ಳಿ, ಹಾಗು ಚಿ!! ರಾಮಭಟ್ಟ ಮುಳಗುಂದ ಮೊದಲಾದ ಎಲ್ಲ ವಿದ್ಯಾರ್ಥಿಗಳ ಪರಿಶ್ರಮವೂ ಕಾರಣವಾಗಿರುವುದರಿಂದ ಇವರೆಲ್ಲರ ವಿಷಯವಾಗಿ ನಾವು ಅತ್ಯಂತ ಕೃತಜ್ಞರಾಗಿರುವೆವು.

ಕಟ್ಟಕಡೆಯಲ್ಲಿ ನಮ್ಮ ಹಾವೇರಿಯ ಪ್ರಮುಖಸಾವುಕಾರ ಕೈ' ವಾ.

ಹಣಮ೦ತನಾಯಕ ಬಾದಾಮಿ ಇವರ ಮನೆತನದ ವಹಿವಾಟದಾರರಾದ ಮ, ರಾ ರಾ, ಜೀವಣ್ಣ ಕುಲಕರ್ಣಿ ಗುತ್ತಲ, ಹಾಗು ಪ್ರಸಿದ್ಧ ವಕೀಲರಾದ ಮ, ರಾ, ರಾ. ಮೋರೋಪಂ ಅಭ್ಯಂಕರ ಈ ಉಭಯ ಉದಾರಸಸಗ್ರುಹಸ್ಟರು ಪದೇಪದೇ ದ್ರವ್ಯಸಹಾಯಮಾಡಿ ಪಾಠಶಾಲೆಯ ಬಂಧವಿಮೋಚನ ಮಾಡಿದ್ದನ್ನು ಕೃತಜ್ಞತಾಪೂರ್ವಕವಾಗಿ ನಾವು ಉಲ್ಲೇಖಿಸದೆ ಇರಲಾರೆವು! ಶ್ರೀಗುರುವು ಇವರೆಲ್ಲರ ಕಲ್ಯಾಣವಮಾಡಲಿ!

ಸುರಸಗ್ರಂಥಮಾಲಾ ಹಾವೇರಿ.

ಕನ್ನಡಿಗರ ಸೇವಕ ,

೧೮೪೧ ಚೈತ್ರ ವದ್ಯ ೫ } ನೇ ತಿ. ಕುಲಕರಣಿ (ಗಳಗನಾಥ)