ಪುಟ:ಅಜಿತ ಕುಮಾರ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಜಿತ ಕುಮಾರ, ೧೯

ಅಜಿತನೇನು, ಬೆಚ್ಚಿದನೆ ಬೆದರಿದನೆ ? ಇಲ್ಲ. ಅವನು ಬಲು ಸೊಗ
ಸಾಗಿ ಕಾದಿದನು. ಕೊನೆಗೆ ಅಜಿತನ ಕೈಯಲ್ಲಿದ್ದ ಕಂಚೇ ತನ್ನ ಮರ
ಕ್ಕಿಂತ ಬಲವಾದ್ದೆಂಬದನ್ನು ಊಹಿಸಿ, ಕ್ಯಾಲಕನು ಗದೆಯನ್ನು ಬಿಸುಟು,
ಮುಷ್ಟಿಯುದ್ಧದಲ್ಲಿ ಆತನನ್ನು ಸೋಲಿಸಿ, ಸಮುದ್ರಕ್ಕೆ ಎಸೆದು ಬಿಡ
ಬೇಕೆಂದಿದ್ದನು. ಅಜಿತನಂತೂ ಈ ಜಟ್ಟಿ ಕಾಳಗಕ್ಕೆ ಹೊಸಬನಲ್ಲವಷ್ಟೆ!
ಅವನು ತಟ್ಟನೆ ತನ್ನ ಗದೆಯನ್ನು ಆಚೆಗೆಸೆದು, ಕ್ವಾಲಕನ ಕೊರಲನ್ನು
ಅವುಕಿ ಹಿಡಿದು, ಮೊಳಕಾಲನ್ನು ಹೊಟ್ಟೆಗಿಟ್ಟು, ಆ ಗೋಡೆಗೆ ಬಲವಾಗಿ
ಒತ್ತಿ ಹಿಡಿದನು. ಆಗ ಕ್ಷಾಲಕನಿಗೆ ಉಸುರಾಡದೆ, “ಅಯ್ಯಾ, ನನ್ನನ್ನು
ಬಿಟ್ಟುಬಿಡು ; ನಿನಗೆ ಹೋಗುವುದಕ್ಕೇನೂ ಅಡ್ಡಿ ಮಾಡುವುದಿಲ್ಲ” ಎಂದು
ಕೂಗಿದನು. ಅಜಿತನು "ಇಲ್ಲ , ಈ ಒರಟು ಹಾದಿಯು ಕಂಟಕ
ರಹಿತವಾದ ಹೊರತು ನಾನು ಹೋಗುವ ಹಾಗಿಲ್ಲ” ಎಂದು ಹೇಳಿ,
ಆತನನ್ನು ಬಲವಾಗಿ ಹಿಂದಕ್ಕೆ ಇನ್ನೂ ಇನ್ನೂ ಒತ್ತಿದನು. ಗೋಡೆಯ
ಕಲ್ಲುಗಳೆಲ್ಲವೂ ಮಾವಿನ ಮಿಡಿಗಳಂತೆ ಉದುರಿಹೋದುವು. ಕ್ಷಾಲಕನು
ತಲೆಕೆಳಗಾಗಿ ಆಚೆಗೆ ಬಿದ್ದು ಬಿಟ್ಟನು!

"ಆ ಮೇಲೆ ಕ್ಷಾಲಕನ ಗಾಯವಾದ ಮೈಯಿಂದ ನೆತ್ತರು ಹೊನಲು
ಹರಿಯುತ್ತಿರಲು ಅಜಿತನು ಅವನನ್ನು ಮೇಲಕ್ಕೆತ್ತಿ, “ಇದೆ, ಇಲ್ಲಿ ಬಾ,
ನನ್ನ ಕಾಲುಗಳನ್ನು ತೊಳೆ” ಎಂದು ಹೇಳಿ, ಕತ್ತಿಯನ್ನು ಈಚೆಗೆ ಸೆಳೆದು
ಹಿಡಿದುಕೊಂಡು, ಕೊಳದ ಬಳಿಯಲ್ಲಿ ಕುಳಿತುಕೊಂಡನು.

“ಇದೊ, ತೊಳೆ, ಇಲ್ಲದಿದ್ದರೆ ನಿನ್ನನ್ನು ಚೆಂಡಾಡಿ ಬಿಡುವೆನು !”
ಎಂದು ಪುನಃ ಗರ್ಜಿಸಿದನು.

ಕ್ಷಾಲಕನು ಅದರಿ ಬೆದರಿ ಹೆದರಿ, ಹೇಗಾದರೂ ಆತನ ಕಾಲು
ಗಳನ್ನು ತೊಳೆದನು. ಅಷ್ಟರಲ್ಲಿ ಅಜಿತನು ಇತರರಿಗೆ ನೀನಾವ ಗತಿ
ಯನ್ನು ಕಾಣಿಸಿರುವೆಯೊ ಆ ಗತಿಯೇ ನಿನಗೂ ಸಂಭವಿಸುವುದು ! ನಡೆ,
ನಿನ್ನ ಕೂರ್ಮನ ಹೊಟ್ಟೆ ತುಂಬಲಿ !” ಎಂದು ಹೇಳಿ, ಆತನನ್ನು ತುಳಿದು
ಕಡಲಿಗೆ ಬಿಸುಟನು.