"ಹೌದು ಹಾಗೇಂತ ಅವತ್ತೇ ಹೇಳಿದಿರಿ.”
"ಹೇಳಿದೆನೆ? ಪ್ರಿಯವಾದ ವಿಷಯ ಆಗಾಗ್ಗೆ ಬಾಯಿಂದ ಬರ್ತಿರುತ್ತೆ. ಮರೆವು ಅಂತಲ್ಲ..."
ಚಂದ್ರಶೇಖರಯ್ಯನವರ ಮಾತನ್ನು ಕೇಳಿಸಿಕೊಳ್ಳದವರಂತೆ ವಿಶ್ವನಾಥಯ್ಯ, ಹೊರಗೆ ರಸ್ತೆಯಂಚಿನಲ್ಲಿದ್ದ ವಿದ್ಯುತ್ ಕಂಬದತ್ತ ದೃಷ್ಟಿ ಹರಿಸಿದರು.
ಉಪಧ್ಯಾಯರ ಧ್ವನಿಯೇ ಝೇಂಕರಿಸುತ್ತ ಸಾಗಿತು:
"ನಿಮ್ಮ ಮಗ ಇವತ್ತು ತಾನೇ ಬಂದಿದಾರೆ. ನಾನು ನಾಳೆಯೋ ನಾಡದ್ದೋ ಬರಬಹುದಾಗಿತ್ತು. ಆದರೂ ಶುಭ ಪ್ರಸ್ತಾಪಕ್ಕೆ ವಿಳಂಬ ಸಲ್ಲದು ಅಂತ-”
ಕೊನೆಯ ವಾಕ್ಯ ಪ್ರತಿಸಾರೆಯೂ ಅರ್ಧಕ್ಕೇ ನಿಂತುಹೋಗುತ್ತಿತ್ತು. ಈತ ಪೂರ್ತಿ ಆಡಿ ಮುಗಿಸಬಾರದೆ—ಎನಿಸುತ್ತಿತ್ತು ವಿಶ್ವನಾಥಯ್ಯನವರಿಗೆ.
ಅವರ ಪತ್ನಿಗೆ ಒಂದೇ ಸಮಾಧಾನ. ಚಂದ್ರಶೇಖರಯ್ಯ ಬಂದುದರಿಂದ ತಂದೆ-ಮಗನ ಕಹಿ ಮಾತುಗಳ ವಿನಿಮಯ ವಿನಿಮಯ ಅಷ್ಟಕ್ಕೇ ತಡೆಯಿತಲ್ಲ! ಯಾರಿಗೆ ಗೊತ್ತು? ಚಂದ್ರಶೇಖರಯ್ಯ ಬಂದುದರಿಂದ ಒಳಿತೇ ಆದರೂ ಆಗಬಹುದು! ಪ್ರಸಾದ ಮನಸ್ಸು ಬದಲಾಯಿಸಲೂ ಬಹುದು. ಇದೆಲ್ಲ ಹೆತ್ತವಳ ಯೋಚನೆ.
ಒಳಗೆ ಗಿರಿಜೆ ಅಣ್ಣನಿಗೆ ಹೇಳಿದಳು:
"ಇವರು ನನಗೆ ಮೇಷ್ಟ್ರಾಗಿದ್ರು, ಪ್ರಸಾದು. ನನ್ನ ಕ್ಲಾಸಿನಲ್ಲಿ ಲೀಲಾ ಅಂತ ಇರ್ಲಿಲ್ವೆ? ನಾವಿದ್ದ ಹಿಂದಿ ನಮನೆಗೆ ಒಮ್ಮೆ ಬಂದಿದ್ಲು. ಇವರು ಆಕೆಯ ತಂದೆ."
ಪ್ರಸಾದ ಪದಗಳನ್ನು ಬಿಗಿಗಿಗೊಳಿಸುತ್ತ ಅಂದ:
"ಅಣ್ಣಯ್ಯನ ಸ್ನೇಹಿತರೊ?”
ಗಿರಿಜೆ ಅರ್ಥಪೂರ್ಣವಾಗಿ ನಕ್ಕಳು.
"ಅಂಥದೇನಿಲ್ಲಪ್ಪ. ಒಂದೆರಡ್ಸಲ ಬಂದಿದ್ರು."
"ಯಾಕೆ?"
"ನೀನೊಮ್ಮೆ ಅವರ ಮನೆಗೆ ಹೋಗ್ಬೇಕಂತೆ.”
"ಹೆಣ್ಣು ನೋಡೋದಕ್ಕೊ?"
ಪುಟ:ನಾಸ್ತಿಕ ಕೊಟ್ಟ ದೇವರು.pdf/೯೮
ಈ ಪುಟವನ್ನು ಪ್ರಕಟಿಸಲಾಗಿದೆ
೯೨
ನಾಸ್ತಿಕ ಕೊಟ್ಟ ದೇವರು