ಈ ಪುಟವನ್ನು ಪರಿಶೀಲಿಸಲಾಗಿದೆ
ಆಹ್ಯಾನ
ಕಲೆಯ ಲೋಕದ ಧರ್ಮಗ್ರಂಥ, ಆರ್ಯ, ದ್ರಾವಿಡ ಸಂಸ್ಕೃತಿಗಳ ಸಂಗಮ ವಾಗಲೇ ಸಾಧಿಸಿತ್ತು. ದಾಕ್ಷಿಣಾತ್ಯರ ಶಿವ, ಆರ್ಯರಿಂದಲೂ ಪುರಸ್ಕೃತ ನಾದ........ದರ್ಶನಗಳ ಘರ್ಷಣೆಯೂ ಸಂಕರವೂ ನಡೆಯುತ್ತಿದ್ದ ಆ ಕಾಲದಲ್ಲಿ ಅದ್ವೈತ್ಯ ಸಿದ್ದಾಂತದ ಅಧ್ವರ್ಯುವಾಗಿ ಶಂಕರ ಕಾಣಿಸಿಕೊಂಡ.
ಇತಿಹಾಸಕಾರ :
ಕೇರಳದಲ್ಲಿ ಹುಟ್ಟಿದ ಶಂಕರಾಚಾರ್ಯರು ಅದ್ವೈತ ಸಿದ್ದಾಂತವನ್ನು ಪ್ರತಿ ಪಾದಿಸುತ್ತ, ವೇದೋಪನಿಷತ್ತುಗಳ ಹಿರಿಮೆಯನ್ನು ಎತ್ತಿ ಹಿಡಿಯುತ್ತ, ದಿಗ್ವಿಜಯಕ್ಕೆಂದು ಹೊರಟು ಭಾರತದಾದ್ಯಂತ ಸಂಚಾರಮಾಡಿದರು. ದಕ್ಷಿಣದ ಶೃಂಗೇರಿ-ಕಾಂಚಿಗಳಲ್ಲಿ, ಪಶ್ಚಿಮದ ದಾರಕೆಯಲ್ಲಿ, ಉತ್ತರದ ಬದರೀನಾಥ ದಲ್ಲಿ, ಪೂರ್ವದ ಪುರಿಯಲ್ಲಿ ಪೀಠಗಳನ್ನು ಅವರು ಸ್ಧಾಪಿಸಿದರು.
ನಿರೂಪಕ :
ಆಸ್ತಿಕರ ನಿತ್ಯಪೂಜೆಯ ಸ್ತೋತ್ರಗಳ ಬಣ್ಣನೆಯಂತೆ ಏಳು ಪವಿತ್ರ ನದಿಗಳ, ಏಳು ಪವಿತ್ರ ಪರ್ವತಗಳ, ಏಳು ಪುಣ್ಯಕ್ಷೇತ್ರಗಳ ಭೂಮಿ ಭಾಗತ.
ಭಕ್ತ :
“ ಸೌರಾಷ್ರ್ಟೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನ | ಉಜ್ಜಯಿನ್ಯಾಂ ಮಹಾಕಾಲಮೋಂಕಾರಮಮರೇಶ್ವರೇ || ಕೇದಾರ ಹಿಮವತ್ಪ್ರಶ್ಟೇ ಡಾಕಿನ್ಯಾ ಭೀಮಶಂಕರಂ | ವಾರಣಾಸ್ಯಾಂಚ ವಿಶ್ವೇಶಂ ತ್ರ್ಯ ಂಬಕಂ ಗೌತಮಿತಟೇ || ವೈದ್ಯನಾಥ೦ ಚಿತಾಭೂಮೌ ನರೇಶಂ ದ್ವಾರಕಾವತೇ | ಸೇತು ಬಂಧೇ ಚ ರಾಮೇಶಾ ಘುಶ್ಮೇಶಂಚ ಶಿವಾಲಯೇ || ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ | ಸಪ್ತ జನ್ಮಕ್ರತಂ ಪಾಪಂ ಸ್ಮರಣೇನ ವಿನಶ್ಯತಿ ||
ನಿರೂಪಕ :
ಶೈವಾರಾಧನೆಯ ಪುಣ್ಯಸ್ಥಳಗಳ ನಾಮಾವಳಿಯಲ್ಲಾ ఇದೆ భాರತದ ವಿಸ್ತಾರದ ಕಲ್ಪನೆ.
೪೭