ನಾರಾಯಣ ಮೂರ್ತಿ ಬಂದಿರುವ ವಿಷಯವನ್ನು ತಂದೆಗೆ ಹೇಗೆ ತಿಳಿಸಬೇಕೆಂಬುದೇ ಆಕೆಯ ಪಾಲಿಗೆ ಬಗೆಹರಿಯುವ ಸಮಸ್ಯೆಯಾಯಿತು.
ಮನೆಗೆ ಬಂದ ತಂದೆ, ಪ್ರಸನ್ನಳಾಗಿದ್ದ ಮಗಳನ್ನು ನೋಡುತ್ತಾ
ಕೇಳಿದರು :
"ಏನೆ ಖುಷೀಲಿದೀಯಾ ? ಯಾರಾದರು ಗೆಳತೀರು ಬಂದಿದ್ದ
ರೇನು ?"
"ಯಾರು ಇಲ್ಲಪ್ಪ ಗೆಳತೀರು ಇಲ್ಲಿಗೆ ಬರದೆ ಒಂದು ವರ್ಷ
ವಾಯ್ತೋ ಏನೋ."
ಅದೇ ಸಂದರ್ಭದಲ್ಲಿ, ನಾರಾಯಣ ಮೂರ್ತಿ ಬಂದಿದ್ದ ವಿಷಯ
ಹೇಳುವುದು ಸಾಧ್ಯವಿದ್ದರೂ ತುಂಗಮ್ಮ ತಡವರಿಸಿದಳು.
ಊಟಕ್ಕೆ ಕುಳಿತಾಗ ಬಲುಪ್ರಯಾಸಪಟ್ಟು ಆಕೆ ಆ ವಿಷಯವನ್ನೆತ್ತ
ಬೇಕಾಯಿತು
"ಒಂದು ವಿಚಾರ ಹೇಳೋಕೆ ಮರ್ತೇ ಬಿಟ್ಟೆ ಅಣ್ಣ"
"ಏನೆ ಅದು'"
"ವದ್ದಕ್ಕನ ಮದುವೆಗೆ ಬಂದಿದ್ರೂಂತ ನೀನು ಹೇಳಿರ್ಲಿಲ್ವೆ ಆ
ದಿನ ?"
ತಂದೆ, ಮುಂದೇನು ಎನ್ನುವಂತೆ ಮಗಳ ಮುಖನೋಡಿದರು.
"ನಾರಾಯಣ ಮೂರ್ತೀಂತಲೋ ಏನೋ."
"ಹೂಂ. ಹೌದು"
"ಅವರು ಬಂದಿದ್ರು ಸಾಯಂಕಾಲ "
"ನಾರಾಯಣ ಮೂರ್ತೀನೇ ? ಇಲ್ಲಿಗೆ ಹ್ಯಾಂಗ್ಬಂದ ?"
"ಇಲ್ಲೇ ಇದಾರಂತಲ್ಲ ಈಗ. ಕೆಲಸ ಸಿಕ್ಕಿದ್ಯಂತೆ .."
"ನಂಗೊತ್ತೇ ಇರ್ಲಿಲ್ವೆ !"
ನಾರಾಯಣಮೂರ್ತಿ ಹೇಳಿದುದನ್ನು ಮಗಳು ತಂದೆಗೆ
ವರದಿಯೊಪ್ಪಿ ಸಿದಳು.
ಆ ತಂದೆಯ ಮನಸ್ಸಿನಲ್ಲಿ ಒಮ್ಮೆ ಕಮರಿ ಹೋಗಿದ್ದ ಆಸೆ ಮತ್ತೆ
ಚಿಗುರಿಕೊಂಡಿತು.