೧೧೬ ಚಿರಸ್ಮರಣೆ
ಶಾಲೆ. ಮುದುಕರ ಶಾಲೆಯಲ್ಲ. ಇದರಲ್ಲೆಲ್ಲ ಅಷ್ಟು ಆಸಕ್ತಿ ಇದ್ದವರು ಬೇರೆ
ಶಾಲೆ ಕಟ್ಟೆಸ್ಲಿ."
ಕೊನೆಯ ಮಾತು ನ೦ಬೂದಿರಿಯ ಮೇಲೆಸೆದ ಮರುಬಾಣ.ನ೦ಬೂದಿರಿ
ಸುಮ್ಮನಿದುದನ್ನು ಕಂಡು ಮಾಸ್ತರತ್ತ ತಿರುಗಿ, ನಂಬಿಯಾರರು ಹೇಳಿದರು:
"ಏನು ಹೇಳ್ತೀರಿ ಮಾಸ್ತರೆ?"
ತಮಗೆ ಅನುಕೂಲವಾಗುವಂತೆ ನಡೆದ ಈ ಪ್ರಕರಣದಿಂದ ಉತ್ತೇಜಿತರಾಗಿ
ಮಾಸ್ತರು ಉತ್ತರವಿತ್ತರು:
"ಈ ಶಾಲೆಯಲ್ಲೇ ವಯಸ್ಕರಿಗೂ ಪಾಠ ಹೇಳಬಾರ್ದು. ಅವರೇ ಎಲ್ಲಾದರೂ
ಜಾಗ ಗೊತ್ಮಾಡ್ಲಿ."
ಈಗ ನಂಬೂದಿರಿ ಮಾಸ್ತರನ್ನು ಕೇಳಿದರು:
"ಇದೆಲ್ಲ ನೋಡಿದರೆ ನಾಲ್ಕು ಕಾಸು ಹೆಚ್ಚಿನ ಸಂಪಾದನೆಗೆ ನೀವೇ ಏರ್ಪಾಟು ಮಾಡಿಕೊಂಡಹಾಗೆ ಕಾಣ್ತದೆ!"
ಮಾಸ್ತರ ಮುಖ ಅವಮಾನದಿಂದ ರಂಗೇರಿತು. ಆದರೂ ಅವರು ನಕ್ಕು.
ಅ೦ತಹ ಆರೋಪವೂ ಒಳ್ಳೆಯದೇ ಎ೦ದು ಭಾವಿಸಿ ಉತ್ತರವಿತ್ತರು:
"ಹಾಗೇನೂ ಇಲ್ಲ. ಕೊಟ್ಟರೂ ಮಹಾ ಅವರೆಷ್ಟು ಕೊಡಬಹುದು?"
"ಕೊಡ್ತಾರೆ ಮಣ್ಣು!" ಎಂದು ನಂಬಿಯಾರರು ಸಿಡುಕಿನಿಂದ ನುಡಿದು,
ಸಿಗರೇಟಿಗೆ ಕೈ ಹಾಕಿದರು.
ನಂಬೂದಿರಿ ನಗುತ್ತ ಅಂದರು:
"ನಿಮಗೆ ಒಂದು ಹೇಳ್ತೇನೆ ಮಾಸ್ತರೆ. ಅವರನ್ನ ನೆಚ್ಕೊ೦ಡು ನೀವಿರ್ಬೇಡಿ.
ನಿಮ್ಮ ರಾತ್ರಿಶಾಲೆ ನಾಲ್ಕು ದಿವಸ ನಡೆದ್ರೆ ದೊಡ್ಡದು. ವಿಧ್ಯಾ ಸರಸ್ವತಿ ಎಲ್ಲಿ--
ರೈತರೆಲ್ಲಿ!ಕುಣಿಯೋ ಕೋತೀನ ನೋಡೋದಕ್ಕೆ ಇವರೆಲ್ಲ ಬಂದಾರೆ ಹೊರತು..."
ರೈತರು ಮತ್ತು ವಿದ್ಯೆಗೆ ಸಂಬಂಧಿಸಿ ಇಬ್ಬರು ಜಮೀನ್ದಾರರಲ್ಲೂ
ಭಿನ್ನಾಭಿಪ್ರಾಯಗಳಿರಲಿಲ್ಲ. ಅವರೊಳಗಿನ ವೈಯಕ್ತಿಕ ಅಸೂಯೆಯಿಂದ ರೈತರಿಗೆ ಆ ವಿಷಯದಲ್ಲಿ ಹಿತವಾಗಿತ್ತು ಅಷ್ಟೆ.ಅದು ಸ್ಪಷ್ಟವಾಗಿತ್ತು,ಮಾಸ್ತರಿಗೆ.
ಕರುಣಾಕರನನ್ನೂ ನಂಬೂದಿರಿಯ ಮಕ್ಕಳನ್ನೂ ಕರೆದು ಮಾಸ್ತರೆಂದರು:
"ನನ್ನ ಕೊಠಡಿಗೆ ಹೋಗಿ ಕೂತ್ಕೊಳ್ಳಿ ಬಂದ್ಬಿಟ್ಟೆ."
ಅದು ತಮ್ಮ ಮಕ್ಕಳಿಗೋಸ್ಕರ ವಿಶೇಷ ಪಾಠ. ಜಮೀನ್ದಾರರಿಬ್ಬರಿಗೂ
ಅದರಿ೦ದ ಸಮಾಧಾನವಾಯಿತು.
"ಇನ್ನು ಹೋಗೋಣವೇನಪ್ಪ?” ಎಂದರು ನಂಬೂದಿರಿ ನಂಬಿಯಾರರಿಗೆ,