ಪುಟ:Chirasmarane-Niranjana.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ

೧೪೯

ನಮ್ಮ ರೈತರು ಕೂಡ ಅಲ್ಲಿಗೆ ಹೋಗಿದ್ದರಲ್ಲ?"
ಪರಿಸ್ಥಿತಿ ವಿಷಮಿಸುವುದಕ್ಕೆ ಇನ್ನು ಬಹಳ ಕಾಲವಿಲ್ಲವೆಂದು ಗೊತ್ತಿದ್ದರೂ ತಾವಾಗಿಯೇ ದುಡುಕಬಾರದೆಂದು ಮಾಸ್ತರೆಂದರು:
{{gap} "ಇದ್ದರೂ ಇರಬಹುದು. ನನಗಂತೂ ಯಾರೂ ಹೇಳಿಲ್ಲ.
" ಆಹಾ!ಆಹಾ!"
ಅದರ ಮಾರನೆಯ ದಿನವೂ ನಂಬಿಯಾರರು ಬುಸುಗುಟ್ಟುತ್ತ ಬಂದರು.
"ಮಾಸ್ತರೆ! ಒಂದು ಸುದ್ದಿ ಕೇಳಿದಿರೋ?'ಮಾತೃಭೂಮಿ' ಪತ್ರಿಕೆಗೆ ಕಳಿಸಿದರೂ ಕಳಿಸ್ಬಹುದು."
ಟೆಂಪ್ಲೇಟು:Gao ಶಾಂತವಾಗಿರಲು ಯತ್ನಿಸುತ್ತ ಮಾಸ್ತರೆಂದರು:
{{gap "ಏನಾಯ್ತು?"
"ಕಯ್ಯೂರಿನಲ್ಲಿ ಇನ್ನೆರಡು ದಿವಸದಲ್ಲಿ ರೈತಸಂಘ ಸ್ಥಾಪನೆಯಾಗ್ತದಂತೆ! ಹಹ್ಹಾ!"
"ಹಾಗೇನು? ಯಾರಂದರು?"
ನಂಬಿಯಾರರು ಕೆಂಗಣ್ಣಿನಿಂದ ಮಾಸ್ತರರನ್ನೆ ನೋಡಿ, "ಥೂ!" ಎಂದು ಉಗುಳಿದರು. ಒಮ್ಮೆಲೆ ಸಂಬೋಧನೆ ಏಕವಚನಕ್ಕಿಳಿಯಿತು; ಕಂಠ ಮತ್ತಷ್ಟು ನಿಷ್ಠುರವಾಯಿತು.
"ಒಳ್ಳೆ ಕನ್ನಡಿ ಹಾವು ಕಣಯ್ಯ ನೀನು! ಎಂಥವ್ನನ್ನ ಇಷ್ಟು ಕಾಲ ಸಾಕ್ದೆ! ಅಬ್ಬ!"
ಇನ್ನು ಸ್ವಾಭಿಮಾನದ ರಕ್ಷಣೆ ತಪ್ಪಾಗದೆಂದು ಮಾಸ್ತರು ನಂಬಿಯಾರರನ್ನು ನೇರವಾಗಿ ನೋಡಿ ನುಡಿದರು:

   "ನೀವು ವಿಶ್ವಸ್ಥ ಸಮಿತಿಯ ಪ್ರಮುಖರು, ನಾನು ಶಾಲೆಯ ಉಪಾಧ್ಯಾಯ. ಕೆಲಸ ಎಷ್ಟಿದೆಯೋ ಅಷ್ಟು ಮಾತಾಡಿ!"
ನಂಬಿಯಾರರು ಹಾವಿನ ಹೆಡೆ ಮುಟ್ಟಿದ ಹಾಗಾಗಿ,ಒಮ್ಮೆ ಅಳುಕಿ, ಮತ್ತೆ ರೌದ್ರದ ಮುಖವಾಡ ಧರಿಸಿ, ದರ್ಪದಿಂದ ಅಂದರು:

"ನಮ್ಮ ಶಾಲೆಯ ವಾರ್ಷಿಕ ಪರೀಕ್ಷೆಗೆ ಇನ್ನೆಷ್ಟು ದಿವಸ ಇದೆ?"
"ಒಂದು ತಿಂಗಳು."

{{gap} “ಅಷ್ಟು ದಿವಸ ತೆಪ್ಪಗಿದು ಕೆಲಸ ಮಾಡಿ. ಪರೀಕ್ಷೆ ಮುಗಿದ್ಮೇಲೆ ಚಾರ್ಜು ನನಗೆ ವಹಿಸ್ಕೊಟ್ಟು ಇಲ್ಲಿಂದ ಗಾಡಿ ಬಿಡಿ!"