ಪುಟ:Chirasmarane-Niranjana.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ

೫೧

ಪಂಡಿತರು ಮಾಸ್ತರೊಡನೆ ಮೆಲ್ಲನೆ ಅಂದರು:
“ಆಗಲೇ ಘಂಟೆ ಐದಾಯ್ತು. ಆರೂವರೆಗೆಲ್ಲ ಕತ್ತಲಾಗದೆ ಅಲ್ವ?"
"ಹೌದು; ಹೊರಟ್ಟಿಡೋಣ ಇನ್ನು."

ಅಲ್ಲಿದ್ದವರಲ್ಲಿ ಒಂದು ತಂಡ ಹೊರಟುಹೋದಮೇಲೆ, ಪಂಡಿತರೂ ಉಳಿದವರೂ ಎದ್ದರು. ಗಂಡಸರು ಆಡುತ್ತಿದ್ದ ಮಾತುಗಳನ್ನೆಲ್ಲ ಅಡುಗೆಯ ಮೂಲೆಯಿಂದಲೇ ಕೇಳುತ್ತಿದ್ದ ಮನೆಯೊಡತಿ, ಚಹ ಮಾಡಲೆಂದು ಚಡಪಡಿಸಿದಳು. ಮಾತು ಅರ್ಥವಾಗದೆ ತನ್ನ ಬಳಿಯಲ್ಲಿ ನಿದ್ದೆ ಹೋಗಿದ್ದ ಮಗಳನ್ನು ಅವಳು ಎಬ್ಬಿಸಿದಳು. ಚಹ ತಡವಾಗುತ್ತದೆಂದು, "ಇಷ್ಟು ಹೊತ್ತು ಸುಮ್ಮಗೆ ಇದ್ದೆಯಲ್ಲ.... ಏನೂ ಬುದ್ದಿ ಇಲ್ಲ ನಿನಗೆ!” ಎಂದು ಕೇಳಪ್ಪನ್ ಕೂಗಾಡಿದ.

ಪಂಡಿತರು ಮೃದುವಾದ ಸ್ವರದಲ್ಲಿ ಅಂದರು:

"ಈಗೇನೂ ಬೇಡೀಮ್ಮ, ಹೋಗ್ರ ರಾಮುಣ್ಣಿ ಹೋಟೆಲ್ಲಿ ಚಾ ಕುಡಿದು ಹೋಗ್ತವೆ ಅಲ್ಲಿ, ಹೊತ್ತಾಯ್ತು ಬೇರೆ. ಇನ್ನೊಂದ್ಬಲ ಬವಲ್ಲ, ಆಗ ಇವತ್ತಿಂದೂ ಸೇರಿಸಿ ಚಾ ಕೊಟ್ಟಿಡಿ."

“ಸಕ್ರೆ ಚಾಪುಡಿ ಜಾಸ್ತಿ ಇದೇಂತಾದ್ರೆ ನಾನೇನೋ ನಾಳೇನೇ ಬತ್ತೇನಪ್ಪೋ! ಎಂದು ಧಾಂಡಿಗ ನುಡಿದು ಎಲ್ಲರೂ ನಗುವಂತೆ ಮಾಡಿದ.
ಅಂತೂ ಅವರು ಹೊರಟರು.
ಬೆಳಗ್ಗಿನ ಹೊತ್ತು ಮರದ ಕೆಳಗೆ ಕುಳಿತಿದ್ದ ಜಾಗಕ್ಕೆ ಬಂದಾಗ, ಅಪ್ಪು ಪಿಸುದನಿಯಲ್ಲಿ ಚಿರುಕಂಡನನ್ನು ಕೇಳಿದ:
“ಈಗ ಪಂಡಿತರು ಎಲ್ಲಿಗೆ ಹೋಗ್ತಾರೋ?"
ಚಿರುಕಂಡನಿಗೆ ರೇಗಿತು.
“ಶ್! ಹಾಗೆಲ್ಲ ಕೇಳ್ಳಾರು.”
“ನಮ್ಮ ಹಳ್ಳಿಗೆ ಬರೋದಾದ್ರೆ ನಾವೇ ಕರಕೊಂಡು ಹೋಗೃಹುದಲ್ಲಾಂತ." ಆ ಯೋಚನೆ ಅರ್ಥಪೂರ್ಣವಾಗಿತ್ತು. ಏನೂ ಹೇಳಲು ತೋಚದೆ ಚಿರುಕಂಡ ಸುಮ್ಮನೆ ನಿಂತ.
“ಮಾಸ್ತರು ಬಂದೇ ಬರ್ತಾರೆ. ಅವರನ್ನಾದರೂ ಕರಕೊಂಡು ಹೋಗೋಣ" ಎಂದು ಅಪ್ಪುವೇ ಮಾತು ಮುಂದುವರಿಸಿದ.</ಬರ> “ಏನು, ಆ ಒಡಕು ದೋಣೀಲೇ?"</ಬರ> "ಓ.... ಆ ಜವಾಬ್ದಾರಿ ನನಗೆ ಬಿಟ್ಟಿಡು. ನೀನು ಸರಿಯಾಗಿ ನೀರು ತೆಗೀತಾ ಇದ್ರೆ ಸಾಕು."