ಈ ಪುಟವನ್ನು ಪ್ರಕಟಿಸಲಾಗಿದೆ
ಬರುತಿದ್ದವರನ್ನು ನೋಡುತ್ತಲೆ ಹುಡುಗಿಯರು ಓಡಿಹೋದರು.
“ಬಂದ ಷುರುನಲ್ಲೇ ನಿಮಗೆ ಒಳ್ಳೆ ಅನುಭವ ಆದಹಾಗಾಯ್ತು, ಅಲ್ವೆ ಜಯದೇವ್ ?'
“ಏನೋ ಸಾರ್... ”
ಮತ್ತೇನನ್ನ ಹೇಳಬೇಕೆಂದು ಜಯದೇವನಿಗೆ ತೋಚಲಿಲ್ಲ.
ಅಷ್ಟರಲ್ಲಿ ನಾಲ್ಕನೆಯ ತರಗತಿಯ ಹಿರೇಮಣಿ ಗ೦ಟೆಬಾರಿಸುವ. ಕಬ್ಬಿಣದ ಕೋಲಿನೊಡನೆ ಬಂದ.
"ಟೈಂ ಆಯ್ತೆ ಸಾರ್?”
“ಇನ್ನೂ ಎರಡು ನಿಮಿಷ ಇದೆಯಲ್ಲೋ ?... ಹೂಂ.. ಹೊಡಿ !”
ಶಾಲೆಯ ಗಂಟೆ ಭಾರಿಸಿತು. ಆ ಅಲೆಗಳು ಮೌನವಾಗುವುದಕ್ಕೆ ಮುಂಚೆಯೆ ಹುಡುಗ ಹುಡುಗಿಯರೆಲ್ಲ ತಮ್ಮ ತಮ್ಮ ತರಗತಿಗಳನ್ನು ಸೇರಿಕೊಂಡರು.
ರಂಗರಾಯರೆಂದರು:
“ನಾಳೆ ಬಂದ್ದಿಡುತ್ತೆ ಆಜ್ಞಾಪತ್ರ ಅಂತೂ ಈ ಊರಲ್ಲಿ ಇವತ್ತು ನಾನು ಮಾಡೋ ಪಾಠವೇ ಕೊನೇದು'
ಜಯದೇವನಿಗೆ ಬಲು ಖೇದವೆನಿಸಿತು.