ಈ ಪುಟವನ್ನು ಪ್ರಕಟಿಸಲಾಗಿದೆ
ಕರಿಂದ, ಯಾವನ, ಜೋಗಿನ ಜಲಪ ತ ಇದ್ದಹಾಗೆ ಅದರ ಸದ್ವ್ಯಯ ಆಗಬೇಕು.
ವೆಂಕಟರಾಯರು ಬರುತಿದ್ದುದರಿಂದ ಮಾತು ಅಲ್ಲಿಗೇ ನಿಂತಿತು.
ತಿಳಿಯಾದ ಜಲರಾಶಿಯಲ್ಲಿ ಮುಳುಗಿ ಎದ್ದು ಹೊರಬಂದ ಹಾಗೆ, ಜಯದೇವನ ಹೃದಯ-ಮೆದುಳು ನಿರ್ಮಲವಾಗಿದುವು. ಆತ ಕುಳಿತಲ್ಲಿಂದ ಎದ್ದು, ಒಬ್ಬನೇ ಅಲ್ಲೇ ದೂರ ಸರಿದ.
ಆ ರಾತ್ರೆಯೇ ಮನೆಗೆ ಹೊರಡುತ್ತ ವೆಂಕಟರಾಯರು ಕೇಳಿದರು :
“ಏನು ಜಯದೇವ, ಮಾತುಕತೆ ನಡೆದಿತ್ತಲ್ಲಾ..”
ಸುಳ್ಳಿನ ಹೊರತು ಬೇರೆ ಹಾದಿ ಇರಲಿಲ್ಲ.
“ಒಬ್ಬನೇ ಯಾಕಿದೀಯಾಂತ ಕೇಳ್ತಾ ಇದ್ರು”
“ಅಷ್ಟೇನಾ!”
'ಹೂಂ.”
“ಯಾವಾಗ ಹೊರಡ್ತಾರಂತೆ?
“ನಾಳೇನೇ”
“ನಾಳೆ ರಜೆಕೊಟ್ಬಿಡೋಣ. ನನಗಂತೂ ಇಪ್ಪತ್ತನಾಲ್ಕು ಘಂಟೆ ಅಖಂಡ ನಿದ್ದೆ ಮಾಡ್ಬೇಕು!”