ವಿಷಯಕ್ಕೆ ಹೋಗು

ಪುಟ:Duurada Nakshhatra.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಂಜೆ ಶಾಲೆ ಬಿಟ್ಟ ಮೂವರು ಉಪಾಧ್ಯಾಯರೂ ಹೊರಟಾಗ, ಹಾದಿಯಲ್ಲಿ ಆ ಊರಿನ ಪ್ರಾಥಮಿಕ ಶಾಲೆಯ ಉಪಾಧ್ಯಾಯರಿಬ್ಬರು ಕಾಣಲು ದೊರೆತರು. ಒಬ್ಬರು ಅದೇ ಊರಿನ ನಿವಾಸಿ. ಇನ್ನೊಬ್ಬರ ಸ್ಮಳ, ಐದು ಮೈಲುಗಳಾಚೆಯ ಹಳ್ಳಿ.

“ಹಳ್ಳಿಗೆ ಹೊರಟ್ರಾ, ತಿಮ್ಮಯ್ಯನವರೇ?

ಸುಖದುಃಖ ವಿಚಾರಿಸುವ ಧ್ವನಿಯಲ್ಲಿ ರಂಗರಾಯರು ಕೇಳಿದರು.

“ಹೂಂ ಸಾರ್. ಇನ್ನು ಬಿರ್ಬಿರ್ನೆ ಮನೆ ಸೇರಿದ್ರೂ ಕಷ್ಟ. ಎಷ್ಟೊತ್ಗೆ ಮಳೆ ಬರ್ತದೋ ಎಂಗೇಳೋಣ?”

ಪ್ರಾಥಮಿಕ ಶಾಲೆಯ ಆ ಇಬ್ಬರು ಉಪಾಧ್ಯಾಯರಿಗೂ ವಯಸ್ಕಾ ಗಿತ್ತು, ೨೫-೧-೫೪ ರ ಜಾತಿ. ಆಗ ನಾಲ್ವತ್ತನ್ನ ಸಮೀಪಿಸಿತ್ತೇನೋ ಸಂಬಳ....

ಇನ್ನೊಬ್ಬ ಉಪಾಧ್ಯಾಯರು,ಕೊಳೆಯಾಗಿದ್ದ ರುಮಾಲನ್ನು ಹಣೆಯು ಕೆಳಕ್ಕೆ ಸರಿಸಿದರು. ಮಾಸಿದ ಕೋಟಿನ ಜೇಬಿನೊಳಗಿಂದ ಹೊರತೆಗೆದರು. ನಶ್ಯ. .

ಇವರಲ್ಲಿ ಮುಖ್ಯೋಪಾಧ್ಯಾಯರು ಯಾರಿರಬಹುದು ಎಂದು ತರ್ಕಿಸಿದ ಜಯದೇವ, ಊಹಿಸುವುದು ಸುಲಭವಾಗಿರಲಿಲ್ಲ, ಯಾವ ವ್ಯತ್ಯಾಸವೂ ಇರಲಿಲ್ಲ ಅವರಿಬ್ಬರೊಳಗೆ ಯಾರು ಮುಖ್ಯೋಪಾಧ್ಯಾಯರಾದರೂ ಒಂದೇ ಎನಿಸಿತು ಜಯದೇವನಿಗೆ.

ನಶ್ಯ, ಮೂಗಿಗೇರಿಸಿದವರು ಜಯದೇವನನ್ನು ನೆಟ್ಟ ದೃಷ್ಟಿಯಿಂದ ನೋಡಿ ಕೇಳಿದರು :

“ಇವರು ಯಾರು?"

ನಂಜುಂಡಯ್ಯನಿಗೆ ಆ ಸರಸಸಂಭಾಷಣೆಯೇನೂ ಮೆಚ್ಚುಗೆಯಾದಂತೆ ತೋರಲಿಲ್ಲ. ಯಾರೋ ಬಡ ಸಂಬಂಧಿಕರ ಬಳಿ ಇದ್ದಂತೆ ಅವರು ನಿಂತಿದ್ದರು. ಉತ್ತರವಿತ್ತವರು ರಂಗರಾಯರೇ...