ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಸ್ವಾತಂತ್ರ್ಯ ದೀವಟಗೆ ೧೯೯
"ಸಾವಿರ ಜನ ಬರೋಕೆ ಹೊರಟಿದ್ವು. ಫಿರಂಗಿಯಿಂದ ಗುಂಡು ಹಾರಿಸಿದ್ರು. ನಾಲ್ಕು ದೋಣಿ ನಾಶವಾಯ್ತು. ಹೆಗ್ಗಡೇರು ಮುಳುಗಿ ಸತ್ಹೋದರು." "ಛೆ! ಹೀಗೂ ಆಯ್ತೆ?" ಎಂದ ಕಲ್ಯಾಣಸ್ವಾಮಿ. ನಂಜಯ್ಯ, ಮಾತನಾಡಿದವನನ್ನು ಪ್ರಶ್ನಿಸಿದ: "ಇವತ್ತು ಬೆಳಗ್ಗೆ ಆಂದಿಯಾ?" "ಹೂಂ." ಇತರರ ಕಡೆ ತಿರುಗಿ ನಂಜಯ್ಯನೆಂದ: "ಇಂಗ್ಲಿಷ್ನೋರು ಪತ್ತೇಮಾರ್ ಹತ್ತೋದಕ್ಕೂ ಈ ದೋಣಿಗಳು ಬರೋದಕ್ಕೂ ಸರಿಹೋಗಿಬ್ರೇಕು. ಒಯ್ಯುತಿದ್ದ ಫಿರಂಗಿಯನ್ನೇ ಇವರ ಮೇಲೆ ಹಾರಿಸಿದಾರೆ ಅನ್ನೋದು ಸ್ಪಷ್ಟ." "ಇಷ್ಟು ಒಳ್ಳೆಯ ದಿವಸದಲ್ಲಿ ಇಂಥ ಕೆಟ್ಟ ಸುದ್ದಿ !" ಎಂದ ಕಲ್ಯಾಣಸ್ವಾಮಿ. ಆತ ಆ ಇಬ್ಬರ ಕಡೆ ತಿರುಗಿ ಹೇಳಿದ: "ನೀವು ನಮ್ಮ ಸೈನ್ಯದಲ್ಲಿ ಇರ್ತೀರೇನಪ್ಪಾ?" ಅವರಲ್ಲ ಆಗಲೆ ಮಾತನಾಡಿದವನು ಉತ್ತರವಿತ್ತ: "ಅಪ್ಪಣೆ ಕೊಟ್ಟರೆ ನಾವು ಊರಿಗೆ ಓಗ್ತೀವಿ." "ಸರಿ. ರಾತ್ರೆ ಇಲ್ಲಿ ಊಟಮಾಡ್ಕೊಂಡು ಬೆಳಗ್ಗೆ ಎದ್ಹೋಗಿ." ಕರಿಯಪ್ಪ ಕರೆದರೂ ಅವರಿಬ್ಬರೂ ಮಿಸುಕಲಿಲ್ಲ. ಕಲ್ಯಾಣಸ್ವಾಮಿ ಪುನಃ ಹುಬ್ಬೇರಿಸಿ ಅವರತ್ತ ನೋಡಿದಾಗ ಆ ಮನುಷ್ಯನೆಂದ: "ರಾಜರನ್ನು ಕೇಳಿ, ಬರಬೇಕಾದ್ದು ಇಸಕೊಂಡು ಹೋಗಾನ ಅಂತ ಬಂದ್ವಿ." ಎಲ್ಲರೂ ಮತ್ತೆ ಕಿವಿ ನಿಗುರಿಸಿದರು. "ಏನು ಇಸಕೊಂಡು ಹೋಗೋದು?" "ಒಬ್ಬೊಬ್ಬರಿಗೆ ಒಂದೊಂದ್ಸಾವಿರ ವರಹ ಕೊಡ್ತೀನಿ ಅಂತ ಹೆಗ್ಗಡೇರು ಹೇಳಿದ್ರು." "ಅಹ್ಹಾ!" ಎಂದ ನಂಜಯ್ಯ. ಆಶ್ಚರ್ಯ ಪಡುತ್ತ ಕಲ್ಯಾಣಸ್ವಾಮಿ ಕಣ್ಣರಳಿಸಿ ಕೇಳಿದ;