160
ಸೇತುವೆ
ಇನ್ನು,ಹೋಗಿ. ಹೋಗಮ್ಮ ಅಹಲ್ಯಾ."
..ಮನೆಗೆ ಬಂದು ರಾಮಚಂದ್ರಯ್ಯ ವಿಷಯ ತಿಳಿದು, ಇಂಥವರ ಮೇಲೆಯೇ
ಎಂದಿಲ್ಲದೆ,ರೇಗಾಡಿದ.
ಗದ್ದಲವಾದಾಗ ಜಯರಾಮು_ರಾಧಾ ಇಬ್ಬರೂ ಮನೆಯಲ್ಲಿರಲಿಲ್ಲ.
ಬಂದೊಡನೆ ರಾಧಾ`, ಸುದ್ದಿ ಕೇಳಿ, ಚಂಪಾವತಿಯಲ್ಲಿಗೆ ಬಂದು ಅದೇನೆಂದು
ವಿಚಾರಿಸಿದಳು.
ಚಂಪಾ ಚುಟುಕಾಗಿ ಹೇಳಿ,ಅಂದಳು:
"ಏನೋ ಆಯ್ತು ಬಿಡು. ಅದನ್ನೆಲ್ಲಾ ಮನಸ್ಸಿಗೆ ಹಚ್ಕೋಬಾರದು."
ಆದರೆ ತನ್ನ ಗೆಳತಿಯ ಮೇಲೆ ಆರೋಪ ಹೊರಿಸಿದ ರಾಜಮ್ಮನನ್ನು ಕ್ಷಮಿಸಲು
ರಾಧಾ ಸಿದ್ಧಳಿರಲಿಲ್ಲ. ಸಾಮಾನ್ಯವಾಗಿ ಶಾಂತಳಾಗಿಯೇ ಇರುತ್ತಿದ್ದ ರಾಧಾ ಆ ದಿನ
ಔಡುಗಚ್ಚಿ ಅಂದಳು:
"ತಾಳಿ! ಆ ಮುದಿ ಗೂಬೆಗೆ ಮಾಡ್ತೀನಿ ಒಂದಿವ್ಸ!"....
ಮನೆಗೆ ಬಂದ ಮೇಲೆ ಆದುದೆಲ್ಲವನ್ನೂ ತಿಳಿದ ಶಂಕರನಾರಾಯಣಯ್ಯನಿಗೆ
ತುಂಬಾ ಕೆಡುಕೆನಿಸಿತು.
ವೆಂಕಟೇಶ ಬಹಳ ಹೊತ್ತಾದರೂ ಬರಲಿಲ್ಲವೆಂದು ರಾಜಮ್ಮ ಗಾಬರಿ
ಯಾದಳು.
"ಹೋಗಿ ಹುಡ್ಕೋ ಗುಂಡಾ," ಎಂದು ದೊಡ್ಡ ಮಗನಿಗೆ ಹೇಳಿದಳು.
"ನಿನಗೆ ಬುದ್ಧಿ ಇಲ್ಲವಮ್ಮ," ಎಂದು ಹೇಳಿ ಗುಂಡಣ್ಣ ಹಾಸಿಗೆ ಸುರುಳಿ
ಬಿಚ್ಚಿ ಮಲಗಿಕೊಂಡ.
ತನ್ನ ದೊಡ್ಡ ಮಗನ ಕೈಲಿ ಎಂದೂ ಅಂತಹ ಮಾತು ಕೇಳದೆ ಇದ್ದ ರಾಜಮ್ಮ
ತನ್ನ ದೈವವನ್ನು ಹಳಿಯುತ್ತ ಅಳುತ್ತ ಕುಳಿತಳು.
ನಡುರಾತ್ರೆಯ ಹೊತ್ತಿಗೆ ವೆಂಕಟೇಶ ಮನೆಗೆ ಬಂದ.
.....ವೆಂಕಟೇಶ_ಅಹಲ್ಯೆಯರ ವಿಷಯದಲ್ಲಿ ಚಂಪಾ ತೋರಿದ್ದು ಬರಿಯ
ಕನಿಕರವನ್ನು. ಆದರೆ ರಂಗಮ್ಮ ತಾವು ಮನಸ್ಸಿನಲ್ಲಿ ಲೆಕ್ಕ ಹಾಕಿದ್ದನ್ನು ಕೃತಿಗಿಳಿಸಲು
ಹೊರಟರು.
ಆದರೆ ರಾಜಮ್ಮ ಖಂಡ ತುಂಡವಾಗಿ ಹೇಳಿದಳು.
"ಯಾರು? ಆ ಸಕೇಶಿ ಮಗಳನ್ನೆ? ಆ ಬಜಾರಿ ಲೌಡೀನ ಸೊಸೆಯಾಗಿ
ಕರಕೋ ಅಂತ ನನಗೆ ಅಂತೀರಾ? ಈ ವಿಷಯ ಇನ್ನೊಮ್ಮೆ ಎತ್ಬೇಡಿ ರಂಗಮ್ನೋರೆ!"
ತಮಗೆ ಅವಮಾನವಾಯಿತೆಂದುಕೊಂಡರು ರಂಗಮ್ಮ.
ವಿಧವೆಯಾದ ಎದುರುಮನೆಯಾಕೆಯ ಕೇಶರಾಶಿಯನ್ನು ದಿನವೂ ನೋಡು
ತ್ತಿದ್ದ ರಾಜಮ್ಮ ಆಕೆಯ ಮಗಳನ್ನೆ ಸೊಸೆಯಾಗಿ ತರುವುದು ಸಾಧ್ಯವಿತ್ತೆ? ರಾಮ
ಚಂದ್ರಯ್ಯ ಕಾಹಿಲೆ ಮಲಗಿದಾಗ ವಿಷಯ ಬೇರೆಯಾಗಿತ್ತು. ತನ್ನ ಮಗ ವೆಂಕಟೇಶನ