ಪುಟ:Vyshakha.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು

15

“ರಂಗ್ಚೋರಿ, ರಂಗ್ಚೋರಿ...” ಅನ್ತ ಒಬ್ಬರಿಗೊಬ್ರು ಕದ್ನ ಮಾಡಕ್ಕೆ ಸುರು ಮಾಡಿದ್ರು... “ಇವುಕೆ ಇನ್ನೆನು ಬ್ಯಾರೆ ಕೇಮೆ ಇಲ್ಲ. ಇಂತೋರಿಂದ್ಲೇಯ ಊರಿಗೆ ಕೇಡು” –ಅನ್ನುಸಿ, ಲಕ್ಕ ಅಲ್ಲಿಂದ ಕಾಲುಕಿತ್ತ. ಜಪ್ಪಯ್ಯನ ಮಠ ಬಳಸ್ತಾ ಇರೂವಂಗೆ ಮಠದ ಅಯ್ಯನೋರು ವೊರಗೆಲ್ಲೂ ಕಾಣಿಸ್ನಿಲ್ಲ. ವೊಕಮಂಟಪ್ದಲ್ಲಿ ಅವರು ಕುಂತುಕೊತಿದ್ದ ಕಾಲಮಣ್ಣೆ ಹಾಸ್ದ ಚಿಂಕೆ ಚರ್ಮದ ಮ್ಯಾಲೆ ಕೈಯಾಡಿಸ್ತ ಏನೋ ಯೋಚಣೇಲಿ ಮುಳುಗಿ, ನಂಜೇಗೌಡ ಕುಂತಿದ್ದು ಕಾಣಿಸ್ತು. ನಂಜೇಗೌಡಂದು ಆದ್ದಿನ ಕಣ್ಣು. ಆದ ತೆಪ್ಪಿಸಿ ವೋಗಾದು ಸಾದ್ಯವ?- ಲಕ್ಕ ಯೋಚಿಸ್ತ ನಿಂತ, ಮಠದಯ್ನೋರು ಸಿವಪಾದಪ್ಪಾರ ಇಸ್ಯಾದಲ್ಲಿ ಲಕ್ಕಂಗೆ ಅಪ್ಪಾರ ಗೌರವ. ಸ್ವಾಮಿಗಳ್ಗೆ ವಯಸ ಆಗಿದ್ರೂವೆ ಕೆಂಪಕೆಂಪಗೆ ಯಾವುತ್ತೂ ಒಳ್ಳೆ ತಾಮ್ರದ ಜೆಂಬು ವೋಳೆಯೂವಂಗೆ ತಳತಳಗುಟ್ಟೋ ಮೊಕ. ಅಗಲಾದ ಅಣೆ. ಅದ ತುಂಬದಂಗೆ ಮೂರು ಬೆಟ್ಟಿನ ಈಬೂತಿ... ಆ ಮೊಕ ನ್ಯಾಡಕ್ಕೇ ಒಂದು ಚೆಂದ ಆದ್ರೆ ಜನಕೆ ಈ ಸ್ವಾಮಿಗೋಳು ವೊರಗಡೆ ಕಾಣಿಸೋದೆ ಅಪುರ್ಪ. ಮೂಡ್ಲು ಕೆಂಪಾಗಕ್ಕೂ ಮುಂಗಾಗಿ ತಾನಮಾಡಿ ದ್ಯಾವರ ಕ್ವಾಣೆ ಸೇರುದ್ರೂ ಅಂದ್ರೆ ಅವರಲ್ಲಿಂದ ವೋರೀಕೆ ಬರೂವೋಟರಲ್ಲಿ ಸ್ವಾಮಿ ನೆತ್ತಿ ದಾಟಿ ಒಂದು ಮಾರು ಇಳುದಿರ್ತಿದ್ದ... ಇನ್ನು ಅವರೂಟ-ಒಂದು ಕೂಸು ಮಾಡಕ್ಕಿಂತಲೂ ಕಮ್ಮಿಯಂತೆ... ಒಂದೀಟು ಅಣ್ಣು ಅಂಪ್ಲು. ಒಂದು ಮುಕ್ಕಾಲು ಗಳಾಸು ಹಾಲು- ಈ ತಪಸೀಲ ಲಕ್ಕಂಗೆ ಕ್ವಟ್ಟಿದ್ದೋಳು ಅಡುಗೆ ಮಾದಮ್ಮ...ಆಮ್ಯಾಕೆ ದಪ್ಪ ದಪ್ಪ ಪುಸ್ತಕ ಓದ್ತಾ ಕುಂತಿರಾದು. ಸಿವರಾತ್ರಿ, ಬಸವಜಯಂತಿ ಇಂತ ಅಬ್ಬಗಳಲ್ಲೇಯ ಜನ ಯೆಚ್ಚಾಗಿ ಅವರ್ನ ಕಾಣಬೇಕಾರೆ!... ಆದ್ರೆ ನಂಜೇಗೌಡ್ನಂತ ವಸಿ ಮಂದಿ ಭಕ್ತರ್ಗೆ, ಅವ್ರ ಸಮೀಪಾನೆ ಓಡಾಡೂ ಅವಕಾಸ!... ಅಯ್ಯನೋರ ಇಸ್ವಾಸವ ನಂಜೇಗೌಡ್ರ ತನ್ನ ವರ್ಚಸ್ಸ ಊರಿನಾಗೆ ಎಚ್ಚಿಸಿಗಳಕ್ಕೆ ಚೆಂದಾಗಿ ಬಳಸ್ತಿದ್ದ. ಬುದ್ಧಿಬುದ್ಧೀವಂತ ಸ್ವಾಮಿಗೊಳು ಯೋಳ್ದ ಕೆಲುಸವ ಕಾಲ್ನಲಿ ತೋರಿದ್ರ ಕಯ್ನಲ್ಲಿ ಮಾಡ್ತ, ಆಸಾದ ಅಂತಿದ್ರಿಂದ ಊರ್ನಲ್ಲಿ ಗೌಡನ ಆಟಕ್ಕೆ ತಡೆ ಅನ್ನಾದೆ ವೊಂಟೋಗಿತು... ಗೌಡನ ಇತ್ಲ ಮಲ್ಲಿಗೆ ಊವು ಬಂದರೇಯ ಅಯ್ಯನೋರ ಪುಜೆ- ಅಂತಾವ ಜನ ಆಡಿಕೊತ್ತಿದ್ರು!... ಅದ್ಯಾವ ಮಾಯದಲ್ಲೊ ನಂಜೇಗೌಡನ ದ್ರುಸ್ಟಿ ಲಕ್ಕನ ಕಡೀಕೆ ವೋಳ್ತು. ಲಕ್ಕ ತಬ್ಬಿಬ್ಬಾದ, “ಅದ್ಯಾಕೊ ಲಕ್ಕ ಹೊರಗೇ ನಿಂತೆ. ಇತ್ತತ್ತ ಬಾ” ಗೌಡ ಕರದೇ