ಪುಟ:Vyshakha.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು

21

ಉಟ್ಕಂಡು ಸಿವಪುಜೆಗೆ ಈನ್ನೇನು ಕುಂತುಗೋಬೇಕು- ಆ ವ್ಯಾಳ್ಯಕ್ಕೆ ಸರ್ಯಾಗಿ ಅವರಿಗೆ ನಡಕೊತ್ತಿದ್ದ ಇನ್ನೊಬ್ಬ ಭಕ್ತ ಬರಬೇಕ?... ಬಂದೋನು ಉಳಿಕೆಯೋರಂಗೆ ಗಮ್ಮನೆ ಇರಬ್ಯಾಡದ?...ಮೊದ್ಲೆ ಎದೆ ಸೀಳುದ್ರೆ ಮೂರು ಅಕ್ಸರ ಕಲೀದ ರೈತಾಪಿ ಕುಳ!... ತನ್ನ ತ್ವಾಟದಲ್ಲಿ ಬೆಳುದಿದ್ದ ಕೆಂಡಸಂಪಿಗೆ ಹೂವ ಮಸ್ತಾಗಿ ತಕ್ಕಂಬಂದು, “ತಕ್ಕನ್ನಿ ನನ್ನೊಡೆಯ. ನಿಮ್ಮ ಸಿವಪುಜೆಗೆ ತಂದಿವ್ನಿ” ಅಂತ ಭಕ್ತಿಯಿಂದ ಅವ್ರ ಮುಂದಕಿಟ್ಟ. ಆ ಅಯ್ಯನೋರಿಗಾಗ್ಲೆ ಎಪ್ಪತ್ತೆಂಟರ ಮುಪ್ಪು. ಬೋ ಮಡಿ. ದೂರದಿಂದ್ಲೇಯ “ಸಂತೋಸ, ಸಂತೋಸ, ಸಂಪಗೆ ಹೂವು ಪಸಂದಾಗದೆ. ಯಾಪಾಟಿ ತಂದು ಬುಟ್ಟೆಯಪ್ಪ?” ಅಂದ್ರು. ತಟಕ್ನೆ ಆ ಸಿವಭಕ್ತರೋನು, “ನಿಮ್ಮ ಪಾದಕೆ, ಇದ್ಯಾವ ಮಹಾ ಸ್ಯಾಟ-ಬುಡಿ ನನ್ನೊಡೆಯ. ಬೇಕಾದರೆ, ಇದ್ರ ಅತ್ತರೋಟು ಹೂವ ನಿಮ್ಮ ಪಾದಕ್ಕೆ ತಂದು ಎರೀತೀನಿ”-ಅನ್ನಾದ? ಆ ಮಡಿ ಅಯ್ಯನೋರು ಈ ಕೇಳಬಾರ್ದ ಮಾತ ಕೇಳಿ, ದಿಗ್ಗನೆದ್ದು, “ಮಡಿ ವೋಯ್ತು, ಮಡಿ ವೋಯ್ತು” ಅಂತಾ ಅಂತಾ ತಾನ ಮಾಡಕ್ಕೆ ಪುನಾ ಬಚ್ಚಲ ಕ್ವಾಣೆಗೋದ್ರು...ಇದ ನೋಡಿ, ಅಲ್ಲಿ ನೆರುದಿದ್ದ ಭಕ್ತರಿಗೆಲ್ಲ ತಮ್ಮ ಸ್ವಾಮಿಗಳ್ಗೆ ಎಂತಾ ಅಪಚಾರ ಆಯ್ತೂಂತ ಸಿಟ್ಟು. ಅವಯ್ಯ ಕೆಂಡ¸ಂಪಿಗೆ ಹೂವ ಕುಯ್ಯಕ್ಕೆ ಲಕ್ಕನ್ನೂ ಕರಕಂಡೋಗಿದ್ರಿಂದ, ಲಕ್ನೂವೆ ಇದ್ನೆಲ್ಲ ನೋಡ್ತಾ ಕುಂತಿದ್ದ. ಸಿಟ್ಟು ಅತ್ತಿ ಕುದೀತಿದ್ದ ಭಕ್ತಾದಿಗಳು, “ಏನಯ್ಯ, ವಳ್ಳೆ ಗೆಣೆಕಾರ ನೀನು!... ಈ ಕೆಲಸುವಾ ಮಾಡಾದು? –ಏನೇನೊ ಮಾತಾಡಿ ಬುದ್ದಿಯೋರು ಈ ಇಳಿ ವಯಸ್ನಲ್ಲಿ ಪುನಾ ತಾನ ಮಾಡೊ ತರ ಮಾಡಿದ್ಯಲ್ಲ?”- ಅಂತ ಒಬ್ಬ ತಪ್ಪ ಒಬ್ಬರು ಚೀಮಾರಿ ಅಕಿದ್ರು. ಅವಯ್ಯಂಗೆ ತನ್ನಿಂದ ಆಚಾತರ್ಯ ಅದ್ದು ಮಂದಟ್ಟಾಗಿ, ಸಾಮಿಯೋರು ತಾನದ ಮನಿಂದ ವರೀಕೆ ಬರಾದ್ನೆ ಕಾಯ್ತಿದ್ದು, ಬಂದೊಡ್ನೆ, ಕವಕ್ನೆ ಅವ್ರ ಮುಂದ್ಕೆ ಹಾಸಿ ಅಡ್ಡಬಿದ್ದು- “ಮಾ ತೆಪ್ಪಾಯ್ತು, ನಿಮ್ಮ ಪಾದ. ಇನ್ನೊಂದು ಸತಿ ನಾನೇನಾರ ಈ ತೆರ ಬಾಯಿ ತೆಪ್ಪಿ, ಕೆಟ್ಟ ವಾಕ್ಸ ಕಡಿಸುದ್ರೆ, ನನ್ನ ಕೆಡೀಕಂದು ಮುಖಳೀಗೆ ಹೆಟ್ಟಿ” ಅಂದುಬುಟ್ಟ! ಆ ಮಾತ ಕೇಲಿದ ಸ್ವಾಮಿಗೋಳು ಬೆಚ್ಚೋದ್ರು. ಪುನಾ ತಾನ ಮಾಡಕ್ಕೆ