ಪುಟ:Vyshakha.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44

ಕೂಗೇಳಿ, ತನ್ನ ಗುಡ್ಲು ಕಡೀಕೆ ದೌಡು ವೋಡ್ದ.

ಲಕ್ಕ ಗುಡ್ಲು ಸೇರೋ ವ್ಯಾಳ್ಯಕ್ಕೆ, ಅವ್ನು ನೆಂದು ಪಜ್ಯಾಗಿದ್ದ. ವೋಟತ್ತಿಗೆ ಅವನವ್ವನೂ ನೆನಕೊಂಬಂದು ಗುಡ್ಲ ವಳಗೆ ತನ್ನ ಸ್ಯಾಲೆ ಇಂಡಿ ನೀರು ಕಡುಸ್ತ ಇದ್ಲು. ಆಗ ಉಡುಗ ಲಕ್ಕ ಕೇಳಿದ್ದ.

“ಇದ್ಯಾವ ಮಳೆಯವ್ವ ಇದು- ಇದ್ದಕಿದ್ದಂಗೆ ಉಯ್ದುಬುಡ್ತಲ್ಲ?”

“ಇದು ಉಯ್ಯೊ ಮಳಯೇಯ- ಗೌರಿ ತಿಂಗಳಲ್ವ- ಉಬ್ಬೆ ತುಳುದು ಉತ್ತರೆ ಬಂದದೆ! ಗೌರಮ್ಮ ಬತ್ತಾಳಲ್ಲ- ಅದಕೆ ಇದು ಉಯ್ದು ಧರೆ ತಣಿಸಿ ಗೌರಮ್ಮಗೆ ನಡೆಮಡಿ ಆಸ್ತಾ ಅದೆ,” ಸ್ಯಾಲಿಂದ ನೀರು ಕಡುಸ್ತ ಕಡುಸ್ತಾನೆ ಕಲ್ಯಾಣಿ ಇವರಿಸಿದ್ಲು.

ಬೊಡ್ಡ ಇವರಿಬ್ರ ಜ್ವತ್ಗೆ ಮಯ್ಯಿ ನೀರ ಅತ್ತಾಗಿ ಇತ್ತಾಗಿ ವದುರ್ತ ನಿಂತಿತ್ತು.

ದ್ಯಾವಾಜಮ್ನೆ ನಾಕು ಆಡೂ ಇವ್ರ ಗುಡ್ಲ ವಳೀಕೆ ಮಳೆ ಎರಚಲು ತಡೀನಾರದೆ ಬಂದುವಕ್ಕಡೀಕೆ ನಿಂತಿದ್ದೊ. ಅಲ್ಲಿದ್ದೋರಲ್ಲಿ ನೆನೀದೇ ಇದ್ದೋಳು ಅಂದ್ರ ಲಕ್ಕನ ತಂಗಿ ಸವುನಿ...ಆ ಎಣ್ಣು ಯಾರದೋ ಅಟ್ಟಿಗೆ ಕೆಲ್ಸಕ್ಕೋಗಿದ್ದು, ಮಳೆ ಅನಿ ಇಡ್ತಿದ್ದಂಗೆಯೇ ಗುಡ್ಲಿಗೆ ವೋಡಿಬಂದಿತ್ತು. ಆಡು ಅವಳ ಅತ್ರಕ್ಕೆ ಚಿಗಿದಾಗ, ಆ ಎಣ್ಣು,

“ತೂ,- ಈ ಅಳಗೇರಿಯೋವು ಯಾಕೆ ಬಂದೊ ನಮ್ಮ ಗುಡ್ಲಿಗೆ. ಇವ್ರ ಸಿಂಡ ನಾ ತಡೀನಾರಿ” ಅಂತಿತ್ತು.

“ವೊ- ನಿನ್ನ ಸಾಸ್ಟ್ಯಾವ ನಾ ನೋಡನಾರಿ, ಸುಮ್ಕಿರೆ ಸಿವುನಿ... ನಮ್ಮತ್ರಯಿದ್ದ ಏಡು ಆಡ, ಇಂದ್ಕೆ ನೀನೇ ಅಟ್ಟಿಕಂಡು ವೋಯ್ತಿದ್ಯಲ್ಲ? ಆಗ ಅವ್ರ ಸಿಂಡು ನಿಂಗೆ ಸೆಡೀತಿತ್ತೇನೊ?” ಅಂದ್ಲು ಅವ್ವ...

6 ಸಂಧ್ಯಾವಂದನೆ ಮುಗಿದ ಬಳಿಕ, ಬೆಳ್ಳಿಯ ಸಂಪುಟದಿಂದ ದೇವರುಗಳನ್ನು ಒಂದೊಂದಾಗಿ ಅಗಲವಾದ ಬೆಳ್ಳಿಯ ತಟ್ಟಿಗೆ ತೆಗೆದಿಟ್ಟು ಕೃಷ್ಣಶಾಸ್ತ್ರಿಗಳು ಮಂತ್ರ ಪಠಿಸುತ್ತ ರುಕ್ಮಿಣಿಯು ತಂದಿಟ್ಟ ಹಾಲಿನಲ್ಲಿ ಅಭಿಷೇಕ ಮಾಡಿದರು. ಅನಂತರ ಸ್ಪಟಿಕದ ಶಿವಲಿಂಗ, ಬೆಳ್ಳಿಯ ಸುಬ್ರಹ್ಮಣ್ಯೇಶ್ವರ, ಕಾಶಿಯಿಂದ ಅವರ ಅಜ್ಜ ಸೊಮಯಾಜಿಗಳು ತಂದಿದ ಅಮೃತಶಿಲೆಯ ಅನ್ನಪುರ್ಣಾ ಮತ್ತು ನರಸಿಂಹ ಸಾಲಿಗ್ರಾಮ ಎಲ್ಲವನ್ನೂ ಪುಟ್ಟ ಚೌಕುಳಿ ಮಡವಸ್ತ್ರದಿಂದ ಒಂದೊಂದಾಗಿ ಒರಿಸಿ, ಮತ್ತೆ ಸಂಪುಟದೊಳಗೆ ಇಟ್ಟರು.