ಬಂದದೆಲ್ಲ ಬರಲಿ

ವಿಕಿಸೋರ್ಸ್ದಿಂದ

ರಚನೆ: ಶ್ರೀ ಪುರಂದರದಾಸರು


ಬಂದದೆಲ್ಲ ಬರಲಿ
ಗೋವಿಂದನ ದಯ ನಮಗಿರಲಿ

ಅರಗಿನ ಮನೆಯೊಳಗಂದು
ಪಾಂಡವರನು ಕೊಲಬೇಕೆಂದು
ದುರುಳ ಕೌರವ ಬಂದು ಅತಿ
ಹರುಷದಲಿರುತರಿಲಂದು
ಹರಿ ಕೃಪೆ ಅವರಲ್ಲಿದ್ದ ಕಾರಣ
ಘೋರ ದುರಿತ ಬಯಲಾದುದಲ್ಲವೆ

ಆರು ಒಲಿಯದರಿಲೆನ್ನ
ಮುರಾರಿ ಎನಗೆ ಪ್ರಸನ್ನ
ಹೋರುವ ದುರಿತ ಬನ್ನ
ಅದ ನಿವಾರಿಪ ಕರುಣ ಸಂಪನ್ನ
ಸಿರಿ ರಮಣನ ಸಿರಿಚರಣ ಶರಣರಿಗೆ
ಕ್ರೂರ ಯಮನು ಶರಣಾಗತನಲ್ಲವೆ

ಸಿಂಗನ ಪೆಗಲೇರಿದವಗೆ
ಕರಿ ಭಂಗವೇಕೆ ಮತ್ತವಗೆ
ರಂಗನ ದಯೆವುಳ್ಳವಗೆ
ಭವ ಭಂಗಗಳೇತಕ್ಕವಗೆ
ಮಂಗಳಮಹಿಮ ಪುರಂದರ ವಿಠ್ಠಲ
ಶುಭಾಂಗನ ದಯವೊಂದಿದ್ದರೆ ಸಾಲದೆ


ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ