Pages (key to Page Status)
ಬತ್ತೀಸಾಯುಧವನು ಅನಂತ ದಿನ ಸಾಧಿಸಿ ಪಿಡಿದರೂ ಕಾದುವುದು ಒಂದೇ ಕೈದು ಒಂದೇ ದಿನ. ಆ ಹಾಂಗೆ_ಫಲ ಹಲವಾದಡೂ ಅರಿವುದೊಂದೇ ಮನ ಒಂದೇ ಲಿಂಗ ! ಆ ಮನವು ಆಲಿಂಗದ ನೆಲೆಯಲ್ಲಿ ನಿಂದು ಸ್ಥಲಲೇಪವಾದ ಮತ್ತೆ ಸ್ಥಲವಿಲ್ಲ ನಿಃಸ್ಥಲವಿಲ್ಲ ನಿಜ ನೀನೇ ಗುಹೇಶ್ವರಾ.