ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ y ಮಾಡಿದ್ದುಣೋ ಮಹಾರಾಯ, ಚುಚ್ಚಿ ಕೊಂಡಿತ್ತು. ಚಾಪೆಯ ಕೆಳಗೆಲ್ಲಾ ನೆಕ್ಕಲಮುಳ್ಳು ಹರಡಿ ತು, ಇದರಿಂದ ಜಗಲಿಯ ಕೊನೆಯಲ್ಲಿ ನಿಂತುಕೊಂಡು ಅ ವನನ್ನು ಮೇಲಕ್ಕೆ ಎತ್ತುವುದೂ ಕಷ್ಟವಾಗಿತ್ತು, ದೀಕ್ಷಿತನಲ್ಲಿ ಆವೂರ ಜನರಿಗೆಲ್ಲಾ ಹೆಚ್ಚಾದ ಗೌರವವಿದ್ದ ಕಾರಣ, ಈತನ ಮಾತಿನಂತೆ ೧೫-೨೦ ಜನರು ಸೇರಿದರು. ಉಪಾಯವಾಗಿ ನಾರಪ್ಪಯ್ಯನನ್ನು ಮೇಲಕ್ಕೆ ಎತ್ತಿದರು. ಆದರೂ ಅವನಿಗೆ ಮೂರ್ಛ ತಿಳಿಯಲಿಲ್ಲ. ಮುಳ್ಳು ಚಾಪೆಯೊಳಗಿನಿಂದ ಹಾದು ದೇಹಕ್ಕೆ ನಾಟಿಕೊಂಡಿತ್ತು, ಮುಳ್ಳು ನಾಟಕೊಂಡಿದ್ದ ಕಾರಣ ಚಾವೆಯನ್ನು ಕೀಳುವುದು ಕಷ್ಟ. ಸೂಜಿ ಊರುವುದಕ್ಕೆ ಸ್ಥ ಳವಿಲ್ಲದಂತೆ ಮುಳ್ಳು ರೋಮ ರೋಮದ ಕುಳಿಗೂ ಬಲಿದಿ ತು, ಚಾವೆಯನ್ನೆ ಕಿತ್ತರೆ ದೇಹದ ಕಂಡವೇ ಕಿತ್ತುಬರುವ ಹಾಗಿತ್ತು. ಒಂದೊಂದು ಮುಳ್ಳನು, ಳುವುದೂ ಅದಕ್ಕಿಂ ತ ಕಷ್ಟವಾಗಿತ್ತು. ಕೆಳಗೆ ಮಲಗಿಸುವದಕ್ಕಿಲ್ಲ, ಕೂರಿಸು ವದಕ್ಕಿಲ್ಲ, ಹೀಗೆ ಉಭಯವೇಧೆ ಉಂಟಾಗಿತ್ತು. ದೇಹದಮುಂ ಭಾಗದಲ್ಲಿ ಮುಳ್ಳು ಬಲಿದಿರಲಿಲ್ಲವಾಗಿ ಆ ಬಡವಾಯಿಯನ್ನು ಮುಖ ಅಡಿಯಾಗಿ ಮಲಗಿಸಿ ಉಪಾಯವಾಗಿ ಚಿಮ್ಮ ವದಿಂದ ಮುಳ್ಳನ್ನು ಒಂದೊಂದಾಗಿ ಕಿತ್ತುಹಾಕಲು ತೊಡಗಿದರು. ಈ ವಾದಿಯ ಬಾಯಿಗೆ ನೀರನ್ನು ತಂದು ದೀಕ್ಷಿತನು ಹಾಕಿ ಕಿವಿ ಯಲ್ಲಿ ಊದಿದನು. ಸ್ವಲ್ಪ ಪ್ರಜ್ಞೆ ಬಂತು, ಕಂಣಬಿಟ್ಟನು, ಮುಳ್ಳನ್ನು ಕಿತ್ತ ಕೂಡಲೆ ರಕ್ತಸುರಿಯಲು ಆರಂಭವಾಯಿತು. ಎಲ್ಲಾ ಕಡೆಗಿಂತಲೂ ಪ್ರಭಾಗದಲ್ಲಿ ಬಹಳ ಅಪಾಯಕರವಾ ಗಿತ್ತು. ಆಸನದಾತರಕ್ಕೆ ಉದ್ದವಾದ ಪಾವಾಸುಕಳ್ಳಿಯ ಮು