ಪುಟ:ಕಥಾಸಂಗ್ರಹ ಸಂಪುಟ ೨.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

216 ಕಥಾಸಂಗ್ರಹ-೫ ನೆಯ ಭಾಗ ಜಯಿಸಿ ಅವರ ದೇಶಕೋಶಗಳನ್ನು ಸ್ವಾಧೀನಮಾಡಿಕೊಳ್ಳುವರು ಎಂದು ಹೇಳಲು ಆಗ ದೈತ್ಯರಾಜರೆಲ್ಲರೂ ಆಚಾರ್ಯರು ಹೇಳಿದಂತೆಯೇ ನಡೆಯಬೇಕೆಂದು ಏಕಮನ ಸ್ಸಿನಿಂದ ದೇವೇಂದ್ರನ ಮೇಲೆ ಯುದ್ಧಕ್ಕೆ ಹೋಗಬೇಕೆಂದು ಸರ್ವಬಲದೊಡನೆ ಸನ್ನದ್ಧ ರಾಗುತ್ತಿದ್ದರು. ತರುವಾಯ ದೇವತೆಗಳ ಕುಲಗುರುಗಳಾದ ಬೃಹಸ್ಪತಾಚಾರರು ವರ್ತಮಾ ನವನ್ನು ತಿಳಿಯುವುದಕ್ಕೋಸ್ಕರವಾಗಿ ದೈತ್ಯರ ಪಟ್ಟಣಗಳಿಗೆ ಕಳುಹಿಸಿದ್ದ ಬೇಹಿನ ವರು ದೈತ್ಯರ ಪ್ರಯತ್ನವನ್ನೆಲ್ಲಾ ತಿಳಿದು ಅತಿಶೀಘ್ರವಾಗಿ ಬೃಹಸ್ಪತ್ಯಾಚಾರ್ಯರ ಬಳಿಗೆ ಬಂದು ಆ ವರ್ತಮಾನವನ್ನೆಲ್ಲಾ ಗುಟ್ಟಾಗಿ ತಿಳಿಸಿದರು. ಆಗ ಬೃಹಸ್ಪತ್ಯಾಚಾ ರ್ಯರು ಬಹಳ ವ್ಯಾಕುಲಚಿತ್ತರಾಗಿ ದೇವೇಂದ್ರಾದೃಷ್ಟ ದಿಕ್ಷಾಲಕರನ್ನು ಕರಿಸಿ ಏಕಾಂತದಲ್ಲಿ ಕುಳ್ಳಿರಿಸಿಕೊಂಡು ವಿರೋಧಿಗಳಾದ ರಾಕ್ಷಸರ ಆಗಮನವನ್ನು ತಿಳಿಸಿ ಮಹಾಮುನಿಯಾದ ದೂರ್ವಾಸನ ಶಾಪದಿಂದ ಈ ಸಮಯದಲ್ಲಿ ನಮಗೆ ಪರಾಜಯ ವಾಗುವುದು ಸಿದ್ದವು. ಈಗ ನಾವು ವ್ಯರ್ಥವಾಗಿ ಯುದ್ಧರಂಗದಲ್ಲಿ ದೈತ್ಯರೊಡನೆ ಹೋರಾಡಿ ಹತರಾಗುವುದಕ್ಕಿಂತ ನಾವೆಲ್ಲರೂ ಈ ಸ್ವರ್ಗಲೋಕವನ್ನೇ ಬಿಟ್ಟು ಪತ್ರ ಮಿತ್ರ ಕಳತ್ರಾದಿಗಳೊಡನೆ ಕೂಡಿ ಎಲ್ಲಿಯಾದರೂ ಗುಪ್ತವಾಗಿಯೂ ನಿರ್ಬಾಧಕವಾ ಗಿಯ ಇರುವ ಒಂದು ಪುಣ್ಯಾಶ್ರಮಕ್ಕೆ ಹೋಗಿ ಅಲ್ಲಿ ಮಹಾವಿಷ್ಣುವನ್ನು ಆರಾಧಿ ಸುತ್ತ ಕೆಲಕಾಲದ ವರೆಗೂ ಇದ್ದುಕೊಂಡು ಸಮಯ ಬಂದಾಗ ಹಗೆಗಳಾದ ದೈತ್ಯ ರನ್ನು ಯುದ್ಧರಂಗದಲ್ಲಿ ಸೋಲಿಸಿ ನಮ್ಮ ದೇವಲೋಕವನ್ನು ಸಾಧಿಸುವುದು ನನ್ನ ಬುದ್ದಿಗೆ ಯುಕ್ತವಾಗಿ ತೋರುತ್ತಿದೆ ಎಂದು ಹೇಳಲು ಆ ಮಾತಿಗೆ ದೇವತೆಗಳೆಲ್ಲಾ ಒಡಂಬಟ್ಟುದರಿಂದ ಸುರಾಚಾರ್ಯನು-ನೀವೆಲ್ಲರೂ ಶೀಘ್ರವಾಗಿ ಹೊರಟುಹೋಗಿ ನೈಮಿಶಾರಣ್ಯವೆಂಬ ಪುಣ್ಯ ಕ್ಷೇತ್ರದಲ್ಲಿ ವಾಸಮಾಡಿರಿ. ನಾನು ಶುಕ್ರಾಚಾರ್ಯರನ್ನೂ ದೈತ್ಯರಾಜರನ್ನೂ ಕಂಡು ಕೂಡಲೆ ನಿಮ್ಮ ಬಳಿಗೆ ಬರುವೆನು ಎಂದು ಹೇಳಿ ಅವರ ನೈಲ್ಲಾ ಅಲ್ಲಿಂದ ಕಳುಹಿಸಿಬಿಟ್ಟು ತಾನು ಜಾಗ್ರತೆಯಾಗಿ ರಸಾತಲಕ್ಕೆ ಬಂದು ದೈತ್ಯ ರಾಜರ ಬಳಿಗೆ ಬರಲು ಆಗ ಅವರೆಲ್ಲರೂ ಇವರಿಗೆ ಅಭಿನಂದಿಸಿ ಸರ್ವೋಪಚಾರಗಳನ್ನೂ ಮಾಡಿ ರಹಸ್ಯ ಸ್ಥಳದಲ್ಲಿ ಕುಳ್ಳಿರಿಸಿಕೊಂಡು ತಾವು ದಯೆಮಾಡಿದ ಕಾರ್ಯ ವೇನು ? ನಿಮ್ಮ ಮುಖವನ್ನು ನೋಡಿದರೆ ಬಲು ದುಗುಡದಿಂದಿರುವಂತೆ ಕಾಣುತ್ತದೆ ಎಂದು ಕೇಳಲು ಆಗ ಸುರಾಚಾರ್ಯನು-ಎಲೈ ದೈತೈ೦ದ್ರರುಗಳಿರಾ ! ನಾನು ಈಗ ಹೇಳುವ ಮಾತುಗಳನ್ನೆಲ್ಲಾ ನೀವು ಸಾವಧಾನದಿಂದ ಕೇಳಿ ಮಹಾಬುದ್ದಿಶಾಲಿ ಗಳಾದ ಶುಕ್ರಾಚಾರ್ಯರೊಡನೆ ಆಲೋಚಿಸಿ ನಾನು ಹೇಳುವುದು ಯುಕ್ತವಾಗಿದ್ದರೆ ಆ ಪ್ರಕಾರವೇ ನಡೆಯಬಹುದು. ಆ ಮಾತುಗಳು ಯಾವುವೆಂದರೆ-ದೇವೇಂದ್ರನಿಗೆ ನಾನು ಬಾರಿಬಾರಿಗೂ ಎಷ್ಟು ವಿಧವಾಗಿ ನೀತಿಗಳನ್ನು ಉಪದೇಶಮಾಡುತ್ತ ಬಂದಾ ಗೂ ಆತನು ತನ್ನ ಸಿರಿಯ ಮದದಿಂದ ಆ ಉಪದೇಶವನ್ನು ಗಣಿಸದೆ ಮಹಾಮುನಿ ಗಳಿಗೆ ಅವಮಾನವನ್ನು ಮಾಡುತ್ತಲೂ ಅನ್ಯಾಯದಿಂದ ನಡೆಯುತ್ತಲೂ ಬರುತ್ತಿರು ವುದರಿಂದ ಆಗಾಗ್ಗೆ ಅವನಿಗೆ ಹಾನಿಗಳು ತಟ್ಟುತ್ತ ಇರುವುವು. ಹಾಗೆ ತಟ್ಟಿದಾಗ