ಪುಟ:ಕಥಾಸಂಗ್ರಹ ಸಂಪುಟ ೨.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಮನಾವತಾರದ ಕಥೆ 253 ಮೇಲೂ ಪ್ರೋಕ್ಷಿಸಿ ಆ ಮೇಲೆ ತಾನೂ ಪ್ರೋಕ್ಷಿಸಿಕೊಂಡು ತರುವಾಯ ಮಿಕ್ಕ ಗಂ Tಒಲವನ್ನು ಕಮಂಡಲದಲ್ಲೇ ತೆಗೆದುಕೊಂಡು ಹೋಗಿ ತನ್ನ ಮನೆಯಲ್ಲಿಟ್ಟು ಕೊಂ ಡನು. ಅನಂತರದಲ್ಲಿ ತ್ರಿವಿಕ್ರಮಮೂರ್ತಿಯು ಬಲಿಚಕ್ರವರ್ತಿಯನ್ನು ಕುರಿತು ಎಲೆ ಔದಾರ್ಯ ಗುಣಮಣಿಹಾರನೇ! ದಾನಶೀಲನೇ! ಎರಡಡಿಗಳಷ್ಟು ಭೂಮಿಯು ಸಿಕ್ಕಿತು. ಇನ್ನೊಂದಡಿ ನೆಲವೆಲ್ಲಿರುವುದು ? ತೋರಿಸು ಎಂದು ಕೇಳಲು ಆಗ ಬಲೀಂ ದ್ರನು ವಾಮನನಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿ- ಎಲೈ ಸರ್ವಾ೦ತ ರ್ಯಾಮಿಯೇ! ಜಗನ್ನಾಥನೇ ! ನಿನ್ನ ಇನ್ನೊಂದಡಿಗೆ ಸಾಕಾಗುವಷ್ಟು ಭೂಮಿಯನ್ನು ನಾನು ಇನ್ನೆಲ್ಲಿಂದ ತರಲಿ ? ಇದೋ, ಈ ನನ್ನ ಬೆನ್ನಿನ ಮೇಲಿಟ್ಟು ಇನ್ನೊಂದಡಿ ಯಷ್ಟು ನೆಲವನ್ನು ಅಳೆದುಕೋ ಎಂದು ಹೇಳಲು ಆಗ ವಾಮನನು ಸಮ್ಮತಿಪಟು, ತನ್ನ ಮಹಾಪಾದವನ್ನು ಆತನ ಬೆನ್ನಿನ ಮೇಲಿಟ್ಟು ಆತನನ್ನು ಮೆಟ್ಟಿ ದನು. ಅಲ್ಲಿ ಅಷ್ಟು ಹೊತ್ತಿಗೆ ಭಗವದಾಜ್ಞೆಯಿಂದ ವಿಶ್ವಕರ್ಮನು ಸರ್ವಾಲಂಕಾರ ಭೂಷಿತವಾಗಿ ದಿವ್ಯವಾದ ಅರಮನೆಯನ್ನು ನಿರ್ಮಿಸಿದ್ದನು. ಆ ಮೇಲೆ ತ್ರಿವಿಕ್ರಮನು ತನ್ನ ಮಹಾ ರೂಪವನ್ನು ಬಿಟ್ಟು ಜಗದಾಹ್ಲಾದಕರವಾದ ದಿವ್ಯ ಮಂಗಳರೂಪವನ್ನು ಧರಿಸಿ ಶಂಖ ಚಕ್ರಗದಾಧರನಾಗಿ ಬಲಿಚಕ್ರವರ್ತಿಗೆ ದರ್ಶನವನ್ನು ಕೊಟ್ಟು ಆತನನ್ನು ತೆಗೆದಾಲಿಂ ಗಿಸಿ ಕೈಹಿಡಿದು ಆ ಮಹಾಸುಂದರರಾಜಾಲಯದೊಳಕ್ಕೆ ಕರೆದು ಕೊಂಡು ಹೋಗಿ ಅಲಿ ಅತ್ಯುತ್ತಮವಾಗಿ ಕೋಟಿ ಸೂರ್ಯಪ್ರಾಕಾಶಮಾನವಾದ ದಿವ್ಯ ಸಿಂಹಾಸನದ ಮೇಲೆ ಕುಳ್ಳಿರಿಸಿ ಮುನಿಜನಗಳೊಡನೆ ಕೂಡಿ ಆತನಿಗೆ ಮುಂದಣ ಇಂದ್ರ ಪದವಿಗೆ. ಪಟ್ಟಾಭಿಷೇಕವನ್ನು ಮಾಡಿ ಸಂತೋಷದಿಂದ ಕುಳಿತಿರುವ ಆತನನ್ನು ಕುರಿತು-ಎಲೈ ಪರಮಭಾಗವತನೇ ! ನಾನು ಮಹಾತ್ಮನಾದ ನಿನ್ನ ಭಕ್ತಿಗೆ ಬಹಳವಾಗಿ ಮೆಚ್ಚಿದೆನು. ಈ ದಿವಸ ಕಾರ್ತಿಕ ಶುದ್ಧ ಪಾಡ್ಯಮಿಯಾದುದರಿಂದ ಸಮಸ್ತ ಜನರೂ ಪ್ರತಿಸಂವತ್ಸರ ದಲ್ಲೂ ಸಂಭವಿಸುವ ಈ ದಿನದಲ್ಲಿ ಸಂತೋಷದಿಂದ ನಿನ್ನನ್ನು ಪೂಜಿಸಲಿ, ಮತ್ತು ನೀನು ಮನಸ್ಸಿನಲ್ಲಿ ಕೋರಿದ ಕೋರಿಕೆಗಳೆಲ್ಲಾ ನಿರ್ವಿಘ್ನವಾಗಿ ಸಿದ್ದಿ ಸಲಿ ಎಂದು ಪ್ರೀತಿಯಿಂದ ವರವನ್ನು ಕೊಟ್ಟನು. ಆಗ ಬಲಿಚಕ್ರವರ್ತಿಯುಸ್ವಾಮಿ, ಮಹಾ ವಿಷ್ಣುವೇ ! ನಿನ್ನ ಭಕ್ತನಾದ ನನಗೆ ಯಾವ ವಿಧವಾದ ಎಡರೂ ಸಂಭವಿಸದಂತೆ ನೀನು ನನ್ನರಮನೆಯ ಬಾಗಿಲಲ್ಲಿ ಸದಾಕಾಲದಲ್ಲೂ ಕಾದುಕೊಂಡಿರಬೇಕೆಂದು ಬೇಡಿಕೊ೦ ಡುದರಿಂದ ಮಹಾವಿಷ್ಣು ವು ಸಂತೋಷವುಳ್ಳವನಾಗಿ ಹಾಗೆ ಆಗಲಿ ಎಂದು ಒಪ್ಪಿ ಗದಾದಂಡವನ್ನು ಧರಿಸಿದವನಾಗಿ ಆತನ ಮನೆಯ ಬಾಗಿಲಲ್ಲಿ ರುತ್ತ ಆತನ ಭಕ್ತಿಪೂ ರ್ವಕವಾದ ಪೂಜೆಯನ್ನು ಸ್ವೀಕರಿಸುತ್ತ ಇರುತ್ತಿದ್ದನು. ತರುವಾಯ ಸರ್ವಗತನಾದ ಮಹಾವಿಷ್ಣುವು ಯಥಾ ಪ್ರಕಾರ ವಾಮನನಾಗಿ ಬಂದು ತಾಯ್ತಂದೆಗಳಿಗೆ ನಮಸ್ಕರಿಸಿ ಇಂದ್ರನನ್ನು ಸರಿಸಿ ಸ್ವರ್ಗಲೋಕಕ್ಕೆ ಕರೆದು ಕೊಂಡು ಹೋಗಿ ಆತನಿಗೆ ತ್ರಿಲೋಕಾಧಿಪತ್ಯವನ್ನು ನೇಮಿಸಿ ತಾನು ವೈಕುಂಠ ಲೋಕ ವನ್ನು ಕುರಿತು ತೆರಳಿದನು.