ಪುಟ:ಕಥಾಸಂಗ್ರಹ ಸಂಪುಟ ೨.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 185 ದರೂ ಪರಿತ್ಯಾಗಕ್ಕೆ ಯೋಗ್ಯನೆಂದು ಶಾಸ್ತ್ರವಚನವಿರುವುದು. ತನ್ನಲ್ಲಿ ಹುಟ್ಟಿ ತನ್ನನ್ನು ಬಾಧೆಗೊಳಿಸುತ್ತಿರುವ ವ್ಯಾಧಿಯು ಅರಣ್ಯ ಸಂಭೂತಗಳಾದ ಮಲಿಕೆಗಳಿಂದ ನಾಶ ವನ್ನು ಹೊಂದುವಂತೆ ಇವನು ನನ್ನೊಡನೆ ಹುಟ್ಟಿದವನಾದಾಗ ತನ್ನ ದುಷ್ಕೃತ್ಯಗ. ಳಿಂದ ತಾನೇ ನಾಶವಾದನು. ಆದುದರಿಂದ ನನ್ನ ಮತ್ತು ಸರ್ವ ಜಗತ್ತಿನ ಮಾನಸಿಕ ವಾದ ರೋಗವು ಪರಿಹಾರವಾದಂತಾಯಿತು. ನನಗೂ ಮೂರ್ಖನಾದ ಇವನಿಗೂ ಸಂಬಂಧವೇನೂ ಇರುವುದಿಲ್ಲ. ನಾನು ಇವನಿಗೆ ಪ್ರೇತಕಾರ್ಯವನ್ನು ಮಾಡುವುದಿಲ್ಲ ಎಂದು ರಾಮನು ಮೆಚ್ಚುವಂತೆ ನೀತಿಯನ್ನು ಹೇಳಿದನು. ಆ ಸರ್ವಪ್ರಾಣಿದಯಾಕರನಾದ ಶ್ರೀ ರಾಮನು ಆ ಮಾತುಗಳನ್ನು ಕೇಳಿ ವಿಭೀಷಣನನ್ನು ಕುರಿತು-ಎಲೈ ನೀತಿಪರಾಯಣನಾದ ವಿಭೀಷಣನೇ ! ಜಗತ್ತಿನಲ್ಲಿ ನೀನು ತಿಳಿಯದ ಧರ್ಮರಹಸ್ಯಗಳು ಒಂದೂ ಇಲ್ಲ ವು. ಲೋಕದಲ್ಲಿ ಹಗೆತನಕ್ಕೆ ಮರ ಣವೇ ಅಂತ್ಯವೆಂದು ಧರ್ಮಜರು ಬೋಧಿಸುವರು. ಮಹಾತ್ಮನಾದ ಈ ರಾವಣನು ಸಕಲ ವೇದಶಾಸ್ತ್ರಗಳನ್ನೂ ಓದಿದನು, ಮತ್ತು ಸಕಲ ರಾಜನೀತಿಗಳನ್ನೂ ತಿಳಿದವನು. ಲೋಕದಲ್ಲಿ ಶೂರರಾದವರಿಗೆ ಸುರಾಸುರನರೋರಗಪುರುಷರನ್ನೆಲ್ಲಾ ಯುದ್ಧರಂಗದಲ್ಲಿ ಜಯಿಸಿ ಅಪ್ರತಿಹತವಾದ ಕೀರ್ತಿಯನ್ನು ಸಂಪಾದಿಸುವುದು ನ್ಯಾಯವಲ್ಲದೆ ನ್ಯಾ ಯವಲ್ಲ, ಜಗದುತ್ಪತ್ತಿ ಕಾಲದಿಂದಲೂ ಸುರಾಸುರರಿಗೆ ಗಜಸಿಂಹಗಳಂತೆಯ ಗರು ಡೋರಗಗಳಂತೆಯ ಗೊವ್ಯಾ ಘಗಳಂತೆಯ ಹಗೆತನವು ಪ್ರಸಿದ್ದವಾಗಿರುವುದು. ಆದುದರಿಂದ ಈ ರಾಕ್ಷ ಸರಾಜನಾದ ದಶಕಂಠನು ದೇವತೆಗಳನ್ನು ಜಯಿಸಿದುದು ತಪ್ಪೆಂದು ಹೇಳುವುದಕ್ಕಾಗುವುದಿಲ್ಲ, ಮುನಿಜನಗಳು ಮಾಡುವ ಯಜ್ಞಗಳ ಆಹುತಿ ಯಿಂದ ವೈರಿಗಳಾದ ದೇವತೆಗಳಿಗೆ ಆಹಾರವುಂಟಾಗುತ್ತಿದ್ದುದರಿಂದ ಯಜ್ಞಾದಿಗ ಳನ್ನು ಭಂಗಪಡಿಸಿದನು. ನಾವು ಇವನ ತಂಗಿಯಾದ ಶೂರ್ಪನಖಿಯ ಕಿವಿ ಮಗು ಗಳನ್ನು ಕೊಯ್ದು ಮೊದಲಿವನನ್ನು ಅಪಮಾನಪಡಿಸಿದುದರಿಂದ ಅದಕ್ಕೆ ಬದಲಾಗಿ ವೀರನಾದ ಇವನು ನಮಗೆ ಅಪಮಾನಮಾಡಿದನು. . ಯೋಚಿಸಿ ನೋಡಿದರೆ ಇವನ ಲೇನೂ ತಪ್ಪು ಕಂಡು ಬರುವುದಿಲ್ಲ, ಬುದ್ದಿ ಶಾಲಿಯಾದ ನಿನಗೆ ನಾನು ವಿಶೇಷವಾಗಿ ಹೇಳತಕ್ಕುದೇನು ಎಂದು ಹೇಳಿದನು, ಅನಂತರದಲ್ಲಿ ವಿಭೀಷಣನು ರಾಮಚಂದ್ರನ ಅಪ್ಪಣೆಯನ್ನು ತಲೆಯಲ್ಲಿ ಆಂತು ಅಣ್ಣನಾದ ರಾವಣನ ಶವದ ಬಳಿಗೆ ಬಂದು ನೋಡಿ ಕೊನೆಮೊದಲಿಲ್ಲದ ದುಃಖದಿಂದ ಅದರ ಮೇಲೆ ಬಿದ್ದು ಹೊರಳಿ ಎಲೈ ಮಹಾತ್ಮನಾದ ಅಣ್ಣನೇ ! ಹೀಗಾಗುವುದೆಂದು ದನ್ನು ನಾನು ಮೊದಲೇ ತಿಳಿದು ಹೇಳಿದಂಥ ಹಿತೋಕ್ತಿಗಳು ಸಾಯುವವನಿಗೆ ವೈದ್ಯರು ಕೊಟ್ಟ ಮದ್ದುಗಳು ವಿಷವಾಗಿ ತೋರುವಂತೆ ನಿನಗೆ ರುಚಿಸಲಿಲ್ಲವು. ಪಾಪಿಯಾದ ನಾನು ನಿನ್ನ ವಿಯೋಗವನ್ನು ಹೇಗೆ ಸಹಿಸಲಿ ? ಈ ದುರವಸ್ಥೆಯಲ್ಲಿರುವ ನಿನ್ನನ್ನು ನೋಡುತ್ತಿರುವ ನನ್ನ ಕಣ್ಣುಗಳಿಗೆ ಮಣ್ಣು ಬೀಳಲೊಲ್ಲ ದಲ್ಲಾ ? ಪುಣ್ಯಶೀಲನಾದ ನೀನು ಪ್ರಸಿದ್ಧನಾಗಿ ರಣರಂಗದಲ್ಲಿ ಯುದ್ಧ ಮಾಡಿ ದೇಹವನ್ನು ಬಿಟ್ಟು ಹೊರಟು ಪರ ಲೋಕವಾಸಿಯಾದಿ ! ಈ ಮಹಾ ದುಃಖಪರಂಪರೆಯನ್ನು ಅನುಭವಿಸುವುದಕ್ಕಾಗಿ