ಪುಟ:ಕಾದಂಬರಿ ಸಂಗ್ರಹ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಲಾಸಿನಿ ವನ್ನು ಕೊಡು, ಕೊಡದಿದ್ದರೆ, ಇಗೆ, ಕೊಂದುಬಿಡುವೆನು ! ಎಂದಂದು ಹೆದರಿಸಿ ದನು, ಅವನು ಹೆದು, “ ಸ್ವಾಮೀ, ನಾನೊಬ್ಬ ದಾರಿಕಾರನು, ನೀವೇನು ಬೇಕಾ ದರೂ ಮಾಡಿ ! ನನಗೆಂದೂ ಗೊತ್ತಿಲ್ಲ! ?” ಎಂದು ಹೇಳಿದನು. ಆ ಮತ್ತೊಬ್ಬ ವ್ಯಕ್ತಿಯು ವೃಥಾ ಕಾಲವನ್ನು ಕಳೆಯುವುದು ಉಚಿತವಲ್ಲವೆಂದಂದುಕೊಂಡು, ಆ ಮೂವರನ್ನೂ ಹಿಡಿದು ಒಟ್ಟಾಗಿ ಬಿಗಿದು, ಒಂದು ಗೋಪ್ಯವಾದ ಸ್ಥಳದಲ್ಲುರುಳಿಸಿ ದನು, ಅವರನ್ನು ' ಜ' ಮಾಡಿದಾಗ ದೀಪದಕಡ್ಡಿಗಳೂ, ಒಂದು ಬೀಗದ ಕೈಯಿ, ಇವುಗಳು ದೊರೆತವು. ಆ ವ್ಯಕ್ತಿಯು ಅವರನ್ನಲ್ಲಿ ಬಿಟ್ಟು ಬಿಟ್ಟು, ತನ್ನ ಕೈ ಲಾಂದ್ರ ವನ್ನು ಹಚ್ಚಿಕೊಂಡು, ಗವಿಯನ್ನು ಶೋಧನೆಮಾಡಲಾರಂಭಿಸಿದನು. ಆ ಗವಿಯ ಮುಂದುಗಡೆ ಸ್ವಲ್ಪ ಪಚಾರದಂತೆ ಇತ್ತು. ಆ ಕಚಾರದಿಂದ ಒಳಗೆ ಹೋಗಲು, ಒಂದು ಭಾಗ ಅವೆಲ್ಲವೂ, ಕಾಡುಗಲ್ಲುಗಳವುಗಳಾಗಿದ್ದುದರಿಂದ ಆ ಬಾಗಿ ಲನ್ನು ತೆಗೆಯುವ ವಿಧಾನ ಗೆ ತ್ಯಾಗದೆ ಆ ವ್ಯಕ್ತಿಯು ಸಿಕ್ಕಿದ ಕಲ್ಲುಗಳನ್ನೆಲ್ಲ ನೂಕಿ ನೂಕಿ ನೋಡುತ್ತಿದೃನು. ಹೀಗೆ ಪರೀಕ್ಷಿಸುತ್ತಿರುವಾಗ ಬಾಗಿಲಿನ ಸವಿಾಪದ ಲ್ಲಿದ್ದ ಒಂದು ಚಿಕ್ಕ ಕಲ್ಲು ಅಲುಗಾಡುತ್ತಿದ್ದುದನ್ನು ಕಂಡು, ಆ ಕಲ್ಲನ್ನು ಕಿತ್ತು ಹಾಕಿದನು. ಅದರಿಂದುಂಟಾದ ಸಂದಿನಲ್ಲಿ ತನ್ನ ಕೈ ರಂದ್ರವನ್ನು ಹಿಡಿದು ನೋಡಿ ದನು. ಅದು ಒಳಗೆ ಒತ್ತು ನಿನ್ನಾರವಾಗಿದ್ದಂತೆ ಬೋಧೆಯಾಯಿತು, ಆ ಕಂಡಿ ಯಲ್ಲಿ ಕೈಯನ್ನು ಹಾಕಿ, ಕೈಗೆ ಸಿಕ್ಕ ಬಹುದಾಗಿದ್ದುದನ್ನೆಲ್ಲ ಪರೀಕ್ಷಿಸಿ ನೋಡುತ್ತಿ ರಲು, ಒಳಗೆ ಒಂದು ಸರಪಣಿಯು ಸಿಕ್ಕಲು ಅದನ್ನು ಹಿಡಿದು ಎಳೆದನು, ಒಂದು ದೊಡ್ಡ ಕಲ್ಲು ತಕ್ಷಣವೇ ಓರೆಯಾಯಿತು. ಕೂಡಲೆ ಆ ವ್ಯಕ್ತಿಯು ಒಳಗೆ ನುಗ್ಗಿ ನೋಡಿದನು. ಒಳಗೆ ಇದಕವಾದ ಅಂಧಕಾರವು ವ್ಯಾಪ್ತವಾಗಿದ್ದುದರಿಂದ ಏನೂ ಕಾಣಿಸುತ್ತಿರಲಿಲ್ಲ. ಆದರೂ ತನ್ನ ಕೈ ಲಾಂದ್ರದಿಂದ ಸ್ಥಳವನ್ನು ಹೆಜ್ಜೆ ಹೆಜ್ಜೆಗೂ ಪರೀಕ್ಷಿಸುತ್ತ ಆ ಗವಿಯ ನಾನಾ ಭಾಗಗಳನ್ನು ನೋಡಿದನು, ಒಂದು ಕಡೆಯ ಇದ್ದ ಒಂದು ಮುರುಕು ಪೆಟ್ಟಿಗೆಯಲ್ಲಿ ಒಂದೆರಡು ರಿವಾಲ್ವರುಗಳೂ, ಕೆಲವು ತೋಟಾ ಗಳೂ, ಕೆಲವು ಕಾಗದಗಳೂ ಇದ್ದುವು. ಆ ವ್ಯಕ್ತಿಯು ಅವೆಲ್ಲವನ್ನೂ ತೆಗೆದ ಕೊಂಡು, ಆ ಕಾಗದಗಳನ್ನು ನೋಡುತ್ತಿರಲು, ಅವುಗಳಲ್ಲೊಂದು ಕಾಗದದಲ್ಲಿ ಹೀಗೆ ಬರೆಯಲ್ಪಟ್ಟಿದ್ದಿತು. ( ಇಲ್ಲಿ ಕಾಳಿಚರಣನೊಬ್ಬನಲ್ಲದೆ ಮತ್ತಾರೂ ನನ್ನ ಮೇಲೆ ಅನುಮಾನಪಡು ವಂತಿಲ್ಲ. ಪ್ರೇಮಚಂದ್ರನ ವಿಚಾರವಾಗಿ ಕಾಳೀಕರಣನು ಶಂಕರೀದುರ್ಗಕ್ಕೆ ಹೋಗಿ ರುತ್ತಾನೆ. ಎಚ್ಚರಿಕೆ !

  • ಇತಿ, ಭುಜಂಗ'

10