ಪುಟ:ಯಶೋಧರ ಚರಿತೆ.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೮

ಯಶೋಧರ ಚರಿತೆ


ಮಾಡುವನಾತ್ಮಂ ನೆಟ್ಟನೆ
ಮಾಡಿತನುಣ್ಬಾತನಾತ್ಮನಘ ಜಲಧಿಯೊಳೋ-
ಲಾಡುವೊಡಂ ಗುಣಗಣದೊಳ್
ಕೂಡುವೊಡಂ ಜನ್ಮಜಲಧಿಯಂ ದಾಂಟುವೊಡಂ೨೮


ಪರಮಾತ್ಮ ನೆನ್ನನೆಂದೊಡೆ
ಚರಮಾಂಗಪ್ರಮಿತನಖಿಲಲೋಕ ಸಮಾನಂ
ನಿರವಯವಂ ನಿತ್ಯಂ ನಿ-
ರ್ದುರಿತನನಂತ ಪ್ರಬೋಧದರ್ಶನ ಸೌಖ್ಯಂ೨೯


ಕೇವಲ ವಿಬೋಧನೇತ್ರನೆ
ದೇವನೆ ಪರಮಾತ್ಮನಾಗಂ ತದ್ವಚನಂ
ಜೀವದಯೆ ಧರ್ಮಮೆಂ‍ಬೀ
ಭಾವನೆಯಂ ನೆರೆಯೆ ನಂಬುವುದು ಸಮ್ಯಕ್ತ್ವಂ೩೦


ಆತ್ಮನು ಇದ್ದಾನೆ ಎಂಬುದು ಗೊತ್ತಾಗುತ್ತದೆ. ೨೮. ಎಲ್ಲವನ್ನೂ ಮಾಡುವವನು
ಆತ್ಮನು. ಮಾಡಿದುದುರ ಫಲವನ್ನುಣ್ಣುವವನೂ ಅವನೇ. ಪಾಪದ ಕಡಲಲ್ಲಿ
ಓಲಾಡುವುದಿದ್ದರೂ, ಗುಣ (ಪುಣ್ಯ) ಸಾಗರದಲ್ಲಿ ಸೇರಿಕೊಳ್ಳುವುದಿದ್ದರೂ,
ಜನ್ಮ ಸಮುದ್ರವನ್ನು ದಾಟುವುದಿದ್ದರೂ ಆತ್ಮನಿಂದ ಮಾತ್ರ ಸಾಧ್ಯ. ೨೯. ಹಾಗಾದರೆ
ಪರಮಾತ್ಮನು ಹೇಗಿರುತ್ತಾನೆ ಎನ್ನುವುದಾದರೆ ಅವನು ಕಟ್ಟಕಡೆಗಡ(ಚರಮ)
ದೇಹವನ್ನು ಧರಿಸಿ ಅನಂತರ ಪುನಃ ದೇಹವನ್ನು ಧರಿಸದವನು. ಎಲ್ಲ ಲೋಕಗಳಿಗೆ
ಸಮಾನನಾಗಿರುತ್ತಾನೆ. ಅವನು ಅವಯವಗಳೇ ಇಲ್ಲದವನಾಗಿ ನಿತ್ಯನಾಗಿ ಯಾವ
ಪಾಪಕ್ಕೂ ಪಕ್ಕಾಗದವನಾಗಿ ಅನಂತಜ್ಞಾನ, ಅನಂತದರ್ಶನ, ಅನಂತ
ಸೌಖ್ಯವುಳ್ಳವನಾಗಿರುತ್ತಾನೆ. ೨೦. ಕೇವಲ ಜ್ಞಾನವೇ ಕಣ್ಣಾಗಿರುವ ಆ ದೇವನೆ
ಪರಮಾತ್ಮನು. ಅವನ ಮಾತೇ ಆಗಮ. ಜೀವದಯೆಯೇ ಧರ್ಮ ಎನ್ನುವ
ಭಾವನೆಯನ್ನು ಚೆನ್ನಾಗಿ ನಂಬುವುದನ್ನು ಸಮ್ಯಕ್ತ್ವಯ ಎನ್ನುತ್ತಾರೆ. ೩೧. ಮೇಲು