ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೯೧ ಸರ್ಗ, ೧೦] ಕಿಪ್ಪಿಂಧಾಕಾಂಡವು. ಕಂಡುಹಿಡಿಯುವುದಕ್ಕಾಗಿಯೇ ಬಂದುವರ್ಷವು ಹಿಡಿಯುತು ಕೊನೆಗೆ ಆತನು ನನ್ನ ಕಣ್ಣಿಗೆ ಸಿಕ್ಕಿಬಿದ್ದನು ನಾನು ಲೀಲಾಮಾತ್ರದಿಂದಲೇ ಅವನನ್ನೂ, ಅವನಬಂಧುಗಳನ್ನೂ ಅಲ್ಲಿಯ ಕೊಂದುಬಿಟ್ಟೆನು ಆಗ ನನ್ನ ಶಕ್ತಿಗೆ ತಾಳ ಲಾರದೆ ಆರಾಕ್ಷಸನು ಅರಚಿಕೊಳ್ಳುತ್ತ ಬಾಯಿಂದ ರಕ್ತವನ್ನು ಕಾರಿ ಕೆಳಗೆ ಬಿದ್ದನು ಆ ಬಿಲವೆಲ್ಲವೂ ರಕ್ತಮಯವಾಗಿ ನಿಲ್ಲುವುದಕ್ಕೂ ಸ್ಥಳವಿಲ್ಲದಂ ತಾಯಿತು ಹೀಗೆ ನಾನು ನನ್ನ ವೀರದಿಂದ ದುಂದುಭಿಪುತ್ರನಾದ ಆ ಮಾಯಾವಿಯನ್ನು ಕೊಂದು, ಅಲ್ಲಿ ರಕ್ತದ ದುರ್ಗಂಥವನ್ನು ಸಹಿಸಲಾರ ದ ಬಿಲದಿಂದ ಹೊರಗೆ ಬರುವುದಕ್ಕೆ ಯತ್ನಿಸಿದೆನು ಎಲ್ಲಿ ನೋಡಿದರೂ ದ್ವಾರವು ಕಾಣಿಸಲಿಲ್ಲ ಆದರ ದ್ವಾರವು ಕಲ್ಲುಗಳಿಂದ ಮುಚ್ಚಲ್ಪಟ್ಟಿದ್ದು ದರಿಂದ ಎಲ್ಲಿ ಹೋಗುವುದಕ್ಕೂ ಬಾರಿಲ್ಲ ಆಗ ನಾನು ಸುಗ್ರೀವಾ ಸುಗ್ರೀವಾ'!” ಎಂದು ಎಷ್ಟು ಕೂಗಿದರೂ ಪ್ರತ್ಯುತ್ತರವಿಲ್ಲ ನನಗಾದ ರೋ ಆಗ ಮಿತಿಮೀರಿದ ಕೋಪವೂ ಸಂಕಟವೂ, ಉಂಟಾಯಿತು ಕೊನೆಗೆ ನಾನೇ ಆ ಬಿಲದ್ವಾರದ ಕಲ್ಲುಗಳನ್ನು ಕಾಲುಗಳಿಂದೊದ್ದು ಬಹುಪ್ರಯ ತ್ರದಿಂದ ಕಡಹಿಬಿಬೈನು ಆದಾರಿಯಿಂದಲೇ ಹೊರಕ್ಕೆ ಹೊರಟು ಇಲ್ಲಿಗೆ ಬಂ ದು ಸೇರಿದೆನು ಆಹಾ' ಕೂರನಾದ ಈ ಸುಗ್ರೀವನು ನನ್ನ ರಾಜ್ಯವನ್ನು ದಕ್ಕಿಸಿಕೊಳ್ಳಬೇಕೆಂಬ ದುರಾಸೆಯಿಂದ, ಒಡಹುಟ್ಟಿದ ಪ್ರೇಮವನ್ನೂ ಮರತು, ಆ ಬಿಲದಲ್ಲಿ ನಾನಿರುವಾಗ, ಇದೇಸಮಯವೆಂದು ಬಿಲದ್ವಾರ ವನ್ನು ಮುಚ್ಚಿ, ಹೊರಕ್ಕೆ ಬಾರದಂತ ಮಾಡಿದನಲ್ಲಾ !” ಎಂದನು ಇಷ್ಟು ಹೇಳಿದುದು ಮಾತ್ರವೇ ಅಲ್ಲದೆ, ಅಕ್ಷಣವೇ ನನ್ನನ್ನು ಉಟ್ಟಿದ್ದ ಈ ಒಂದುಬಟ್ಟೆಯೊಡನೆ ಊರಿಂದ ಹೊರಡಿಸಿ ಬಿಟ್ಟನು ಇದರಮೇಲೆ ನನ್ನ ಭಾಗ್ಯ ಯನ್ನೂ ಅಪಹರಿಸಿದವನು ವಾಲಿಯ ಭಯಕ್ಕಾಗಿ ನಾನು ಈ ಸ ಮಸ್ತಭೂಮಿಯನ್ನೂ, ಸಮಸ್ತ ಸಮುದ್ರಗಳನ್ನೂ, ಸಮಸ್ತ ವನಗಳ ನ್ಯೂ ಸುತ್ತಿದೆನು ಎಲ್ಲಿಗೆ ಹೋದರೂ ಅವನು ನನ್ನನ್ನು ಬೆನ್ನಟ್ಟಿಬರುತಿದ್ದು ದರಿಂದ,ಎಲ್ಲಿಯೂ ನನಗೆ ಉಳಿಗಾಲವಿರಲಿಲ್ಲ ಹೆಂಡತಿಯನ್ನು ಕಳೆದುಕೊಂ ಡ ದುಃಖದಿಂದ ಕಂದಿಕುಂಟ ಕೃಶನಾಗಿದ್ದ ನಾನು, ಕೊನೆಗೆ ಈ ಋಶ್ಯ ಮಕಕ್ಕೆ ಬಂದು ಸೇರಿದೆನು ಬೇರೊಂದು ಕಾರಣಕ್ಕಾಗಿ ಇಲ್ಲಿ ವಾಲಿಗೆ