ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶ್ರೀ ರಾಮಕೃಷ್ಣ ಪರಮಹ೦ಸರ

ದಯಕ್ಕಿಂತ ಸ್ವಲ್ಪ ಮುಂಚೆಯೆ ಶ್ರೀಮತಿ ಚ೦ದ್ರಾದೇವಿಯು ಒಬ್ಬ ಪ್ರತ್ರನನ್ನು ಹೆತ್ತಳು. ಈತನೇ ಮುಂದೆ ಪ್ರಸಿದ್ಧನಾದ ಭಗವಾನ್ ಶ್ರೀರಾಮಕೃಷ್ಣ ಪರಮಹಂಸದೇವ, ಬೆಳಗಾದ ಮೇಲೆ ಖುದಿರಾಮನು ಬೋಸರನ್ನು ಕರೆದುಕೊಂಡುಬಂದ ಜನಪತ್ರಿಕೆಯನ್ನು ಬರೆಸಿ ನೋಡಲಾಗಿ ಎಲ್ಲವೂ ಬಹು ಪ್ರಶಸ್ತವಾಗಿ ಕಂಡುಹಿ೦ದಿತು. ಜೋಯಿಸರು “ ಇ೦ಥವನು ಧರ್ಮವಿತ್ತಾ ಗಿಯೂ ಮಹನೀಯ ನಾಗಿಯೂ ಆಗುವನು. ಯಾವಾಗಲೂ ಪುಣ್ಯ ಕರ್ಮಾನು ಮೌನದಲ್ಲಿ ನಿರತನಾಗಿರುವನು. ಬಹುಶಿಷ್ಯ ಪರಿವೃತನಾಗಿ ದೇವಮಂದಿರದಲ್ಲಿ ವಾಸಮಾಡುವನು. ನಾರಾಯಣಾ೦ ಶಸಂಭೂತ ನಾರ ಮಹಾಪ್ರರುಷನೆಂದು ಜಗತ್ತಿನಲ್ಲಿ ಪ್ರಸಿದ್ದಿ ಪಡೆದು ಸರ್ವತ್ರ ಸರ್ವಜನರಿ೦ದಲೂ ಪೂಜಿತನಾಗುವನು.” ಎಂದು ಹೇಳಿದರು. ಖುದಿರಾಮಸಿಗೆ ಆಶ್ಚರ್ಯವಾಯಿತು. ತಾನು ಗದಾಧಾಮದಲ್ಲಿ ನೋಡಿ ಸ್ಪಷ್ಟವು ಸತ್ಯವೆಂದು ನಂಬುಗೆ ಯುಂಟಾಯಿತು. ಅನಂ ತರ ಜಾತಕರ್ಮವನ್ನು ನಡೆಸಿ ಗಯೆಯಲ್ಲಿ ಆದ ಸ್ವಪ್ನವನ್ನು ಮನಸ್ಸಿನಲ್ಲಿಟ್ಟುಕೊಂಡು ತಿರುವಿಗೆ ಗದಾಧರನೆಂದು ನಾಮಕರಣ ಮಾಡಿದನು.

ಮಗುವಿಗೆ ಐದು ತಿಂಗಳು ತುಂಬಿತು. ಆರನೆಯತಿಂಗಳಲ್ಲಿ

ಖುದಿರಾಮನು ಮಗನಿಗೆ ಅನ್ನಪ್ರಾಶನ ಮಾಡಬೇಕೆಂದು ಉದ್ದೇಶ. ಪಟ್ಟು ತನಗೆ ಕೇವಲಹರ ಸಂಬಂಧಿಗಳಾದ ನಾಲ್ಕು ಜನರನ್ನು ಊಟಕ್ಕೆ ಕರೆದು ಆ ಕಾರವನ್ನು ಮುಗಿಸಿಬಿಡ ಬೇಕೆಂದಿದ್ದನು. ಆದರೆ ಅವನು ಯೋಚಿಸಿದ್ದೇ ಒಂದಾಯಿತು ; ನಡದದ್ದೇ ಒ೦ದಾ ಯಿತು. ಆ ಗ್ರಾಮದ ಜಮೀನುದಾರನಾದ ಆತನ ಸ್ನೇಹಿತ ಧರ್ಮೆದಾಸ ಲಾರಾ ಎಂಬಾತನ ಪ್ರೇರಣೆಯಿಂದಲೂ ಸಹಾಯ ದಿ೦ದಲೂ ಖುದಿರಾಮನ ಮನೆಯಲ್ಲಿ ಆ ವೂರಿನ ಎಲ್ಲಾ ಬ್ರಾಹ್ಮಣ ರಿಗೂ ಬ್ರಾಹ್ಮಣೇತರರಿಗೂ ಸಂತರ್ಪಣೆ ನಡೆದುಹೋಯಿತು. ಎಷ್ಟೋಜನ ಬಡವರೂ ಭಿಕ್ಷುಕರೂ ತೃಪ್ತಿ ಹೊಂದಿದರು.