ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೆರಡನೆಯ ಅಧ್ಯಾಯ. ಮಹಾಸಮಾಧಿ. ಹನ್ನೆರಡು ವರ್ಷಗಳ ದಿವಸಮಾಡಿದ ಕಠೋರವಾದ ಸಾಧನ ದಿಂದ ಕಂಚಿನಂತಿದ್ದ ಪರಮಹಂಸರ ದೇಹವು ರುರ್ಝರಿತವಾಗಿ ಹೋಯಿತು. ಆಮಶಂಕೆಯು ಕಾಣಿಸಿಕೊಂಡಿತು, ಅದು ವಾಸಿ ಯಾದ ಕೂಡಲೆ ಗಂಟಲೆಲ್ಲ ಹುಣಾಗಿ ಅನ್ನ ನೀರು ಹೋಗ ದಂತಾಯಿತು. ಆಗ ಘನವೈದ್ಯರು ಬಂದು ಚಿಕಿತ್ಸೆ ಮಾಡಿ ಅವರನ್ನು ಕಲ್ಕತ್ತೆಯಿಂದ ಒಳ್ಳೆಯ ಹವ ಇರುವ ಯಾವುದಾದರೊಂದು ಕಡೆಗೆ ಕರೆದುಕೊಂಡು ಹೋಗುವುದು ಉಚಿತವೆಂದು ಸೂಚಿಸಿದರು. ಆದ್ದರಿಂದ ಶಿಷ್ಯರು ಕಲ್ಕತ್ತೆಗೆ ಹತ್ತಿರದಲ್ಲಿರುವ ಕಾಶೀಪುರವೆಂಬ ಗ್ರಾಮಕ್ಕೆ ಸೇರಿದ ಒಂದು ತೋಟದಲ್ಲಿ ಮನೆಯನ್ನು ಗೊತ್ತು ಮಾಡಿ ಅಲ್ಲಿಗೆ ಪರಮಹಂಸರನ್ನು ಕರೆದುಕೊಂಡು ಹೋದರು. ಇಷ್ಟು ಹೊತ್ತಿಗೆ ಅವರ ಮಾಹಾತ್ಮವು ಎಲ್ಲೆಲ್ಲಿಯೂ ಹರಡಿ ಹೋಗಿದ್ದ ದ್ದರಿಂದ ಹಗಲೂ ಇರುಳೂ ಭಕ್ತಾದಿಗಳು ಇಲ್ಲಿಗೂ ಬರುವುದಕ್ಕೆ ಮೊದಲು ಮಾಡಿದರು. ವೈದ್ಯರು ಮಾತನಾಡಕೂಡದೆಂದು ಅಡ್ಡಿ ಮಾಡಿದ್ದರೂ ಪರಮಹಂಸರು ಅದಕ್ಕೆ ಲಕ್ಷ್ಯಕೊಡದೆ ತಮ್ಮ ದರ್ಶ ನಕ್ಕಾಗಿ ಬಂದ ಭಕ್ತರಿಗೆಲ್ಲ ಎಂದಿಗಿಂತಲೂ ಹೆಚ್ಚಾಗಿ ಬೋಧಿಸ ತೊಡಗಿದರು. ಈ ಕಾಲದಲ್ಲಿಯೇ ಅವರು ತಮ್ಮ ಮುಖ್ಯ ಮುಖ್ಯರಾದ ಶಿಷ್ಯರಿಗೆ ಸನ್ಯಾಸಕೊಟ್ಟು ಆಮೇಲೆ ವಿವೇಕಾನಂದ ಸ್ವಾಮಿಗಳಿಗೆ ತಮ್ಮ ಧರ್ಮಶಕ್ತಿಯನ್ನೆಲ್ಲಾ ಲೋಕಸಂಗ್ರಹಾರ್ಥ ವಾಗಿ ದಾನಮಾಡಿ, ಮಿಕ್ಕ ಶಿಷ್ಯರ ಯೋಗಕ್ಷೇಮವನ್ನು ಅವರ ವಶಕ್ಕೆ ಒಪ್ಪಿಸಿದರು.