ಪುಟ:ಕಥಾಸಂಗ್ರಹ ಸಂಪುಟ ೨.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

222 ಕಥಾಸಂಗ್ರಹ-೫ ನೆಯ ಭಾಗೆ ನಿಮಗ್ನರಾದ ನಮ್ಮನ್ನು ಕೃಪೆಯಿಂದ ಕಾಪಾಡದೆ ಹೋದರೆ ನಾವೆಲ್ಲರೂ ಸತ್ಯವಾಗಿ ಕೆಟ್ಟು ಹೋಗುತ್ತೇವೆ. ಸ್ವಾಮಿ ! ರಕ್ಷಿಸು ರಕ್ಷಿಸು ಎಂದು ಬಹಳವಾಗಿ ಬೇಡಿಕೊಂಡು ಸ್ತುತಿಸಿದುದರಿಂದ ಕರುಣಾಳುವಾದ ವಿಷ್ಣುವು ತ್ರಿಲೋಕ ಮೋಹನಕರವಾದ ಮೋಹಿ ನೀರೂಪವನ್ನು ಧರಿಸಿ ದೈತ್ಯರನ್ನು ವಂಚಿಸಿ ಅವರ ಕೈಯಿಂದ ಅಮೃತ ಕಲಶವನ್ನು ತೆಗೆದುಕೊಂಡು ದೇವತೆಗಳಿಗೆಲ್ಲಾ ಅಮೃತಪಾನವನ್ನು ಮಾಡಿಸಿ ಧನ್ವಂತ್ರಿಯನ್ನೂ ಅಮೃತಕಲಶವನ್ನೂ ದೇವೇಂದ್ರನ ವಶಕ್ಕೆ ಕೊಟ್ಟು ಅದೃಶ್ಯವಾಗಿ ಹೋದನು. ಆಗ ದೈತ್ಯರೆಲ್ಲಾ ಕೂಡಿ ಮಹಾವ್ಯಸನದಿಂದ ಮೋಸಹೋದೆವೆಂದು ಯೋಚಿಸಿಕೊಂಡು ದೇವತೆಗಳ ಕಡೆಯಿಂದ ತಿರಿಗಿ ಅಮೃತಕಲಶವನ್ನು ಕಿತ್ತು ಕೊಳ್ಳಬೇಕೆಂದು ಯುದ್ಧಕ್ಕೆ ಉದ್ಯುಕ್ತರಾಗಲು ಆಗ ದೇವೇಂದ್ರಾದಿ ದೇವತೆಗಳೆಲ್ಲಾ ಅಮೃತಪಾನಬಲದಿಂದ ಯುದ್ಧರಂಗದಲ್ಲಿ ದೈತ್ಯರನ್ನೆಲ್ಲಾ ಜಯಿಸಿದುದರಿಂದ ಆ ದೈತ್ಯರೆಲ್ಲರೂ ಹೆದರಿ ಸ್ವರ್ಗ ವನ್ನು ಬಿಟ್ಟು ರಸಾತಲಕ್ಕೆ ಓಡಿಹೋದರು. ತರುವಾಯ ದೇವತೆಗಳೆಲ್ಲರೂ ಮಹಾ ವಿಷ್ಣುವನ್ನು ಕಂಡು ನಮಸ್ಕರಿಸಿ ಬಹುವಿಧವಾಗಿ ಸ್ತುತಿಸಿ ಸ್ವರ್ಗಲೋಕಕ್ಕೆ ಬಂದು ದೇವೇಂದ್ರನಿಗೆ ಯಥಾವತ್ತಾಗಿ ತ್ರಿಲೋಕ ರಾಜ್ಯಾಭಿಷೇಕವನ್ನು ಮಾಡಿ ಸುಖ ದಿಂದಿದ್ದರು. 3, THE THIRD OR BOAR INCARNATION. ೩, ವರಾಹಾವತಾರದ ಕಥೆ. ಚತುರ್ಮುಖಬ್ರಹ್ಮನ ಮಾನಸಪುತ್ರನಾದ ಕಶ್ಯಪಪ್ರಜಾಪತಿಯ ಹೆಂಡತಿಯಾದ ದಿತಿಯ ಬಸುರಿನಲ್ಲಿ ವೈಕುಂಠಲೋಕದ ದ್ವಾರಪಾಲಕರಾದ ಜಯ ವಿಜಯರು ಸನಕಸನಂದನರೆಂಬ ಮುನಿಗಳ ಶಾಪದಿಂದ ಅವಳಿ ಮಕ್ಕಳಾಗಿ ಹುಟ್ಟಲು ಆ ಕಾಲದಲ್ಲಿ ಬ್ರಹ್ಮ ದೇವನು ಅವರ ಬಳಿಗೆ ಬಂದು ಹಿರಿಯವನಿಗೆ ಹಿರಣ್ಯಕಶಿಪುವೆಂದೂ ಕಿರಿಯವ ನಿಗೆ ಹಿರಣ್ಯಾಕ್ಷನೆಂದೂ ಹೆಸರನ್ನಿಟ್ಟು ಅವರಿಗೆ ಬೇಕಾದ ವಸ್ತ್ರಾಭರಣಾದಿ ಸಮಸ್ತ ವಸ್ತುಗಳನ್ನೂ ಕೊಟ್ಟು ಹರಸಿ ಸತ್ಯ ಲೋಕಕ್ಕೆ ಹೊರಟು ಹೋದನು. ಆ ಮೇಲೆ ಅವರಿಬ್ಬರೂ ಅದು ತಾಕಾರವಾಗಿ ಬೆಳೆದು ಮಹಾಪರಾಕ್ರಮಶಾಲಿಗಳಾಗಿ ವಿರೋಧಿ ಗಳ ಮೇಲೆ ಹೊರಟು ದಿಗ್ವಿಜಯಗಳನ್ನು ಮಾಡಿ ಸಕಲ ಧರಣಿಮಂಡಲವನ್ನೂ ಸ್ವಾಧೀನಮಾಡಿಕೊಂಡು ಶೋಣಿತಪುರವೆಂಬ ಪಟ್ಟಣದಲ್ಲಿ ಅತಿಸಂಭ್ರಮದಿಂದ ವಾಸ ಮಾಡಿಕೊಂಡು ರಾಜ್ಯಭಾರವನ್ನು ಮಾಡುತ್ತ ಸುಖದಿಂದಿರುತ್ತಿದ್ದರು. ದೇವೇಂದ್ರನು ಅವರಿಗೆ ಹೆದರಿಕೊಂಡು ಅವರ ರಾಜ್ಯದಲ್ಲಿ ಕಾಲವನ್ನ ತಿಕ್ರಮಿಸದೆ ಸರಿಯಾಗಿ ಮಳೆ ಗಳನ್ನು ಕರೆಯುತ್ತ ಬಂದುದರಿಂದ ಹೊಲ ಗದ್ದೆ ತೋಟ ಮೊದಲಾದ ಭೂಮಿ ಗಳೆಲ್ಲಾ ಸಸ್ಯಾದಿಗಳಿಂದ ತುಂಬಿ ಸದಾಕಾಲವೂ ಪ್ರಕಾಶಿಸುತ್ತಿದ್ದ ಕಾರಣ ಸುಭಿಕ್ಷ ಯೋಗದಿಂದ ಸರ್ವ ಪ್ರಜೆಗಳ ಸುಖವಾಗಿ ಸಕಲೈಶ್ವರ್ಯಸಂಪನ್ನರಾಗಿದ್ದರು. ಯಮನು ಆ ದೈತ್ಯರ ಭಯದಿಂದ ಬಾಧಿಸಲ್ಪಟ್ಟವನಾಗಿ ಅವರ ದೇಶದಲ್ಲಿ ಅಕಾಲ