ಪುಟ:ಅನ್ನಪೂರ್ಣಾ.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರೋಟರಿಯ ಕೆಳಗೆ

೨೭

ಮೇಲಿಂಗ್ ಎಲ್ಲಕ್ಕೂ ಮಿೂಸಲಾಗಿದ್ದ ಮಾಸಪತ್ರಿಕೆಯೊಂದರ ಸಂಪಾದಕ
ಆತ. ಮಾಸಿದ ಖಾದಿಯ ಶರಟು, ಗೆರೆಗೆರೆಯ ಪಾಯಜಾಮ, ಕಾಲಿಗೆ
ಬೆಡ್ ರೂಂ, ಚಪ್ಪಲಿ, ಶೋಕಿಯಾದ ಕ್ರಾಪು, ನೀಟಾದ ಮೂಗೂ ಗುಳಿಬಿದ್ದ
ಕೆನ್ನೆ, ಒಳಕ್ಕೆ ಅಡಗಿಕೊಂಡ ಕಣ್ಣುಗಳು....
ಕೈಯಲ್ಲಿ ಪ್ಲೇಯರ್ಸ್ ಉರಿಯುತ್ತಲೇ ಇತ್ಕು.
"ಏನಯ್ಯ ಧೊರೆ_?" ಎಂದರು ಕ್ರಿಷ್ಣಯ್ಯ.
"ಸೋ ಸಾರಿ ಕ್ರುಷ್ಣಯ್ಯನವರೇ, ಇದೇ ಈಗ‌ ಸಮಾಚಾರ ತಿಳೀತು....
ಸೋ ಸಾರಿ....ನಾನೂ ಅಷ್ಟೇನೆ....ಮಾಸಪತ್ರಿಕೆ ನಿಲ್ಲಿಸ್ಬಿಟ್ಟಿ, ನ್ಯೂಸ್
ಪ್ರಿಂಟಿಗೆ ಯಾರ್ರೀ ಹದಿನೆಂಟು ರೂಪಾಯಿ ಕೊಡೋರು........?"
" ಎಲ್ಲಾದರೂ ಕೆಲಸ ಕೊಡಿಸ್ತಿಯೇನಯ್ಯಾ? "
" ನನ್ನ ಕೇಳ್ತೀರಾ ಕ್ರುಷ್ಣಯ್ಯನವರೆ........ನಿಮ್ಮೆದುರಿಗೆ ನಾವೆಲ್ಲಾ
ಹುಡುಗರು.... "
" ಧನ್ಯ ! " ಎಂದುಕೊಂಡರು ಕ್ರುಷ್ಣಯನವರು. ಮುಂಜಾವಿಂದ
ಮುಂಜಾವಿನವರೆಗೆ ದುಡಿಯುವ, ಯಾವ ಯಾವ ಗಂಡ ಹೆಂಡಿರಿಗೆ ಕಲಹ
ವಿದೆ ಎಂದು ಖಾನೇಶುಮಾರಿ ತೆಗೆಯುವ, ಹಗಲು ಹೊತ್ತು ಬೀದಿ__ರಾತ್ರಿ
ಗಲ್ಲಿಯೇ ಎಡ್ರೆಸಾದ, ಈ‌ ಮಹಾನುಭಾವ ಪತ್ರಿಕೋದ್ಯೋಗಿಯಿಂದಾದರೂ
" ಹಿರಿಯ " ಎನ್ನಿಸಿಕೊಂಡದ್ದಾಯಿತಲ್ಲಾ !
ದೊಡ್ಡ ಬೀದಿಯ ನೂಕು ನುಗ್ಗುಲಿನಲ್ಲಿ ಈ ನಾಲ್ವರೂ ಸಾಗಿದರಪ
ಮಾತು ರಾಜಕೀಯಕ್ಕೆ ತಿರುಗಿತು. ಆನಂದ್ ತಾನೊಬ್ಬ ಪ್ರಜಪ್ರಭುತ್ವ
ವಾದಿ ಎಂದು ತಿಳಿದುಕೊಂಡವನು. ಕ್ರುಷ್ಣಯ್ಯ ಕಾಂಗ್ರೆಸ್‌ ಚಳವಳಿಯಲ್ಲಿ
ದುಡಿದವರು, ಮಾಡಿ ಮಡಿದು ಜೀವಚ್ಛವವಾಜವರು; ಮಹಾದೇವನಿಗೆ
ಅಭಿಪ್ರಾಯಗಳೇ ಇಲ್ಲ. ಕಾಶೀನಾಥ ಯಾವ ಅಭಿಪ್ರಾಯಕ್ಕೆ ಬೇಕಾದರೂ
ಅಂಟಿಕೊಳ್ಳಬಲ್ಲ ಸಮರ್ಥ.
ಆತನೇ ಮಾತಿನ ಮಲ್ಲ. ಆತ ಹೇಳಿದ.
ಈ ನ್ಯೂಸ್ ಪ್ರಿಂಟ್ ಬಿಕ್ಕಟ್ಟಿಗೆ, ವಿಶ್ವ ಬಿಕ್ಕಟ್ಟಿಗೆ, ಯುದ್ಧ ಭೀತಿಗೆ,
ಎಲ್ಲಕ್ಕೂ ಕಮ್ಯೂನಿಷ್ಠರೇ ಕಾರಣ!...ಅವರ್ನ ಫೈಟ್ ಮಾಡೇತೀರ್ಬೇಕು..."
" ಅದಕ್ಕೆ ನಿಮ್ಮ ಕಾರ್ಯಕ್ರಮ? "