ಪುಟ:ಅನ್ನಪೂರ್ಣಾ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೆಸರು ಕೊಚ್ಚೆಯ ಕಮಲ

೪೧

ಬಳಿಯ ದೇಗುಲದ ಅರ್ಚಕ , ಉದ್ದನ್ನ ಬಿದಿರೊಂದಕ್ಕೆ ಕತ್ತಿಕಟ್ಟಿ ಆ
ತಾವರೆಯ ಹೂವನ್ನು ದಂಟು ಸಹಿತ ಕರಕರ ಕೊಯ್ಯುತ್ತಿದ್ದ. ಕೊಲೆಪಾತಕ !
ನಾನು ಸಿಟ್ಟು ಕಾರುತ್ತಾ ' ಇದೇನ್ರಿ ? ' ಅಂದೆ.
ತನ್ನ ಹಕ್ಕನ್ನೂ ಪ್ರಶ್ನಿಸಿದ ಮಹಾನುಭಾವ ಯಾವನಪ್ಪಾ ? ಎಂಬ
ಭಾವನೆಯಿಂದಲೇ ಆ ಅರ್ಚಕ ಹಿಂದಿರುಗಿ ನೋಡುತ್ತಾ, 'ದೇವರ ಪೂಜೆಗೆ'
ಎಂದ.
ನಾನು ಸುಮ್ಮನಾದೆ.
ಢಿಕ್ ಢಿಮಗಳೊಡನೆ ಮದುವೆಯ ಮನೆಯಿಂದ ಮಂದಿಯ ಮೆರ
ವಣಿಗೆ ಹೊರಡುತ್ತಿತ್ತು. ಮುದರೆ ತನ್ನ ಪತಿಗೃಹಕ್ಕೆ ಸಾಗುತ್ತಿದ್ದಳು....
*****
ಮುದರೆ ತನ್ನ ಪತಿಗೃಹಕ್ಕೆ ತೆರಳಿದಳು. ಕೆಸರು ಕೊಚ್ಚೆಯ ಕಮಲ
ದೇವರ ಅರ್ಚನೆಗಾಗಿ ಗರ್ಭಗುಡಿಯನ್ನು ಪ್ರವೇಶಿಸಿತು.