ಪುಟ:ಅನ್ನಪೂರ್ಣಾ.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಸುಮಂಗಲೆ ಶಿರಿನ್

೫೧

"ಕಾಲು ಮುರಿದುಹಾಕ್ತೀನಿ ಬೋಳಿರಂಡೆ"ಎಂದು ಇನೋಬ್ಬ
ಗದರಿಸಿದರು.
ತಯಂದಿರಿಬ್ಬರೂ ಬೇರೆ ಬೇರೆಯಾಗಿ ಕಣ್ಣೀರ ನದಿ ಹರಿಸಿದರು.
ಎರಡೂ ಮನೆಯ ಹಿರಿಯ ಕಿರಿಯರೆಲ್ಲ ನಡೆಯುತ್ತಿದ್ದ ರುದ್ರನಾಟಕದ
ಪ್ರೇಕ್ಷಕರಾದರು.
++++
ಆ ಸಂಜೆ ಅವರೇನೊ ಪರಸ್ಪರ ಮೊದಲೇ ಏರ್ಪಡಿಸಿ ಭೇಟಿಯಾಗ
ಲಿಲ್ಲ.ಅವನ ಕಾಲುಗಳು ಆ ಬೆಟ್ಟದತ್ತ ಬಂದವು.ಆಕೆಯೂ ಬಲುಭಾರ
ದೊಂದು ಹೃದಯವನ್ನೆತ್ತಿಕೊಂಡು ಬಂದಳು.
ಆ ಒಂದೊಂದೇ ಸ್ಮರಣೆ....ಆ ಹತ್ತು ತಿಂಗಳಲ್ಲಿ ಬೆಳೆದು ಬಂದ ಆ
ಬಾಂಧವ್ಯ....ಮೊದಲ ನೋಟ, ಮೋದಲ ಭೇಟಿ, ಮೊದಲ ಮಾತು...ಆ
ಚೀಟಿ-ಕಾಗದಗಳು.....ಜತೆಯಾಗಿ ಕುಳಿತು ಏನೋ ತಿಂಡಿ ತಿಂದ ಆ
ನೆನಪುಗಳು........

ಇಬ್ಬರೂ ಕುಳಿತು ದೀರ್ಘಕಾಲ ಕಣ್ಣಿರನ್ನು ಕೋಡಿಗಟ್ಟ ಹರಿಸಿದರು.
"ಶಿರಿನ್...ಇದೇ ಕೋನೆಯ ಶಿರಿನ್? ಇದೇ ಅಂತ್ಯವೆ?"
"................."
"ಶಿರಿನ್,ಮುಕ್ತಿಯೇ ಇಲ್ಲವೆ ಶಿರಿನ್,ಮುಕ್ತಿಯೇ ಇಲ್ಲವೇ?"
"ಮುಕ್ತಿ? ಈ ಜೀವ ಹಾರಬೇಕು-ಆಗ ಮುಕ್ತಿ!"
ಮಧು, ಆಕೆಯ ಬಾಯಿಗೆ ತನ್ನ ಅಂಗೈಯನ್ನು ಅಡ್ಡಲಾಗಿ ಹಿಡಿದ.
ಆಬದ್ಧ ಮಾತಾಡುವುದು ನ್ಯಾಯವೆ?
ಆದರೆ?ಆದರೆ? ಆ ಮಾತಿನಲ್ಲೊಂದು ಎಳೆ ಸತ್ಯಂಶವಿರಲಿಲ್ಲ?
ಮುಕ್ತಿ-ಕೊನೆಯದು-
"ಕೊನೆ ಮತ್ತೊಮ್ಮೆ ಕೇಳಬೇಕು ಶಿರಿನ್.ನೀನು ನಿನ್ಮನೇಲಿ.
ನಾನು ನನ್ಮನೇಲಿ."
"ಆ ಆಸೆಯು ಮುಗಿದ ಮೇಲೆ?"
"ಅದು ನಾಳೆಯ ತೀರ್ಮಾನ."
"ಹೊಂ.ಮಧು"