ಪುಟ:ಅನ್ನಪೂರ್ಣಾ.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೨

ಅನ್ನಪೂರ್ಣ

...ಆ ನಾಳೆ ಬರದೇ ಹೋಗಲಿಲ್ಲ. ಎರಡು ಮನೆಗಳಲ್ಲೂ ಆ ದಿನ
ರೌದ್ರತೆ ಪರಾಕಾಷ್ಠೆಯನ್ನು ಮುಟ್ಟಿತ್ತು.
ಕತ್ತಲಾದಾಗ ಅವರು ಸಂಧಿಸಿದರು.ಹಿಂದೆಯಾಗಿದ್ದರೆ ತಡವಾಗಿ
ಮನೆಗೆ ಹೋದರೆ ಬೈಗುಳ ಕೆಳಬೇಕು. ಈ ರಾತ್ರೆ ಬೇಕಾದರೆ ಎಷ್ಟು
ಹೊತ್ತಾದರೂ ಸರಿಯೆ! ಸಿಂಗರಿಸಿಕೊಂಡು ಬಂದಿದ್ದಳಾಕೆ. ಆ ವ್ಯಂಗ್ಯ ನಗೆಯೋ! ಪಾಯ
ಜಾಮ ತೊಟ್ಟು,ಎದೆಗೆ ಅಡ್ಡವಾಗಿ ಶಾಲನ್ನು ಇಳಿಬಿಟ್ಟು, ಬರುವುದರ
ಬದಲು ಆಕೆ, ಕನ್ನಡ ಹುಡುಗಿಯರ ಹಾಗೆ ಸೀರೆಯುಟ್ಟು ಬಂದಿದ್ದಳು.
ಮತ್ತೆ ಮತ್ತೆ ಆಕೆ ನಗುತ್ತಿದ್ದಳು.
ಎರಡೂ ತೋಳುಗಳನ್ನಾಕೆ ಮಾಧವನ ಕತ್ತಿನ ಸುತ್ತಲೂ ಬಳಿಸಿದಳು.
ಆ ಮುಖವನ್ನಾತ ಅತಿ ಸಮಿಪದಲ್ಲೇ ನೋಡಿದ. ಒಬ್ಬರ ತುಟಿಗಳು
ಇನ್ನೋಬ್ಬರದನ್ನು ಒತ್ತಿಕೊಂಡವು. ಪರಸ್ಪರ ತೋಳತೆಕ್ಕೆಯಲ್ಲೇ ಅವರು
ಕ್ಷಣಕಾಲ ವಾಸ್ತವತೆಯನ್ನೇ ಮರೆತರು. ಆ ಪ್ರಥಮ ಚುಂಬನ;ಕೊನೆ
ಯದೂ ಆದ ಆ ಚುಂಬನ.
ಆ ಬಳಿಕ ಆತ ಆ ಮಾತ್ರೆಗಳನ್ನು ಕೊಟ್ಟ.
.......ಅನಿವಾರ್ಯವೆನಿಸಿದಾಗ,ಅವಮಾನ ಹೆಚ್ಚಿದಾಗ.....ಮುಕ್ತಿಯ
ಸಾಧನೆಗಾಗಿ.
...ಹಾಗೆ ಅವರು ಆಗಲಿದರು,
ಮರುದಿನ ಬೆಳೆಗ್ಗೆಯೇ ಶಿರಿನ್‌ಳ ಪಾಲಿಗೆ ಆ ಸಂಧಿಯೊದಗಿತು.
ಮಾತ್ರೆಗಳು ಕರುಳನ್ನು ಕತ್ತರಿಸತೊಡಗಿದಾಗ ಆಕೆ ಚೀರಾಡಿದಳು.ಸಾವು
ಸಲೀಸಾಗಿ ಬರುವುದುಂಟೆ?
ಹಾಹಾಕಾರವೆದ್ದಿತು.ಡಾಕ್ಟರು ಬಂದರು.ಅಂಬ್ಯುಲೆನ್ಸ್ ಕಾರ್
ಬಂತು.ಮತ್ತೆ ಆ ಚಿಕಿತ್ಸೆಯ ಯತ್ನ.
ಈ ವಿಷಯ ತಿಳಿದಾಗ ಮಾಧವನ ತಂದೆ ಮಗನ ರಕ್ಷಣೆಗಾಗಿ
ಯತ್ನಿಸಿದರು.ಆದರೆ ಆತ ಕ್ರಾಪು ಕೆದರಿಸಿಕೊಂಡು ಹುಚ್ಚನ ಹಾಗೆ ಸೈಕ
ಲೇರಿ ಅಂಬ್ಯುಲೆನ್ಸ್ ಗಾಡಿಯನ್ನೇ ಹಿಂಬಾಲಿಸಿದ.
ಶಿರಿನಳ ಕುಟುಂಬ ಹೊರೆತಾಗಿ ಬೇರೆ ಯಾರನ್ನು ಒಳಬರಲು